Film News

ನಾನ್ನೂರು ಮಂದಿ ಮುಂದೆ ನನ್ನನ್ನು ಅವಮಾನಿಸಿದ್ದರು, ತುಂಬಾ ನೋವನ್ನು ಅನುಭವಿಸಿದೆ ಎಂದ ಮೆಗಾಸ್ಟಾರ್ ಚಿರು…..!

ತೆಲುಗು ಸಿನಿರಂಗದಲ್ಲಿ ಸ್ವಂತ ಪ್ರತಿಭೆಯಿಂದ ಅಗ್ರ ಸ್ಥಾನ ಪಡೆದುಕೊಂಡ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಕೆರಿಯರ್‍ ಆರಂಭದಲ್ಲಿ ಅವರಿಗಾದ ಅವಮಾನಗಳೇ ಅವರನ್ನು ಸ್ಟಾರ್‍ ಆಗಿ ಮಾಡಿದೆ. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಚಿರಂಜೀವಿಯವರು ಕೆರಿಯರ್‍ ಆರಂಭದಲ್ಲಿ ಎದುರಿಸಿದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಸಿನಿರಂಗದ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿ ವಯಸ್ಸಾದರೂ ಸಹ ಸಿನೆಮಾಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.  ನಟನಾಗಿ ಕೆರಿಯರ್‍ ಆರಂಭಿಸಿದ ಚಿರು ಹಂತ ಹಂತವಾಗಿ ಸ್ಟಾರ್‍ ನಟರಾಗಿದ್ದಾರೆ. ಸಿನಿರಂಗದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಇದ್ದರೂ ತಮ್ಮ ಪರಿಶ್ರಮದ ಮೂಲಕ ಸ್ಟಾರ್‍ ಹಿರೋ ಆದರು. ಕೆರಿಯರ್‍ ಆರಂಭದಲ್ಲಿ ಚಿರಂಜೀವಿ ತುಂಬಾ ಅವಮಾನಗಳನ್ನು ಎದುರಿಸಿದ್ದರಂತೆ. ಆ ಅವಮಾನಗಳ ಕಾರಣದಿಂದಲೇ ಇದೀಗ ನಾನು ಈ ಸ್ಥಾನದಲ್ಲಿದ್ದೇನೆ ಎಂದು ಮೆಗಾಸ್ಟಾರ್‍ ಚಿರಂಜೀವಿ ಇತ್ತೀಚಿಗೆ ನಡೆದ ಡಿಜಿಟಲ್ ಕ್ರಿಯೇಟರ್ಸ್ ಮೀಟ್ ನಲ್ಲಿ ಚಿರಂಜೀವಿಯವರು ಹೇಳಿದ್ದಾರೆ. ಅವರ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಡಿಜಿಟಲ್ ಕ್ರಿಯೇಟರ್‍ ಈವೆಂಟ್ ನಲ್ಲಿ ಭಾಗಿಯಾಗಿದ್ದ ಚಿರಂಜೀವಿ ಮಾತನಾಡುತ್ತಾ ತಮ್ಮ ಜೀವನದಲ್ಲಿ ಎದುರಿಸಿದ ಸಂಘಟನಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದೇನೆ. ನ್ಯಾಯಂ ಕಾವಲಿ ಎಂಬ ಸಿನೆಮಾದಲ್ಲಿ ನಾನು ನಟಿಸಿದ್ದೇನೆ. ಶಾರದ ತುಂಬಾ ಗ್ಯಾಪ್ ಬಳಿಕ ಈ ಸಿನೆಮಾ ಮಾಡಿದ್ದರು. ಈ ಸಿನೆಮಾದಲ್ಲಿ ಕೋರ್ಟ್ ದೃಶ್ಯವೊಂದರ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್‍ ಹೋಗಿ ಬೋನ್ ನಲ್ಲಿ ನಿಂತುಕೋಳ್ಳುವಂತೆ ಹೇಳಿದ್ದರು. ಈ ದೃಶ್ಯ ಶೂಟ್ ಮಾಡುವಾಗ ಸುಮಾರು ನಾಲ್ಕು ನೂರು ಮಂದಿಗೂ ಹೆಚ್ಚು ಜನರಿದ್ದರು. ನಾನು ಬೋನ್ ನಲ್ಲಿ ನಿಂತುಕೊಂಡೆ. ಅಷ್ಟರಲ್ಲಿ ನಿರ್ಮಾಪಕ ಕ್ರಾಂತಿ ಕುಮಾರ್‍ ಬಂದು ಏನ್ರಿ ನಿಮ್ಮನ್ನು ಪ್ರತ್ಯೇಕವಾಗಿ ಕರೆಯಬೇಕೆ? ಬಂದು ಇಲ್ಲಿ ಬಿದ್ದಿರೋಕೆ ಆಗಲ್ವಾ? ನೀವೇನಾದರೂ ಸೂಪರ್‍ ಸ್ಟಾರ್‍ ಅಂದುಕೊಂಡ್ರಾ ಎಂದು ಕೂಗಾಡಿದರು.

ಅವರು ಆ ರೀತಿ ಹೇಳಿದ ಕೂಡಲೇ ನನಗೆ ತುಂಬಾನೆ ನೋವಾಯ್ತು. ಎಲ್ಲರ ಮುಂದೆ ಆತ ನನ್ನನ್ನು ಬೈಯುತ್ತಿದ್ದಂತೆ ನನ್ನ ಹೃದಯ ಹಿಂಡಿದಂತಾಯ್ತು. ಆ ದಿನ ಮದ್ಯಾಹ್ನ ಊಟ ಸಹ ಮಾಡಲಿಲ್ಲ. ಬಳಿಕ ಸಂಜೆ ಪೋನ್ ಮಾಡಿ ಶಾರದಾ ಮೇಲೆ ಇದ್ದ ಬೇಸರದಿಂದ ನಿಮ್ಮ ಮೇಲೆ ಆ ರೀತಿ ಕಿರಿಚಾಡಿದೆ ಎಂದು ಹೇಳಿದರು. ಆದರೆ ಅದು ಪದ್ದತಿಯಲ್ಲ ಎಲ್ಲರ ಮುಂದೆ ಬರದೇ ಇರಬೇಕಾಗಿತ್ತು. ಎಂದಿದ್ದರಂತೆ ಚಿರು. ಆ ಅವಮಾನವೇ ನನ್ನಲ್ಲಿ ಮತಷ್ಟು ಚಲ ಹೆಚ್ಚಿಸಿತ್ತು. ನೀನೆದಾದರೂ ಸೂಪರ್‍ ಸ್ಟಾರ್‍ ಅಂದುಕೊಂಡ ಎಂಬ ಮಾತು ನನ್ನ ಮನದಲ್ಲಿ ಬಲವಾಗಿ ನೆಲಯೂರಿತ್ತು. ನಾನು ಸ್ಟಾರ್‍ ಆಗಿ ತೋರಿಸುತ್ತೇನೆ ಎಂದು ಪಣ ತೊಟ್ಟೆ ಎಂದಿದ್ದಾರೆ. ಇದಾದ ಬಳಿಕ ಅಂತಹ ಘಟನೆಗಳು ತುಂಬಾನೆ ನಡೆದಿತ್ತು. ಎಲ್ಲವನ್ನೂ ಎದುರಿಸಿ ನಾನು ಈ ಹಂತದಲ್ಲಿದ್ದೇನೆ ಎಂದು ಚಿರಂಜೀವಿ ಹೇಳಿದ್ದಾರೆ.

Most Popular

To Top