ಸ್ಟಾರ್ ನಟಿ ಸಮಂತಾ ಸ್ನೇಹಿತರನ್ನು ದೂರವಿಟ್ಟರೇ, ದೂರವಿಡಲು ಕಾರಣವೇನು?

ನಟಿ ಸಮಂತಾ ಮಯೋಸೈಟಿಸ್ ಎಂಬ ವ್ಯಾಧಿಯ ಬಳಿಕ ಸಿನೆಮಾಗಳಲ್ಲಿ ಕಂ ಬ್ಯಾಕ್ ಮಾಡಿದ್ದಾರೆ. ಸಮಂತಾ ಅಕ್ಕಿನೇನಿ ನಾಗಾರ್ಜುನ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ವಿಚ್ಚೇದನ ಪಡೆದುಕೊಂಡು ಬೇರೆಯಾದರು. ವಿಚ್ಚೇದನದ ಬಳಿಕ ಸಮಂತಾ ಡಿಪ್ರೆಷನ್ ನಿಂದ ಹೊರಬರಲು…

ನಟಿ ಸಮಂತಾ ಮಯೋಸೈಟಿಸ್ ಎಂಬ ವ್ಯಾಧಿಯ ಬಳಿಕ ಸಿನೆಮಾಗಳಲ್ಲಿ ಕಂ ಬ್ಯಾಕ್ ಮಾಡಿದ್ದಾರೆ. ಸಮಂತಾ ಅಕ್ಕಿನೇನಿ ನಾಗಾರ್ಜುನ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ವಿಚ್ಚೇದನ ಪಡೆದುಕೊಂಡು ಬೇರೆಯಾದರು. ವಿಚ್ಚೇದನದ ಬಳಿಕ ಸಮಂತಾ ಡಿಪ್ರೆಷನ್ ನಿಂದ ಹೊರಬರಲು ತುಂಬಾನೆ ಕಷ್ಟ ಪಟ್ಟರು. ಈ ಡಿಪ್ರೆಷನ್ ನಿಂದ ಹೊರಬರಲು ಆಕೆ ಹೆಚ್ಚಿನ ಸಮಯ ತನ್ನ ಮಿತ್ರರೊಂದಿಗೆ ಸೇರಿ ವೆಕೇಷನ್ ಗೆ ಹಾರುತ್ತಿದ್ದರು. ಶಿಲ್ಪಾರೆಡ್ಡಿ, ಪ್ರೀತಂ ಜುಕಲ್ಕರ್‍, ಸಾಧನ ಈ ಮೂವರು ತುಂಬಾ ಆತ್ಮೀಯರಾಗಿದ್ದರು ಸಮಂತಾಗೆ. ಇದೀಗ ಆಕೆ ಆ ವ್ಯಕ್ತಿಯನ್ನು ದೂರವಿಟ್ಟಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಇನ್ನೂ ಅವರೊಂದಿಗೆ ಸಮಂತಾ ಈ ಹಿಂದೆ ದುಬೈ ವೆಕೇಷನ್ ಗೆ ಸಮಂತ ಸ್ಟೈಲಿಷ್ ಪ್ರೀತಂ ಹಾಗೂ ಮೇಕಪ್ ಆರ್ಟಿಸ್ಟ್ ಸಾಧನ ಜೊತೆಗೆ ಹೊರಟಿದ್ದರು. ಅನೇಕ ಬಾರಿ ಸಮಂತಾ ಅವರೊಂದಿಗೆ ವಿವಿಧ ಕಡೆ ವೆಕೇಷನ್ ಗೆ ಹೋಗಿದ್ದರು. ಆದರೆ ಪ್ರೀತಂ ವಿಚಾರದಲ್ಲಂತೂ ಸಮಂತಾ ತುಂಬಾನೆ ವಿಮರ್ಶೆಗಳನ್ನು ಎದುರಿಸಿದ್ದರು. ಸಮಂತಾ ಹಾಗೂ ಪ್ರೀತಂ ನಡುವೆ ಅಫೈರ್‍ ನಡೆಯುತ್ತಿದೆ ಈ ಕಾರಣಕ್ಕಾಗಿಯೇ ನಾಗಚೈತನ್ಯ ಸಮಂತಾಗೆ ವಿಚ್ಚೇದನ ನೀಡಿದ್ದಾರೆ ಎಂದು ಕಥನಗಳೂ ಸಹ ಕೇಳಿಬಂದವು. ಬಳಿಕ ಅಕ್ಕಿನೇನಿ ಅಭಿಮಾನಿಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಪ್ರೀತಂ ರವರನ್ನು ಟಾರ್ಗೆಟ್ ಮಾಡಿ ವಿಮರ್ಶೆಗಳನ್ನು ಮಾಡಿದ್ದರು. ಬಳಿಕ ಪ್ರೀತಂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸಮಂತಾ ರವರನ್ನು ನಾನು ಸಹೋದರಿಯಂತೆ ನೋಡುತ್ತೇನೆ ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಇನ್ನೂ ತುಂಬಾನೆ ಆರೋಪಗಳು ಬಂದರೂ ಸಹ ಸಮಂತಾ ಪ್ರೀತಂ ರನ್ನು ದೂರ ಮಾಡಿರಲಿಲ್ಲ. ಸಮಂತಾ, ಸಾಧನ, ಪ್ರೀತಂ ದುಬೈಗೆ ವೆಕೇಷನ್ ಗೆ ಹೋಗಿದ್ದರು. ಆ ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಸಮಂತಾ ಸಾಧನ ಹಾಗೂ ಪ್ರೀತಂ ರನ್ನು ದೂರ ಇಟ್ಟಿದ್ದಾರೆ ಎಂದು ಸಿನಿವಲಯದಲ್ಲಿ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಸಮಂತಾ ಸುಮಾರು ದಿನಗಳಿಂದ ಪ್ರೀತಂ ಹಾಗೂ ಸಾಧನರವರಿಂದ ದೂರವೇ ಉಳಿದಿದ್ದಾರೆ. ಸಾಧನ, ಪ್ರೀತಂ ಹಾಗೂ ಶಿಲ್ಪಾರೆಡ್ಡಿರವರನ್ನು ಭೇಟಿಯಾದ ಯಾವುದೇ ದಾಖಲೆಗಳಿಲ್ಲ. ಈ ಕಾರಣದಿಂದ ಸಮಂತಾ ಅವರನ್ನು ದೂರ ಇಟ್ಟಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಿದೆ. ಆದರೆ ಸಮಂತಾ ಅನಾರೋಗ್ಯ, ಸಿನೆಮಾ ಶೆಡ್ಯೂಲ್ ಕಾರಣದಿಂದ ಸ್ನೇಹಿತರನ್ನು ಭೇಟಿಯಾಗಲು ಸಮಯದ ಅಭಾವದಿಂದ ಆಕೆ ಸ್ನೇಹಿತರನ್ನು ಭೇಟಿಯಾಗುತ್ತಿಲ್ಲ ಇದೆಲ್ಲಾ ಕೇವಲ ರೂಮರ್‍ ಗಳು ಮಾತ್ರ ಎಂಬ ಸುದ್ದಿ ಸಹ ಕೇಳಿಬರುತ್ತಿದೆ.

ಸುಮಾರು ದಿನಗಳ ಬಳಿಕ ಸಮಂತಾ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಸಿನೆಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದ ಶೂಟಿಂಗ್ ನಲ್ಲೂ ಸಹ ಶೀಘ್ರದಲ್ಲೇ ಭಾಗಿಯಾಗಲಿದ್ದಾರೆ. ಮತಷ್ಟು ಆಫರ್‍ ಗಳು ಸಮಂತಾ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ.