Film News

ಸ್ವತಃ ಹನುಮಾನ್ ಅಯೋಧ್ಯೆಗೆ ಆಹ್ವಾನಿಸುತ್ತಿದ್ದಂತೆ ಇದೆ ಎಂದ ಮೆಗಾಸ್ಟಾರ್, ಬಾಲರಾಮ ಪ್ರಾಣ ಪತ್ರಿಷ್ಟೆಯಲ್ಲಿ ಭಾಗಿಯಾದ ಚಿರು…..!

ನಿನ್ನೆಯಷ್ಟೆ ಅಂದರೇ ಜ.22 ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಗಿದೆ. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ಎಂದು ಹೇಳಲಾಗುವ ಅಯೋಧ್ಯೆ ರಾಮಮಂದಿರ ಇದೀಗ ಲೋಕಾರ್ಪಣೆಯಾಗಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆಯಾದ ಬಾಲರಾಮನ ವಿಗ್ರಹ ಮೂರ್ತಿ ಎಲ್ಲರನ್ನೂ ತುಂಬಾನೆ ಸೆಳೆಯುತ್ತಿದೆ. ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಈ ದೈವಿಕ ಕಾರ್ಯಕ್ರಮಕ್ಕೆ ಮೆಗಾಸ್ಟಾರ್‍ ಚಿರಂಜೀವಿ ಸಹ ಭಾಗಿಯಾಗಿದ್ದು, ಅಯೋಧ್ಯೆ ರಾಮಮಂದಿರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿಮಾರ್ಣಗೊಂಡ ರಾಮಮಂದಿರ ಜ.22 ರಂದು ಲೋಕಾರ್ಪಣೆಯಾಗಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು, ಸಿನೆಮಾ ತಾರೆಯರು, ಕ್ರೀಡಾಪಟುಗಳು, ಸಾಧು ಸಂತರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಿನಿರಂಗದ ಸ್ಟಾರ್‍ ಗಳಾದ ಅಮಿತಾಬ್, ಮೆಗಾಸ್ಟಾರ್‍ ಚಿರಂಜೀವಿ, ಪವನ್ ಕಲ್ಯಾಣ್,  ರಿಷಭ್ ಶೆಟ್ಟಿ, ಕಂಗನಾ ರಾಣಾವತ್, ರಾಮ್ ಚರಣ್, ಅಭಿಷೇಕ್ ಬಚ್ಚನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇನ್ನೂ ಈ ದೈವಿಕ ಕಾರ್ಯಕ್ರಮದ ಬಗ್ಗೆ ಚಿರಂಜೀವಿಯವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಟ ಮೆಗಾಸ್ಟಾರ್‍ ಚಿರಂಜೀವಿ ದಂಪತಿ ಹಾಗೂ ರಾಮ್ ಚರಣ್ ಪ್ರತ್ಯೇಕ ವಿಮಾನದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ತಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿರುವ ಬಗ್ಗೆ ಅವರು ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ದೊಡ್ಡ ದೈವಿಕ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ನನ್ನ ಇಷ್ಟದೈವ ಹನುಮಾನ್.  ಸ್ವತಃ ಅವರೇ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಂತಿದೆ. ಈ ಸಂತೋಷವನ್ನು ನಾನು ಮಾತುಗಳಲ್ಲಿ ಹೇಳಲಾರೆ. ಅಯೋಧ್ಯ ರಾಮಮಂದಿರ ಕನಸು ಸಾಕಾರಗೊಳಿಸಿದ ಎಲ್ಲರನ್ನೂ ಪ್ರೋತ್ಸಾಹಿಸದೇ ಇರಲಾರೆನು ಎಂದಿದ್ದಾರೆ.

ಇನ್ನೂ ಈ ಕಾರ್ಯಕ್ರಮಕ್ಕೆ ಜನಸೇನಾ ಮುಖ್ಯಸ್ಥ ನಟ ಪವನ್ ಕಲ್ಯಾಣ್ ರವರು ಸಹ ಹೋಗಿದ್ದರು. ಈ ವೇಳೆ ಅವರು ರಾಮ ಮಂದಿರ ಮುಂಭಾಗ ಸೆಲ್ಫಿ ತೆಗೆದುಕೊಂಡಿದ್ದು, ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅದೇ ಮಾದರಿಯಲ್ಲಿ ಚಿರಂಜೀವಿ ದಂಪತಿ ಹಾಗೂ ರಾಮ್ ಚರಣ್ ಕ್ರೀಡಾಪಟು ಪಿ.ಟಿ.ಉಷಾ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಈ ಪೊಟೋ ಸಹ ವೈರಲ್ ಆಗುತ್ತಿದೆ.

Most Popular

To Top