News

ರಾಡ್ ನಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿದ ಮಗ, ತಿಂಡಿ ಮಾಡಿಲ್ಲ ಅಂತ ಕೊಲೆ ಮಾಡಿಬಿಟ್ಟ……!

ಹೆತ್ತ ತಾಯಿಯನ್ನೇ ಕ್ಷುಲ್ಲಕ ಕಾರಣದಿಂದಾಗಿ ರಾಡ್ ನಿಂದ ಹೊಡೆದ ಮಗ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆ.ಆರ್‍. ಪುರದ ಭೀಮಯ್ಯ ಲೇಔಟ್ ನಲ್ಲಿ ಈ ಭೀಕರ ಘಟನೆ ನಡೆದಿದೆ. ನಿನ್ನೆಯಷ್ಟೆ ಈ ಘಟನೆ ನಡೆದಿದ್ದು, ತಾಯಿಯನ್ನು ಕೊಲೆ ಮಾಡಿದ ಬಳಿಕ ಮಗ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆಯಾದ ದುರ್ದೈವಿಯನ್ನು ನೇತ್ರಾವತಿ (40) ಎಂದು ಗುರ್ತಿಸಲಾಗಿದೆ. ಬೆಂಗಳೂರಿನ ಕೆ.ಆರ್‍. ಪುರಂನ ಭೀಮಯ್ಯ ಲೇಔಟ್ ನಲ್ಲಿ ವಾಸವಾಗಿದ್ದ ನೇತ್ರಾವತಿ ಪುತ್ರ ಮುಳಬಾಗಿಲಿನಲ್ಲಿ ಡಿಪ್ಲೊಮಾ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದನಂತೆ. ಮುಳಬಾಗಿಲಿನಿಂದ ಕೆ.ಆರ್‍.ಪುರಂಗೆ ಬಂದಿದ್ದ ಮಗ ತನ್ನ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಬಳಿಕ ಆ ದಿನ ರಾತ್ರಿ ಊಟ ಮಾಡದೇ ಮಲಗಿಕೊಂಡಿದ್ದ ಎನ್ನಲಾಗಿದೆ. ಬಳಿಕ ಫೆ.2 ರಂದು ಮಗ ಕಾಲೇಜಿಗೆ ಹೋಗಲು ರೆಡಿಯಾಗಿ ತಾಯಿಗೆ ಊಟ ಹಾಕುವಂತೆ ಕೇಳಿದ್ದಾನೆ. ಈ ಸಮಯದಲ್ಲಿ ತಾಯಿ ನೇತ್ರಾವತಿ ಮಗನನ್ನು ಬೈದಿದ್ದಾರೆ. ಈ ಕಾರಣದಿಂದ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ನೀನು ಮಗನೇ ಅಲ್ಲ, ನಿನಗೆ ಊಟ ಹಾಕೊಲ್ಲ ಎಂದು ಮೃತ ನೇತ್ರಾ ಬೈದಿದ್ದರಂತೆ. ಕೂಡಲೇ ಕೋಪಗೊಂಡ ಮಗ, ಮನೆಯಲ್ಲಿದ್ದ ರಾಡ್ ತೆಗೆದುಕೊಂಡು ಹೋಗಿ ಮಲಗಿಕೊಂಡಿದ್ದ ತಾಯಿಯ ತಲೆಗೆ ಹೊಡೆದಿದ್ದಾನೆ. ಇನ್ನೂ ನೇತ್ರಾವತಿ ತಲೆಗೆ ರಾಡ್ ನಿಂದ ಬಲವಾಗಿ ಹೊಡೆದ ಹಿನ್ನೆಲೆಯಲ್ಲಿ ತಲೆ ಛಿದ್ರವಾಗಿ ನೆತ್ತರು ಹರಿದು ಮೃತಪಟ್ಟಿದ್ದಾಳೆ.

ಈ ಸಂಭಂಧ ಕೆ.ಆರ್‍.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೃತ ನೇತ್ರಾವತಿ ಮುಳಬಾಗಿಲು ಮೂಲದವರಾಗಿದ್ದಾರೆ. ಸುಮಾರು 30 ವರ್ಷದಿಂದ ಆಕೆ ಕೆ.ಆರ್‍.ಪುರಂನ ಭೀಮಯ್ಯ ಲೇಔಟ್ ನಲ್ಲಿ ವಾಸ ಮಾಡುತ್ತಿದ್ದರಂತೆ. ಈ ದುರ್ಘಟನೆ ನಡೆದ ವೇಳೆ ನೇತ್ರಾ ರವರ ಗಂಡ ಚಂದ್ರ ಮುಳಬಾಗಿಲಿನಲ್ಲಿರುವ ತೋಟಕ್ಕೆ ಹೋಗಿದ್ದರಂತೆ. ಇದೀಗ ಬಾಲಕನ್ನು ರಕ್ಷಣೆ ಮಾಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Most Popular

To Top