Film News

ನಟ ದರ್ಶನ ಮನೆ ಮೇಲೆ ಅರಣ್ಯ ಇಲಾಖಾಧಿಕಾರಿಗಳ ರೈಡ್, ಹುಲಿ ಉಗುರು ಹುಡುಕುತ್ತಿರುವ ಅಧಿಕಾರಿಗಳು….!

ಕೆಲವು ದಿನಗಳ ಹಿಂದೆಯಷ್ಟೆ ಬಿಗ್ ಬಾಸ್ ಮನೆಯಲ್ಲಿದ್ದ ರೈತ ವರ್ತೂರ್‍ ಸಂತೋಷ್ ರವರನ್ನು ಹುಲಿ ಉಗುರು ಧರಿಸಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು. ಈ ಬೆನ್ನಲ್ಲೆ ನಟ ದರ್ಶನ್ ರವರು ಸಹ ಹುಲಿ ಉಗುರು ಧರಿಸಿದ್ದ ಪೊಟೋ ವೈರಲ್ ಆಗಿದ್ದು, ಈ ಬಗ್ಗೆ ದೂರು ದಾಖಲಾಗಿತ್ತು. ಇದೀಗ ದರ್ಶನ್ ರವರ ಮನೆಗೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ರವರ ನಿವಾಸದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ದರ್ಶನ್ ಬಳಿ ಇರುವುದು ನಿಜವಾದ ಹುಲಿ ಉಗುರು ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ದರ್ಶನ್ ಅವರ ಮನೆಯ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಒಂದು ವೇಳೆ ಹುಲಿ ಉಗುರು ಇರೋದು ಖಚಿತ ಆದರೇ ದರ್ಶನ್ ಸಹ ಬಂಧನವಾಗಬಹುದು ಎನ್ನಲಾಗುತ್ತಿದೆ.  ಇನ್ನೂ ದರ್ಶನ್ ಮನೆಯ ಜೊತೆಗೆ ಜಗ್ಗೇಶ್ ಮನೆಗೂ ಸಹ ಪೊಲೀಸರು ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ ಜಗ್ಗೇಶ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪಕ್ಕದ ಮನೆಗೆ ನೊಟೀಸ್ ನೀಡಿ ಬಂದಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ರವರ ಪೊಟೋಗಳು ವೈರಲ್ ಆಗಿತ್ತು. ಈ ಪೊಟೋಗಳಲ್ಲಿ ಅವರು ಹುಲಿ ಉಗುರು ಧರಿಸಿದ ಆರೋಪ ಕೇಳಿಬಂದಿದೆ. ಈ ಪೊಟೋಗಳು ವೈರಲ್ ಆದ ಕಾರಣದಿಂದ ದೂರು ಸಹ ಬಂದಿದ್ದು, ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆರೋಪಿತ ಎಲ್ಲರಿಗೂ ನೊಟೀಸ್ ಸಹ ನೀಡಲಾಗುತ್ತಿದೆ. ನಟ ಜಗ್ಗೇಶ್  ಸಹ ಈ ಹಿಂದೆ ತಾವು ಧರಿಸಿದ್ದ ಹುಲಿ ಉಗುರು ನಿಜವಾದದು ಎಂದು ಹೇಳಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಜೊತೆಗೆ ನಿಖಲ್ ಕುಮಾರ್‍ ಸ್ವಾಮಿ ರವರ ಬಗ್ಗೆ ಸಹ ಆರೋಪ ಕೇಳಿಬಂದಿತ್ತು. ಆದರೆ ಅದು ನಿಜವಾದ ಹುಲಿ ಉಗುರು ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

Most Popular

To Top