Kannada Serials

ಕರೊನಾ ಬಗ್ಗೆ ನಟಿ ರಂಜನಿ ರಾಘವನ್ ಹೇಳಿದ್ದೇನು ನೋಡಿ

ಕೊರೋನಾಗೆ ಸಾಲು ಸಾಲು ಜೀವಗಳು ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ಸಾಗುತ್ತಲೇ ಇದೆ. ಇನ್ನು ಕಿರುತೆರೆ ಬೆಳ್ಳಿತೆರೆಯಲ್ಲಿ ಸಾಲು ಸಾಲು ಕಲಾವಿದರು ಸಾವನ್ನಪ್ಪುತ್ತಿದ್ದಾರೆ. ಲಾಕ್ ಡೌನ್ ಇಂದಾಗಿ ಕನ್ನಡ ಕಿರುತೆರೆ ಶೂಟಿಂಗ್ ಎಲ್ಲಾ ನಿಲ್ಲಿಸಿದ್ದು ಎಲ್ಲಾ ಕಲಾವಿದರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.ಇತ್ತೀಚೆಗಷ್ಟೇ ಒಂದು ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ತಾವು ಅನುಭವಿಸಿರುವ ನರಕಯಾತನೆ ಹಂಚಿಕೊಂಡಿದ್ದಾರೆ.

ರಂಜನಿ, ಕೊರೋನ ಬಂದಾಗ ಹೇಗಿರ ಬೇಕು, ಮನಸ್ಥಿತಿ ಹೇಗೆ ಇಟ್ಟುಕೊಳ್ಳಬೇಕು, ಇದರಿಂದ ಯಾವ ರೀತಿ ಆರೋಗ್ಯವನ್ನ ಕಾಪಾಡಿಕೊಳ್ಳ ಬೇಕು ಎಂದು ತಿಳಿಸಿದ್ದಾರೆ. ಇದೆಲ್ಲದರ ನಡುವೆ ನನಗೂ ಕೊರೋನ ಎಲ್ಲಿ ಬಂದಿದೆಯೋ ಎಂಬ ಆತಂಕ ತುಂಬಾ ಇತ್ತು.ಕೆಲವು ದಿನಗಳ ಹಿಂದೆ ಸಣ್ಣದಾಗಿ ಕೆಮ್ಮು, ನೆಗಡಿ, ತಲೆ ನೋವು ಬಂದಿತ್ತು, ಅದರಿಂದ ನನಗೆ ತುಂಬಾ ಆತಂಕವಾಗಿತ್ತು .ಆ ಕ್ಷಣದಲ್ಲಿ ನನಗೆ ಬಂದ ಯೋಚನೆಗಳ ಬಗ್ಗೆ ಆದ ನೋವುಗಳ ಬಗ್ಗೆ ಯಾರಿಗೂ ಹೇಳತೀರದು.

ಎಲ್ಲಿ ಕೊರೋನ ಬರುತ್ತೋ ಅಂತ ಹೆದರುತ್ತೀವಿ ಅಲ್ವಾ ಅದು ತುಂಬಾ ಕಷ್ಟ. ದೇವರ ದಯೆಯಿಂದ ನನಗೆ ಕೊರೋನ ಬಂದಿಲ್ಲ ರಿಪೋರ್ಟ್ ಅಲ್ಲಿ ಕೂಡ ನೆಗಟಿವ್ ವರದಿ ಬಂದಾಗ ನಿಟ್ಟುಸಿರು ಬಿಟ್ಟಿದೆ ಎಂದು ತಮ್ಮ ಅನುಭವವನ್ನ ಅಂಚಿಕೊಂಡಿದ್ದಾರೆ.

Most Popular

To Top