ನಾಗಿಣಿ 2 ಧಾರಾವಾಹಿಯಿಂದ ಹೊರಬಂದಿದ್ದೇಕೆ ನಟ ಮೋಹನ್ ?

Follow Us :

ನಾಗಿಣಿ 2 ಧಾರಾವಾಹಿಯನ್ನು ವಾಹಿಣಿ ಹೊಸ ರೀತಿಯಲ್ಲಿ ಹೊಸ ಕತೆಯೊಂದಿಗೆ ತೆರೆ ಮೇಲೆ ತಂದಿತ್ತು. ಜೆ ಕೆ, ನಮ್ರತಾ ಗೌಡ, ಮೋಹನ್ ಸೇರಿದಂತೆ ದೊಡ್ಡ ತಾರಾ ಬಳಗದಲ್ಲಿ ಶುರುವಾದ ಧಾರಾವಾಹಿ ಹೊಸದರಲ್ಲಿಯೇ ದೊಡ್ಡ ಯಶಸ್ಸು ಪಡೆದು ಕನ್ನಡ ಕಿರುತೆರೆಯ ಟಾಪ್ 5 ಧಾರಾವಾಹಿಗಳಲ್ಲಿ ಒಂದಾಯಿತು.ಶುರುವಾದ ಬಹಳಷ್ಟು ತಿಂಗಳುಗಳಿಂದ ತನ್ನ ಸ್ಥಾನವನ್ನ ಹುಳುಸಿಕೊಂಡು ಯಶಸ್ಸಿನ ಪಯಣವನ್ನ ಮುಂದುವರೆಸುತ್ತಿದೆ.ಇನ್ನು ಈಗ ನಾಗಿಣಿ 2 ಧಾರವಾಹಿಯಿಂದ ಪ್ರಮುಖ ಪಾತ್ರಧಾರಿ ಹೊರಬಂದಿದ್ದಾರೆ.

ದಿಗ್ವಿಜಯ್ ಪಾತ್ರದ ಮೂಲಕ ಸ್ಯಾಂಡಲ್ ವುಡ್ ನಿಂದ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ಮೋಹನ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ.ಈ ಬಗ್ಗೆ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಮೋಹನ್ ಅವರು ಮಾತನಾಡಿದ್ದಾರೆ.ಕೋರೋನದಿಂದ ಎಷ್ಟು ಎಚ್ಚರವಾಗಿದ್ದರು ಸಾಲದು ಕಳೆದ ವರ್ಷ ಅಷ್ಟಾಗಿ ತಿಳಿಯಲಿಲ್ಲ ಅಲ್ಲದೆ ಈ ವರ್ಷ ನನ್ನ ಸಂಬಂದಿಕರೆ ಆರು ಜನ ಜೀವ ಕಳೆದುಕೊಂಡರು, ನನ್ನ ತಂದೆ ತಾಯಿ ಕೂಡ ಕೊರೋನ ಸೋಂಕಿತರಾಗಿ ಗುಣಮುಖರಾದರು.

ಇದರಿಂದಾಗಿ ಅರ್ತಿಕವಾಗಿಯೂ ನಮಗೆ ಪೆಟ್ಟು ಬಿತ್ತು, ನಮಗೆ ಸಿನಿಮಾ ನಟನೆ ಬಿಟ್ಟರೆ ಬೇರೆ ತಿಳಿದಿಲ್ಲ ಎಲ್ಲವೂ ಸರಿ ಇದ್ದರೆ ತಮಿಳು ಹಾಗೂ ಕನ್ನಡದ ಎರಡು ದೊಡ್ಡ ಸಿನಿಮಾಗಳಲ್ಲಿ ನಾನು ನಟಿಸಬೇಕಿತ್ತು ಆದರೆ ಎಲ್ಲವೂ ಮುಂದಕ್ಕೆ ಹೋಯಿತು ಇನ್ನು ನಾನು ಸಂಭಾಷಣೆ ಬರೆದಿರುವ ರವಿ ಸರ್ ನಟಿಸಿರುವ ರವಿ ಬೊಪ್ಪಣ್ಣ ಸಿನಿಮಾ ಬಿಡುಗಡೆಯಾಗಬೇಕಿದೆ, ಈ ನಡುವೆ ವಯಕ್ತಿಕ ಕಾರಣಗಳಿಂದ ನಾನು ನಾಗಿಣಿ 2 ಧಾರವಾಹಿಯಿಂದ ಹೊರಬಂದಿರುವುದು ನಿಜ ಎಂದಿದ್ದಾರೆ.