Kannada Serials

ಸತ್ಯ ಸೀರಿಯಲ್ ನಲ್ಲಿ ನಟ ಶಿವರಾಮ್ ಅವರು ನಿರ್ವಹಿಸುತ್ತಿದ್ದ ಪಾತ್ರವನ್ನ ಇನ್ಮುಂದೆ ಮಾಡೋದು ಯಾರು?

ಸತ್ಯ ಧಾರಾವಾಹಿಯಲ್ಲಿ ಗುರುಗಳ ಪಾತ್ರ ನಿರ್ವಹಿಸುತ್ತಿದಂತಹ ಹಾಗೂ ಎಲ್ಲರನ್ನು ರಂಜಿಸುತ್ತಿದಂತಹ ಮತ್ತು ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ಹಿರಿಯ ನಟ ಶಿವರಾಂ. ಶಿವರಾಂ ಅವರು ಡಾ ರಾಜ್ ಕುಮಾರ್ ಅವರ ಕಾಲದಿಂದಲೂ ಅಲ್ಲದೆ ಈಗಿನ ಕಾಲದ ನಟರ ಜೊತೆಗೂ ಸಹ ನಟಿಸಿ ಸೈ ಎನಿಸಿಕೊಂಡವರು.

ಕನ್ನಡದ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ತಂದೆ, ಅಣ್ಣ ಪೋಷಕ ಪಾತ್ರಗಳಲ್ಲಿ ನಟಿಸಿ ಸತ್ಯ ಧಾರವಾಹಿಯಲ್ಲಿ ಗುರುಗಳ ಪಾತ್ರವನ್ನ ನಿರ್ವಹಿಸುತ್ತಿದ್ದರು. ನಟ ಶಿವರಾಂ ಅವರನ್ನು ಇಂಡಸ್ತ್ರೀಯ ವಿಶ್ವ ಕೋಶ ಎಂದೇ ಕರೆಯಲಾಗುತ್ತಿತ್ತು. ಈಗ ಇವರು ಇಲ್ಲದ ಈ ಪರಿಸ್ಥಿತಿಯಲ್ಲಿ ಸತ್ಯ ಧಾರಾವಾಹಿಯಲ್ಲಿ ಇವರು ನಿರ್ವಹಿಸುತ್ತಿದ್ದ ಪಾತ್ರವನ್ನ ಮುಂದುವರೆಸಿಕೊಂಡು ಹೋಗುವವರು ಯಾರು ಎನ್ನುವಂತಹ ಪ್ರಶ್ನೆ ಇದೀಗ ಉದ್ಭವವಾಗಿದೆ.

ಸತ್ಯ ಧಾರವಾಹಿಯಲ್ಲಿ ಇವರ ಪಾತ್ರ ತುಂಬಾ ಅದ್ಭುತವಾಗಿ, ಕುತೂಹಲಕಾರಿಯಾಗಿತ್ತು. ಎಲ್ಲಾ ಅಭಿಮಾನಿಗಳು ಸಹ ಇವರ ಪಾತ್ರಕ್ಕೆ ನಾಗವಲ್ಲಿ ಚಿತ್ರದಲ್ಲಿ ಗುರುಗಳ ಪಾತ್ರ ಮಾಡಿರುವ ಅವಿನಾಶ್ ಅವ್ರು ಬಂದರೆ ಈ ಪಾತ್ರಕ್ಕೆ ಜೀವತುಂಬುವಂತೆ ಆಗುತ್ತದೆ ಎನ್ನುತ್ತಿದ್ದಾರೆ.

Most Popular

To Top