Film News

ರೈತನ ಖಾತೆಗೆ 1 ಲಕ್ಷ ಹಾಕಲಿದ್ದಾರೆ ರೌಡಿ ಹಿರೋ ವಿಜಯ್, ಖುಷಿ ಸಿನೆಮಾ ಸಕ್ಸಸ್ ಹಿನ್ನೆಲೆ ರೈತರ ಖಾತೆಗೆ ಹಣ ವರ್ಗಾವಣೆ…..!

ಟಾಲಿವುಡ್ ಸಿನಿರಂಗದಲ್ಲಿ ತಮ್ಮ ನಟನೆಯ ಮೂಲಕ ಭಾರಿ ಫೇಂ ಪಡೆದುಕೊಂಡ ನಟ ವಿಜಯ್ ದೇವರಕೊಂಡ ಖುಷಿ ಸಿನೆಮಾದ ಸಕ್ಸಸ್ ನಲ್ಲಿ ತೇಲಾಡುತ್ತಿದ್ದಾರೆ. ರೌಡಿ ಹಿರೋ ಎಂದೇ ಕರೆಯಲಾಗುವ ವಿಜಯ್ ದೇವರಕೊಂಡ ಇದೀಗ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಖುಷಿ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದ್ದು, ಈ ಸಕ್ಸಸ್ ಅನ್ನು ಆತ ರೈತನೊಂದಿಗೆ ಸಂಭ್ರಮಿಸಲಿದ್ದಾರೆ. ಸಿನೆಮಾದಲ್ಲಿ ಆತ ಪಡೆದುಕೊಂಡ ಸಂಭಾವನೆಯನ್ನು ರೈತರ ಖಾತೆಗೆ ಜಮೆ ಮಾಡುವುದಾಗಿ ಹೇಳಿದ್ದು ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

ತೆಲುಗು ಸಿನಿರಂಗದಲ್ಲಿ ರೌಡಿ ಹಿರೋ ಎಂದೇ ಕರೆಯಲಾಗುವ ವಿಜಯ್ ದೇವರಕೊಂಡ ಲೈಗರ್‍ ಸಿನೆಮಾದ ಬಳಿಕ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ನಟಿಸಿದ್ದು, ಒಳ್ಳೆಯ ಸಕ್ಸಸ್ ಪಡೆದುಕೊಳ್ಳುತ್ತಿದೆ. ಸೆ.1 ರಂದು ತೆರೆಗೆ ಬಂದ ಖುಷಿ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡುತ್ತಿದೆ. ಲೈಗರ್‍ ಸಿನೆಮಾದ ಸೋಲಿನ ಬಳಿಕ ವಿಜಯ್ ದೇವರಕೊಂಡಗೆ ಖುಷಿ ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿದೆ. ಇನ್ನೂ ಈ ಸಿನೆಮಾದ ಸಕ್ಸಸ್ ಈವೆಂಟ್ ನಲ್ಲಿ ವಿಜಯ್ ದೇವರಕೊಂಡ ರೈತರ ಖಾತೆಗೆ ಒಂದು ಲಕ್ಷ ಹಣ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಖುಷಿ ಸಿನೆಮಾಗೆ ವಿಜಯ್ ದೇವರಕೊಂಡ ಒಂದು ಕೋಟಿ ಸಂಭಾವನೆ ಪಡೆದುಕೊಂಡಿದ್ದರು. 50 ಕೋಟಿ ಬಜೆಟ್ ನಲ್ಲಿ ಈ ಸಿನೆಮಾ ನಿರ್ಮಾಣವಾಗಿದ್ದು, ಒಳ್ಳೆಯ ಗಳಿಕೆ ಸಹ ಪಡೆದುಕೊಂಡಿದೆ. ಇನ್ನೂ ಸಿನೆಮಾ ಸಕ್ಸಸ್ ಈವೆಂಟ್ ವಿಶಾಖಪಟ್ಟಣಂ ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನಾನು ಒಂದು ಕೋಟಿ ಹಣವನ್ನು ನೂರು ರೈತ ಕುಟುಂಬಗಳಿಗೆ ನೀಡಲು ನಿರ್ಧಾರ ಮಾಡಿದ್ದೇನೆ. ಇದನ್ನು ನಾನು ಖುಷಿಯಿಂದ ನೀಡುತ್ತಿದ್ದೇನೆ. ನಾವು ಪಟ್ಟಿ ಮಾಡಿರುವಂತಹ ರೈತರ ಖಾತೆಗೆ ನನ್ನ ವೈಯುಕ್ತಿಕ ಖಾತೆಯಿಂದಲೇ ಹಣ ವರ್ಗಾವಣೆಯಾಗಲಿದೆ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ಇನ್ನೂ ವಿಜಯ್ ದೇವರಕೊಂಡ ಈ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ. ಇನ್ನೂ ಈ ಹಿಂದೆ ಸಹ ವಿಜಯ್ ತಮ್ಮ ನೂರು ಮಂದಿ ಅಭಿಮಾನಿಗಳಿಗೆ ಉಚಿತವಾಗಿ ಮನಾಲಿ ಪ್ರವಾಸಕ್ಕೆ ಕಳುಹಿಸಿದ್ದರು.

ಇನ್ನೂ ಈ ಸಂಬಂಧ ಲಿಂಕ್ ಸಹ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಅಪ್ಲಿಕೇಷನ್ ನಲ್ಲಿ ರೈತರು ತಮ್ಮ ವಿವರಗಳನ್ನು ನಮೂದಿಸಿ ನೊಂದಣಿಯಾಗಬಹುದು. ಆಯ್ಕೆಯಾದ ನೂರು ಮಂದಿ ರೈತರ ಖಾತೆಗೆ ವಿಜಯ್ ದೇವರಕೊಂಡ ಖಾತೆಯಿಂದ ಒಂದು ಲಕ್ಷ ಹಣ ವರ್ಗಾವಣೆಯಾಗಲಿದೆ.

Most Popular

To Top