Film News

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ದ ಮಹಿಳೆ ದೂರು, ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು….!

ಮಹಿಳೆಯೊಬ್ಬರು ನೀಡಿದ ದೂರಿನಂತೆ ಚಾಲೆಂಜಿಗ್ ಸ್ಟಾರ್‍ ದರ್ಶನ್ ವಿರುದ್ದ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್‍ ದಾಖಲಾಗಿದೆ. ದರ್ಶನ್ ಹಾಗೂ ಅವರ ಮನೆಯ ನಾಯಿ ನೋಡಿಕೊಳ್ಳುವ ವ್ಯಕ್ತಿಯ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಂತೆ ದರ್ಶನ್ ಹಾಗೂ ಇಬ್ಬರ ವಿರುದ್ದ ದೂರು ದಾಖಲಾಗಿದೆ.

ಚಾಲೆಂಜಿಗ್ ಸ್ಟಾರ್‍ ದರ್ಶನ್ ವಿರುದ್ದ ದೂರು ನೀಡಿದ ಮಹಿಳೆಯನ್ನು ಅಮಿತಾ ಜಿಂದಾಲ್ ಎಂದು ಹೇಳಲಾಗಿದೆ. ದರ್ಶನ್ ರವರ ಮನೆಯ ನಾಯಿ ಕಚ್ಚಿದೆ ಎಂದು ಅಮಿತಾ ಆರ್‍.ಆರ್‍. ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಅ.28 ರಂದು ದೂರುದಾರ ಮಹಿಳೆ ಅಮಿತಾ ಸ್ವರ್ಶ ಆಸ್ಪತ್ರೆಯಲ್ಲಿ ವಿಶ್ವಪಾಶ್ವರ್ಯವಾಯು ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಮಹಿಳೆ ಭಾಗವಹಿಸಲು ಆಸ್ಪತ್ರೆಯ ಬಳಿ ಹೋಗಿದ್ದರು. ಈ ಸಮಯದಲ್ಲಿ ಅಮಿತಾ ಕಾರನ್ನು ದರ್ಶನ್ ರವರ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದ ಮುಂಭಾಗದ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ವಾಪಸ್ಸು ಹೋಗಲು ಮಹಿಳೆ ಕಾರಿನ ಬಳಿ ಬಂದಾಗ ರಸ್ತೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮೂರು ನಾಯಿಗಳಿದ್ದು, ಅದರಲ್ಲಿ ಎರಡು ನಾಯಿಗಳನ್ನು ಕಟ್ಟಿಹಾಕಿದ್ದರಂತೆ, ಒಂದು ನಾಯಿ ಹಾಗೆ ಬಿಟ್ಟಿದ್ದರಂತೆ. ನಾಯಿಗಳನ್ನು ನೋಡಿಕೊಳ್ಳುವ ವ್ಯಕ್ತಿಯೊಬ್ಬರು ಅಲ್ಲಿಯೆ ಕುಳಿತಿದ್ದರು. ನನ್ನ ಕಾರನ್ನು ತೆಗೆಯಬೇಕು ನಾಯಿಗಳನ್ನು ಬೇರೆ ಕಡೆ ಕರೆದುಕೊಂಡಿ ಹೋಗಿ ಎಂದು ಹೇಳಿದ್ದರಂತೆ. ಆ ವೇಳೆ ವ್ಯಕ್ತಿ ಹಾಗೂ ಮಹಿಳೆಯ ನಡುವೆ ಪಾರ್ಕಿಂಗ್ ವಿಚಾರವಾಗಿ ವಾಗ್ವಾದ ಸಹ ನಡೆದಿದೆ ಎನ್ನಲಾಗಿದೆ.

ಈ ವೇಳೆ ಆ ಅಪರಿಚಿತ ವ್ಯಕ್ತಿಯ ಜೊತೆ ಮತ್ತೋರ್ವ ವ್ಯಕ್ತಿ ಬಂದು ವಾಗ್ವಾದಕ್ಕೆಇಳಿದಿದ್ದರಂತೆ. ಈ ವೇಳೆ ನಾಯಿಯೊಂದು ಮಹಿಳೆಯ ಮೇಲೆ ಎರಗಿ ನೆಲದ ಮೇಲೆ ಬಿದ್ದಿದೆ. ಕಟ್ಟಿ ಹಾಕಿದ ಮತ್ತೊಂದು ನಾಯಿ ಸಹ ಕಚ್ಚಲು ಮುಂದಾಗಿತ್ತಂತೆ. ನಾಯಿಗಳು ಕಚ್ಚುತ್ತವೆ ಎಂದು ಗೊತ್ತಿದ್ದರೂ ಸಹ ಆತ ನಾಯಿಗಳನ್ನು ಹಿಡಿದುಕೊಳ್ಳಲು ಮುಂದಾಗಿಲ್ಲ. ಬೇಜವಾಬ್ದಾರಿಯಿಂದ ನಾಯಿಗಳನ್ನು ಕಚ್ಚು ಬಿಟ್ಟಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ನಾಯಿಗಳು ಎಗರಿ ಮಹಿಳೆಯ ಹೊಟ್ಟೆಯ ಭಾಗಕ್ಕೆ ಕಚ್ಚಿ ಗಾಯಪಡಿಸಿ, ಬಟ್ಟೆಯನ್ನು ಹರಿದು ಹಾಕಿವೆಯಂತೆ. ಮನೆಯ ಮಾಲೀಕರು ಹಾಗೂ ನಾಯಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದು, ಈ ದೂರಿನಂತೆ ಐಪಿಸಿ ಸೆಕ್ಷನ್ 289ರಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Most Popular

To Top