Film News

ಮೈಸೂರಿನ ಬಘೀರಾ ಶೂಟಿಂಗ್ ವೇಳೆ ಭಾರಿ ಅವಘಡ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಗಾಯ….!

ಸ್ಯಾಂಡಲ್ ವುಡ್ ನಟ ರೋರಿಂಗ್ ಸ್ಟಾರ್‍ ಶ್ರೀಮುರಳಿ ಸದ್ಯ ಬಘೀರಾ ಸಿನೆಮಾದ ಶೂಟೀಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಮೈಸೂರಿನ ಭಾಗದಲ್ಲಿ ನಡೆಯುತ್ತಿದೆ. ಇದೀಗ ಈ ಸಿನೆಮಾ ಆಕ್ಷನ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಶ್ರೀಮುರಳಿ ಗಾಯಗೊಂಡಿದ್ದಾರೆ. ಅವರ ಕಾಲಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಬಘೀರಾ ಸಹ ಒಂದಾಗಿದೆ. ಈ ಸಿನೆಮಾವನ್ನು ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ. ಕಳೆದ 2022ರಲ್ಲಿ ನಟ ಶ್ರೀಮುರಳಿ ರವರ ಹುಟ್ಟುಹಬ್ಬದಂದು ಸಿನೆಮಾದ ಮೂಹೂರ್ತ ಕಾರ್ಯಕ್ರಮ ನೆರವೇರಿತ್ತು. ಈ ಸಿನೆಮಾಗೆ ಕಥೆಯನ್ನು ಬರೆದಿರುವುದು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್. ಆಕ್ಷನ್ ಕಥೆಗಳ ಪ್ರಿಯಾರಾದ ನೀಲ್ ರೋರಿಂಗ್ ಸ್ಟಾರ್‍ ಮುರಳಿಗೆ ಶೂಟ್ ಆಗುವಂತಹ ಆಕ್ಷನ್ ಕಥೆಯನ್ನು ಸಿದ್ದ ಮಾಡಿದ್ದಾರೆ. ಇನ್ನೂ ಆಕ್ಷನ್ ಪ್ರಿಯರಂತೂ ಬಘೀರ ಸಿನೆಮಾದ ಪೋಸ್ಟರ್‍ ನೋಡಿದ ಮೇಲೆ ಮತಷ್ಟು ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಆಕ್ಷನ್ ದೃಶ್ಯದ ಶೂಟಿಂಗ್ ಸಮಯದಲ್ಲಿ ಭಾರಿ ಅವಘಡ ಉಂಟಾಗಿ ಶ್ರೀಮುರಳಿಯವರ ಕಾಲಿಗೆ ಗಾಯವಾಗಿದೆ.

ಇನ್ನೂ ಮೈಸೂರಿನಲ್ಲಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ ಅವಘಡ ಉಂಟಾಗಿದ್ದು, ನಟ ಶ್ರೀಮುರಳಿ ರವರ ಕಾಲಿಗೆ ಪೆಟ್ಟಾಗಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಘೀರಾ ಸಿನೆಮಾದ ದೊಡ್ಡ ಸ್ಟಂಟ್ ಸೀನ್ ಫೈಟಿಂಗ್ ಚಿತ್ರೀಕರಣ ಮಾಡುವಾಗ ಅವರ ಕಾಲಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಸದ್ಯ ಯಾವುದೇ ದೊಡ್ಡ ಪ್ರಮಾದ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದು, ಶ್ರೀಮುರಳಿ ಚೇತರಿಸಿಕೊಂಡ ಕೂಡಲೇ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಅನೇಕ ಆಕ್ಷನ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿರುವ ಶ್ರೀಮುರಳಿ ಶೀಘ್ರದಲ್ಲೆ ತೆರೆಕಾಣಲಿದೆ. ಆದರೆ ಅವರ ಕೆರಿಯರ್‍ ನಲ್ಲಿ ಬಿಗೆಸ್ಟ್ ಹಿಟ್ ತಂದುಕೊಟ್ಟಿದ್ದು ಮಾತ್ರ ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಸಿನೆಮಾ ಎಂದೇ ಹೇಳಬಹುದು. ಇದರ ಜೊತೆಗೆ ಶಿವರಾಜ್ ಕುಮಾರ್‍ ರವರ ಜೊತೆಗೆ ನಟಿಸಿದ್ದ ಮಫ್ತಿ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ.

Most Popular

To Top