Kannada Serials

ಕಾವ್ಯಾಂಜಲಿ ಸೀರಿಯಲ್ ನಲ್ಲಿ ಮತ್ತೊಂದು ಬದಲಾವಣೆ !

ಉದಯ ಟಿವಿ ಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಧಾರವಾಹಿ ಕಾವ್ಯಂಜಲಿ ಸೀರಿಯಲ್ ನಲ್ಲಿ ಅಂಜಲಿ ಪಾತ್ರವನ್ನ ಪದೇ ಪದೇ ಬದಲಾವಣೆ ಮಾಡಲಾಗುತ್ತಿತ್ತು ಹಳೆಯ ಪಾತ್ರಧಾರಿ ಬದಲಾಗಿ ಹೊಸ ಪಾತ್ರಧಾರಿ ಬಂದರೂ ಕೂಡ ಜನರು ಅದನ್ನ ಮೆಚ್ಚಿಕೊಳ್ಳುತ್ತಿದ್ದರು.

ಆದರೂ ಕೂಡ ಪಾತ್ರದಲ್ಲಿ ಬದಲಾವಣೆ ಆಗುವುದರಿಂದ ಅಭಿಮಾನಿಗಳಿಗೆ ಸ್ವಲ್ಪವಾದರೂ ಬೇಸರವಾಗುತ್ತದೆ ಮೊದಲಿನಿಂದಲೂ ನೋಡಿಕೊಂಡು ಬಂದಿರುವಂತಹ ಪಾತ್ರ ಬದಲಾವಣೆಯಾದರೆ ಆಗ ಸೀರಿಯಲ್ ನಲ್ಲಿ ಏನೋ ಮಿಸ್ ಆಗುತ್ತಿದೆ ಅನಿಸುವುದು ಸಹಜ. ಕಾವ್ಯಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರದಲ್ಲಿ ಇದುವರೆಗೂ ಮೂರು ನಟಿಯರು ನಟಿಸಿದ್ದು ಇದೀಗ ಈ ಸೀರಿಯಲ್ ನಲ್ಲಿ ಒಂದು ಪ್ರಮುಖ ಪಾತ್ರಧಾರಿಯ ಬದಲಾವಣೆ ಆಗುತ್ತಿದೆ.

ಕಾವ್ಯಂಜಲಿ ಸೀರಿಯಲ್ ನಲ್ಲಿ ವಸು ಪಾತ್ರದಲ್ಲಿ ಇಲ್ಲಿಯವರೆಗೂ ಸಿಂಚನ ಪನವ್ವ ಅವರು ನಟಿಸುತ್ತಿದ್ದರು.ಆದರೆ ಇವರು ಈ ಸೀರಿಯಲ್ ಅನ್ನ ತಮ್ಮ ವೈಯಕ್ತಿಕ ಕಾರಣಗಳಿಂದ ಅರ್ಧಕ್ಕೆ ಬಿಡುತ್ತಿದ್ದು ಇನ್ನು ಮುಂದೆ ಈ ಪಾತ್ರವನ್ನು ಸಹನ ಅಣ್ಣಪ್ಪ ಅವರು ನಡೆಸಿಕೊಂಡು ಹೋಗಲಿದ್ದಾರೆ.

Most Popular

To Top