Film News

ಶ್ವೇತವರ್ಣದ ಬಟ್ಟೆ, ಕೈಯಲ್ಲಿ ಜಪಮಾಲೆ, ಆಧ್ಯಾತ್ಮಿಕತೆ ಮೊರೆ ಹೋದ್ರಾ ಸಮಂತಾ?

ಸುಮಾರು ದಶಕಗಳಿಂದ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುವ ಸಮಂತಾ ಜೀವನದಲ್ಲಿ ಕಳೆದ ವರ್ಷ ತುಂಬಾನೆ ವಿವಾದಗಳು, ನೋವುಗಳು ಎದುರಾದವು. ನಾಗಚೈತನ್ಯ ಜೊತೆಗೆ ವಿಚ್ಚೇದನದ ಕಾರಣದಿಂದ ಆಕೆ ತುಂಬಾನೆ ಡಿಪ್ರೆಷನ್ ಗೆ ಹೋಗಿದ್ದರು. ಬಳಿಕ ಆಕೆ ಸಿನೆಮಾಗಳಲ್ಲಿ ತೊಡಗಡಿಸಿಕೊಂಡರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದು, ಈ ವಿಚಾರವಾಗಿ ಆಕೆಯ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಅನೇಕ ರೂಮರ್‍ ಗಳು ಬಂದಿದ್ದವು. ಇದೀಗ ಸಮಂತಾ ಶಾಕುಂತಲಂ ಪ್ರಮೋಷನ್ ನಿಮಿತ್ತ ಕಾಣಿಸಿಕೊಂಡ ರೀತಿ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ಕಳೆದ 2021 ರಲ್ಲಿ ನಟಿ ಸಮಂತಾ ನಾಗಚೈತನ್ಯ ರಿಂದ ವಿಚ್ಚೇದನ ಪಡೆದುಕೊಂಡು ಆತನಿಂದ ದೂರವಾದರು. ಬಳಿಕ ಅವರ ವಿಚ್ಚೇದನ ಸುದ್ದಿ ಅನೇಕ ತಿಂಗಳುಗಳ ಕಾಲ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿತ್ತು. ವಿಚ್ಚೇದನಕ್ಕೆ ಮೂಲ ಕಾರಣ ಸಮಂತಾ ರವರೇ ಎಂಬ ಆರೋಪಗಳು ಆಕೆಯ ಮೇಲೆ ಜೋರಾಗಿಯೇ ಬಂದವು. ಈ ಆರೋಪಗಳಿಗೆ ಬೇಸತ್ತ ಸಮಂತಾ ಮೊದಲಿಗೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ವಿನಂತಿ ಮಾಡಿದರೂ ಆದರೂ ಸಹ ಆರೋಪಗಳು ನಿಲ್ಲದ ಕಾರಣ ಕೆಲವೊಂದು ಯೂಟ್ಯೂಬ್ ಚಾನಲ್ ಗಳ ಮೇಲೆ ಆಕೆ ಕಾನೂನುರೀತ್ಯ ಹೋರಾಟಕ್ಕೆ ಸಹ ಮುಂದಾಗಿದ್ದರು. ಇದಾದ ಬಳಿಕ ಆಕೆ ಸಿನೆಮಾಗಳಲ್ಲಿ ಬ್ಯುಸಿಯಾದರು. ಇದೇ ಸಮಯದಲ್ಲಿ ಆಕೆಗೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ಮಯೋಸೈಟೀಸ್ ಎಂಬ ವ್ಯಾದಿಗೆ ಆಕೆ ಗುರಿಯಾದರು. ಈ ವಿಚಾರ ಸಹ ಅನೇಕ ರೀತಿಯ ರೂಮರ್‍ ಗಳು ಹರಿದಾಡಲು ಶುರುವಾಗಿತ್ತು. ಇನ್ನೂ ಈ ವ್ಯಾದಿಗೆ ಸಮಂತಾ ಮನೆಯಲ್ಲಿ ಸುಮಾರು ದಿನಗಳ ಕಾಲ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.

ಸದ್ಯ ಸಮಂತಾ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಸಹ ಕಾಪಾಡಿಕೊಳ್ಳಲು ಆಧ್ಯಾತ್ಮಿಕತೆಯತ್ತ ಸಾಗಿದ್ದಾರೆ ಎನ್ನಲಾಗುತ್ತಿದೆ. ಆಧ್ಯಾತ್ಮಿಕ ಗುರುಗಳು, ಸ್ವಾಮೀಜಿಗಳು ಹೇಳಿದ ಸೂಚನೆಗಳನ್ನ ಸಮಂತಾ ಪಾಲನೆ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಟಿಕರಿಸುವಂತಹ ಮತ್ತೊಂದು ಸಾಕ್ಷಿ ಸಹ ದೊರೆತಿದೆ ಎನ್ನಬಹುದಾಗಿದೆ. ಸಮಂತಾ ಸದ್ಯ ಶಾಕುಂತಲಂ ಸಿನೆಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳದೆರಡು ದಿನಗಳ ಹಿಂದೆಯಷ್ಟೆ ಶಾಕುಂತಲಂ ಸಿನೆಮಾದ ಟ್ರೈಲರ್‍ ರಿಲೀಸ್ ಈವೆಂಟ್ ನಲ್ಲಿ ಆಕೆ ಸಹ ಭಾಗಿಯಾಗಿದ್ದರು. ಈ ಈವೆಂಟ್ ನಲ್ಲಿ ಸಮಂತಾ ಕೈಯಲ್ಲಿ ಜಪಮಾಲೆ ಹಾಗೂ ವೈಟ್ ಕಲರ್‍ ಡ್ರೆಸ್ ನಲ್ಲಿ ಬಂದಿದ್ದರು. ಮಿಡಿಯಾ ಜೊತೆ ಸಂವಾದದ ಸಮಯದಲ್ಲೂ ಸಹ ಆಕೆಯ ಕೈಯಲ್ಲಿ ಜಪಮಾಲೆ ಇತ್ತು. ಇದನ್ನೆಲ್ಲ ಗಮನಿಸಿದರೇ ಆಕೆ ಮಾನಸಿಕ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಲು ಆಧ್ಯಾತ್ಮಿಕತೆಯ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಸಮಂತಾ ಶಾಕುಂತಲಂ ಸಿನೆಮಾದ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಆಕೆ ಯಶೋಧ ಸಿನೆಮಾದ ಪ್ರಮೋಷನ್ ಸಮಯದಲ್ಲಿ ಭಾಗಿಯಾಗಿದ್ದರು. ಇನ್ನೂ ಶಾಕುಂತಲಂ ಸಿನೆಮಾವನ್ನು ತೆಲುಗು ಖ್ಯಾತ ನಿರ್ದೇಶಕ ಗುಣಶೇಖರ್‍ ನಿರ್ದೇಶನ ಮಾಡಿದ್ದು, ಸಂಗೀತ ನಿರ್ದೇಶಕ ಮಣಿಶರ್ಮಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದಿಲ್ ರಾಜ್ ಬಂಡವಾಳ ಹೂಡಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ ತೆರೆಯ ಮೇಲೆ ಅಬ್ಬರಿಸಲಿದೆ.

Most Popular

To Top