Film News

ಶ್ರೀಲೀಲಾ ನೃತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಹೇಶ್ ಬಾಬು, ಆಕೆಯ ಕುಣಿತಕ್ಕೆ ಸುಸ್ತಾದೆ ಎಂದ ಮಹೇಶ್ ಬಾಬು……!

ಸ್ಟಾರ್‍ ನಟಿ ಶ್ರೀಲೀಲಾ ತೆಲುಗಿನಲ್ಲಿ ಭಾರಿ ಫೇಂ ಪಡೆದುಕೊಂಡು ಸಕ್ಸಸ್ ಜರ್ನಿ ಸಾಗಿಸುತ್ತಿದ್ದಾರೆ. ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿದ್ದು, ಈ ಸಾಲಿನಲ್ಲಿ ಶ್ರೀಲೀಲಾ ಸಹ ಸೇರುತ್ತಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಮುನ್ನುಗ್ಗುತ್ತಿರುವ ಶ್ರೀಲೀಲಾ ತುಂಬಾನೆ ಎನರ್ಜಿಟಿಕ್ ಆಗಿ ನೃತ್ಯ ಮಾಡುತ್ತಾರೆ. ಅನೇಕರು ಆಕೆಯ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಇದೀಗ ಪ್ರಿನ್ಸ್ ಮಹೇಶ್ ಬಾಬು ಸಹ ಶ್ರೀಲೀಲಾ ಡ್ಯಾನ್ಸ್ ಎನರ್ಜಿ ಕಂಡು ಶಾಕ್ ಆಗಿದ್ದಾರೆ. ಆಕೆಯ ಕುಣಿತಕ್ಕೆ ನಾನು ಸುಸ್ತಾದೆ ಎಂದು ಹೇಳಿದ್ದಾರೆ. ಆಕೆಯ ಕಾಮೆಂಟ್ ಕೇಳಿ ಶ್ರೀಲೀಲಾ ಸಹ ಶಾಕ್ ಆಗಿದ್ದಾರೆ.

ಟಾಲಿವುಡ್ ಸೂಪರ್‍ ಸ್ಟಾರ್‍ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಗುಂಟೂರು ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾ ಜ.12 ರಂದು ಸಂಕ್ರಾಂತಿ ಹಬ್ಬದ ಅಂಗವಾಗಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಶ್ರೀಲೀಲಾ ಗುಂಟೂರು ಖಾರಂ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದಳು. ಈ ವೇಳೆ ಮಹೇಶ್ ಬಾಬು ಶ್ರೀಲೀಲಾ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದರಲ್ಲೂ ಆಕೆಯ ನೃತ್ಯದ ಬಗ್ಗೆ ಕಾಮೆಂಟ್ ಮಾಡಿದ್ದು, ಅದನ್ನು ಕೇಳಿದ ಶ್ರೀಲೀಲಾ ಪುಲ್ ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ಬಾಬು ಶ್ರೀಲೀಲಾ ನೃತ್ಯವನ್ನು ಮನಸಾರೆ ಹೊಗಳಿದ್ದಾರೆ. ಶ್ರೀಲೀಲಾ ಕುಣಿತ ನೋಡಿ ನಾನೇ ಸುಸ್ತಾಗಿ ಹೋದೆ. ನಿಜಕ್ಕೂ ಆ ಹುಡುಗಿ ತುಂಬಾನೆ ಚೆನ್ನಾಗಿ ನೃತ್ಯ ಮಾಡುತ್ತಾರೆ. ಆಕೆಯೊಂದಿಗೆ ಕಾಂಪೀಟ್ ಮಾಡೋಕೆ ತುಂಬಾನೆ ಕಷ್ಟ. ಹಿರೋಗಳಿಗೂ ಕಷ್ಟವಾಗುವಂತೆ ಆಕೆಯ ನೃತ್ಯ ಇರುತ್ತದೆ ಎಂದು ಹೊಗಳಿದ್ದಾರೆ. ಇನ್ನೂ ಮಹೇಶ್ ಬಾಬು ರವರ ಕಾಮೆಂಟ್ ಗಳನ್ನು ಕೇಳಿ ಶ್ರೀಲೀಲಾ ಪುಲ್ ಖುಷಿಯಾಗಿದ್ದಾರೆ. ಈ ಕಾಮೆಂಟ್ ಮೂಲಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಸಹ ಹುಟ್ಟಿದೆ ಎನ್ನಲಾಗುತ್ತಿದೆ. ಸದ್ಯ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನೆಮಾ ಶ್ರೀಲೀಲಾಗೆ ಯಾವ ರೀತಿಯ ಸಕ್ಸಸ್ ತಂದುಕೊಡಲಿದೆ ಎಂದು ಕಾದು ನೋಡಬೇಕಿದೆ.

ಇನ್ನೂ ಕೊನೆಯದಾಗಿ ಶ್ರೀಲೀಲಾ ಭಗವಂತ್ ಕೇಸರಿ, ಆದಿಕೇಶವ ಹಾಗೂ ಎಕ್ಟ್ರಾ ಆರ್ಡಿನರಿ ಮ್ಯಾನ್  ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾಗಳ ಪೈಕಿ ಭಗವಂತ್ ಕೇಸರಿ ಬಿಟ್ಟರೇ ಎರಡೂ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಇದೀಗ ಆಕೆಗೆ ಗುಂಟೂರು ಖಾರಂ ಸಿನೆಮಾ ಒಳ್ಳೆಯ ಸಕ್ಸಸ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಆಕೆ ಇನ್ನೂ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Most Popular

To Top