ಗಿಣಿರಾಮ ಸೀರಿಯಲ್ ನಟಿಗೆ ಕರೊನಾ ಪಾಸಿಟಿವ್!

Follow Us :

ಕೇವಲ ನಮ್ಮ ರಾಜ್ಯ ಒಂದರಲ್ಲೇ ದಿನಕೆ ಸುಮಾರು 20000 ಕೇಸ್ ಗಳು ದಾಖಲಾಗುತ್ತಿದೆ.ಭಾರತದಲ್ಲಿ ದಿನಕ್ಕೆ ಮೂರು ಲಕ್ಷ ಕೇಸ್ ದಾಟುತ್ತಿದೆ.ಜನಗಳಿಗೆ ಬೆಡ್ ಎಲ್ಲದೆ ಏಲಂದರಲ್ಲಿ ಸಾಯುತ್ತಿದ್ದಾರೆ, ಇವೆಲ್ಲವನ್ನೂ ನೋಡಿಯೂ ನಮ್ಮ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ.ಇದರ ನಡುವೆ ಸಿನಿಮಾ ಥಿಯೇಟರ್ ಗಳು ಜನ ಇಲ್ಲದೆ ಕಾಲಿಹೊಡೆಯುತ್ತಿದ್ದರೆ, ಸೇರಿಯಲ್ ಗಳು ಮಾತ್ರ ಜನರನ್ನು ರಂಜಿಸುತ್ತಿವೆ.

ಕನ್ನಡದ ಖ್ಯಾತ ಧಾರಾವಾಹಿಯ ಜನಪ್ರಿಯ ನಟಿ ಕೊರೋನಗೆ ತ್ತುತ್ತಾಗಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ, ಅವರ ಧಾರಾವಾಹಿ ತಂಡ ಮತ್ತು ಅವರ ಕುಟುಂಬ ಆತಂಕಕ್ಕೇ ಒಳಗಾಗಿದೆ.ಮೊನ್ನೆ ತಾನೆ ಕನ್ನಡದ ಯುವ ನಟ ಡಿ ಸ್ ಮಂಜುನಾಥ್ ಕೊರೋನ ಮಾರಿಗೆ ಬಲಿಯಾಗಿದ್ದರು.ಯಡಿಯೂರಪ್ಪ, ರೇಣುಕಾಚಾರ್ಯ ಸೇರಿದಂತೆ ಕೊರೋನ ಗೆ ತ್ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಿಣಿರಾಮ ನಾಯಕಿ ನಟಿ ನಯನ ನಾಗರಾಜ್ ಅವರಿಗೆ ಕೊರೋನ ಸೋಂಕು ತಗುಲಿದೆ.ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿಸಿರುವ ನಟಿ “ಈ ಸೋಂಕು ಹೇಗೆ ಬಂತು ಎಂದು ತಿಳಿದಿಲ್ಲ, ಆದರೆ ಕೊರೋನದ ಅಷ್ಟು ಲಕ್ಷಣಗಳು ನನಗಿದೆ, ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ, ತಲೆ ನೋವು ಪ್ರತಿಯೊಂದು ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅಸಿಗೆ ಬಿಟ್ಟು ಮೇಲೆಳಲು ಆಗುತ್ತಿಲ್ಲ, ತುಂಬಾ ಗಂಭೀರ ಪರಿಸ್ಥಿತಿಯಲ್ಲಿದ್ದೇನೆ. ನಿಜಕ್ಕೂ ಈ ಕಾಯಿಲೆ ಯಾರಿಗೂ ಬರಬಾರದು ಎಂದು ತಮ್ಮ ನೋವನ್ನ ಕಣ್ಣೀರು ಹಾಕುತ್ತಾ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಉತ್ತರ ಕರ್ನಾಟಕ ಬಾಷೆಯಲ್ಲಿ ಮೂಡಿಬರುತ್ತಿರುವ ಗಿಣಿರಾಮ ಧಾರಾವಾಹಿಯಲ್ಲಿ ನಯನ ಅವರು ಮಹತಿ ಪಾತ್ರ ನಿರ್ವಹಿಸುತ್ತಿದ್ದಾರೆ.ಆದಷ್ಟು ಬೇಗ ಗುಣಮುಖರಾಗಿ ಸೀರಿಯಲ್ ಗೆ ಮರಳಲಿ ಎಂದು ನಾವೆಲ್ಲರೂ ಕೇಳಿಕೊಳ್ಳೋಣ