Film News

ತನ್ನ ಮಕ್ಕಳಿಗೆ ರುದ್ರಾಕ್ಷಿ, ಹಯಗ್ರೀವ ಎಂದು ಹೆಸರಿಡಲು ಕಾರಣ ಏನು ಎಂಬುದನ್ನು ತಿಳಿಸಿದ ಧ್ರುವ ಸರ್ಜಾ…..!

ಸ್ಯಾಂಡಲ್ ವುಡ್  ಫೇಮಸ್ ನಟ ಧ್ರುವ ಸರ್ಜಾರವರು ತಮ್ಮ ಮಕ್ಕಳಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನಂದು ತಮ್ಮ ಮಕ್ಕಳಿಗೆ ನಾಮಕರಣವನ್ನು ಮಾಡಿದ್ದಾರೆ. ತನ್ನ ಪ್ರೀತಿಯ ಅಣ್ಣ ಚಿರು ಸರ್ಜಾ ಸಮಾಧಿ ಇರುವ ಜಾಗದಲ್ಲಿ ತಮ್ಮ ಮಕ್ಕಳ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ. ತನ್ನ ಇಬ್ಬರೂ ಮಕ್ಕಳಿಗೆ ಎಲ್ಲರೂ ಮೆಚ್ಚುವಂತಹ ಹೆಸರುಗಳನ್ನಿಟ್ಟಿದ್ದಾರೆ. ತನ್ನ ಹೆಣ್ಣು ಮಗುವಿಗೆ ರುದ್ರಾಕ್ಷಿ ಎಂದೂ, ಮಗನಿಗೆ ಹಯಗ್ರೀವ ಎಂದು ಸಂಪ್ರದಾಯಬದ್ದವಾದ ಹೆಸರನ್ನಿಟ್ಟಿದ್ದಾರೆ.

ಈ ನಾಮಕರಣ ಕಾರ್ಯಕ್ರಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಧ್ರುವ ಸರ್ಜಾ, ಜ.22 ರಂದು ನಾಮಕರಣ ದಿನಾಂಕ ಬಂತು. ಇಬ್ಬರೂ ಮಕ್ಕಳಿಗೂ ಒಂದೇ ಬಾರಿ ಹೆಸರನ್ನಿಡಲು ತೀರ್ಮಾನ ಮಾಡಿದ್ದೆವು. ಅದೇ ದಿನ ನಮ್ಮ ಬಾಸ್ ರಾಮಮಂದಿರದ ಉದ್ಘಾಟನೆ ಸಹ ಆಗಿದೆ. ಇದು ನಮಗೆ ಅತ್ಯಂತ ಖುಷಿ ತಂದಿದೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಎಂಬ ಹೆಸರನ್ನು ಇಟ್ಟಿದ್ದೇವೆ. ಯಾವುದೇ ಫ್ಯಾನ್ಸಿ ಹೆಸರು ಇಡಬಾರದು ಎಂದು ನಿರ್ಧಾರ ಮಾಡಿದ್ದೆವು. ನಮ್ಮ ಮಕ್ಕಳಿಗೆ ಒತ್ತಕ್ಷರ ಹೆಸರನ್ನು ಇಡಬೇಕು ಎಂದುಕೊಂಡಿದ್ದೆವು. ಒತ್ತಕ್ಷರ ಇದ್ದರೇ ತುಂಬಾ ಒಳ್ಳೆಯದು ಎಂಬ ನಂಬಿಕೆ ಸಹ ಇದೆ. ಅಯೋಧ್ಯೆಯಲ್ಲಿ 12.20 ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಷ್ಟೆ ನಡೆಯಿತು. ಅದೇ ಸಮಯಕ್ಕೆ ನಮ್ಮ ಮಕ್ಕಳಿಗೆ ನಾಮಕರಣ ಮಾಡಿದೆವು ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

ಇನ್ನೂ ನಾನು ಹಾಗೂ ನನ್ನ ಪತ್ನಿ ಮಕ್ಕಳ ಹೆಸರಿನ ಆಯ್ಕೆ ಬಗ್ಗೆ ತುಂಬಾನೆ ಯೋಚನೆ ಮಾಡಿದ್ವಿ. ಒತ್ತಕ್ಷರ ಬರುವಂತ ಹೆಸರಿಡಬೇಕು. ಹೆಸರಿನಲ್ಲಿ ಶಕ್ತಿ ಇರಬೇಕು ಎಂಬುದು ನಮ್ಮ ಯೋಚನೆಯಾಗಿತ್ತು. ಬಳಿಕ ಮಗಳಿಗೆ ರುದ್ರಾಕ್ಷಿ, ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿವೆ. ಇವು ಪಂಚಮುಖಿ ಆಂಜನೇಯನ ಅವತಾರಗಳಲ್ಲಿ ಒಂದಾಗಿದೆ. ಈ ಹೆಸರು ನಿಗಧಿಯಾದ ಬಳಿಕವೂ ಕೆಲವೊಂದು ಹೆಸರುಗಳನ್ನು ಹುಡುಕಿದ್ದೆವು. ಆದರೆ ಈ ಹೆಸರಿನಷ್ಟು ಒಳ್ಳೆಯ ಹೆಸರು ಯಾವೂದು ಅನ್ನಿಸಿಲ್ಲ. ಅಯೋಧ್ಯೆಯಲ್ಲಿ ಪೂಜೆ ನಡೆಯುವ ಸಮಯಕ್ಕೆ ಇಲ್ಲಿ ಸಹ ಪೂಜೆ ಮುಗಿದಿದೆ. ಇದು ನನಗೆ ಮತಷ್ಟು ಸಂತಸ ತಂದುಕೊಟ್ಟಿದೆ. ಆದಷ್ಟು ಶೀಘ್ರ ನಾವು ಕುಟುಂಬ ಸಮೇತ ಅಯೋಧ್ಯೆಗೆ ಭೇಟಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಇನ್ನೂ ನಾಮಕರಣ ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್‍ ನಟ ಸಂಜತ್ ದತ್ ಹಾಜರಾಗಿದ್ದರು. ಜೊತೆಗೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಸೇರಿದಂತೆ ಸಿನೆಮಾ ರಂಗದ ಗಣ್ಯರು ಭಾಗಿಯಾಗಿ ದಂಪತಿ ಹಾಗೂ ಮಕ್ಕಳಿಗೆ ಶುಭಕೋರಿದ್ದಾರೆ. ಈ ಕಾರ್ಯಕ್ರಮದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top