ಬನ್ನಿ ಕಾರಣದಿಂದ ಶೂಟಿಂಗ್ ಸೆಟ್ ಬೇಸರದಿಂದ ಹೊರಬಂದರಂತೆ ರಶ್ಮಿಕಾ, ಶಾಕಿಂಗ್ ಪೋಸ್ಟ್ ವೈರಲ್….!

Follow Us :

ತೆಲುಗು ಸಿನಿರಂಗದಲ್ಲಿ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿದ ಸಿನೆಮಾಗಳಲ್ಲಿ ಪುಷ್ಪಾ ಸಹ ಒಂದಾಗಿದೆ. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾದ ಬಳಿಕ ನ್ಯಾಷನಲ್ ಲೆವೆಲ್ ನಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಹ ಕ್ರೇಜ್ ಪಡೆದುಕೊಂಡರು. ಇದೀಗ ಪುಷ್ಪಾ-2 ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಇದೀಗ ಪುಷ್ಪಾ-2 ಸಿನೆಮಾದ ಶೂಟಿಂಗ್ ಸಮಯದಲ್ಲಿ ರಶ್ಮಿಕಾ ಬೇಸರದಿಂದ ಹೊರಗೆ ಬಂದಿದ್ದಾರಂತೆ. ಅದಕ್ಕೆ ಕಾರಣ ಅಲ್ಲು ಅರ್ಜುನ್ ರವರಂತೆ. ಹೀಗೊಂದು ಪೋಸ್ಟ್ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ಸುಕುಮಾರ್‍ ಕಾಂಬಿನೇಷನ್ ನಲ್ಲಿ ಮೂಡಿಬಂದ ಪುಷ್ಪಾ ಸಿನೆಮಾ ಭಾರಿ ಕ್ರೇಜ್ ಪಡೆದುಕೊಂಡಿತ್ತು. ಇದೀಗ ಪುಷ್ಪಾ-2 ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಪುಷ್ಪಾ ದಿ ರೂಲ್ ಶೀಘ್ರದಲ್ಲಿ ತೆರೆಗೆ ತರಲು ಸುಕುಮಾರ್‍ ತಂಡ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾ ಆಗಿರುವ ಪುಷ್ಪಾ ಬಾಕ್ಸ್ ಆಫಿಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಜೊತೆಗೆ ಬಾಲಿವುಡ್ ನಲ್ಲೂ ಸಹ ನೂರು ಕೋಟಿ ಬಾಚಿದೆ. ಇದೀಗ ಎಲ್ಲರ ಕಣ್ಣು ಪುಷ್ಪಾ-2 ಮೇಲಿದೆ. ಪುಷ್ಪಾ ಮೊದಲ ಭಾಗಕ್ಕಿಂತ ಎರಡನೇ ಭಾಗ ಮತಷ್ಟು ವಿಭಿನ್ನವಾಗಿ, ಪವರ್‍ ಪುಲ್ ಆಗಿ ತೆರೆಗೆ ತರಲು ಸುಕುಮಾರ್‍ ಭಾರಿ ಪ್ಲಾನ್ ಮಾಡಿದ್ದು, ಶೂಟಿಂಗ್ ಸಹ ಭರದಿಂದ ನಡೆಯುತ್ತಿದೆ. ಇನ್ನೂ ಪುಷ್ಪಾ-2 ನಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ದಂಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾಗ ಒಂದು ಘಟನೆ ನಡೆದಿದ್ದು, ಈ ವೇಳೆ ಅಲ್ಲು ಅರ್ಜುನ್ ಮೇಲೆ ಬೇಸರಗೊಂಡ ರಶ್ಮಿಕಾ ಸೆಟ್ ನಿಂದ ಹೊರಹೋದರು ಎಂಬ ಟ್ವೀಟ್ ವೈರಲ್ ಆಗಿದೆ. ವಿವಾದಾತ್ಮಕ ಫಿಲಂ ಕ್ರಿಟಿಕ್ ಉಮೈರ್‍ ಸಂಧು ಈ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಮೇಲೆ ಕೋಪದಿಂದ ಹಾಗೂ ಅಸಹನೆಯಿಂದ ರಶ್ಮಿಕಾ ಪುಷ್ಪಾ-2 ಶೂಟಿಂಗ್ ನಿಂದ ಹೊರಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಬಿಹೇವಿಯರ್‍ ನಿಂದ ರಶ್ಮಿಕಾ ತುಂಬಾ ಸಮಸ್ಯೆ ಪಟ್ಟರು ಎಂದು ಉಮೈರ್‍ ಸಂಧು ಟ್ವೀಟ್ ಮಾಡಿದ್ದಾರೆ.

ಸದಾ ಸೌತ್ ಸ್ಟಾರ್‍ ಗಳ ಮೇಲೆ ವಿವಿಧ ರೀತಿಯ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಆದರೆ ಅವರ ಟ್ಟೀಟ್ ಕುರಿತು ಯಾರೂ ಸಹ ನಂಬುವುದಿಲ್ಲ. ಫೇಕ್ ಸುದ್ದಿಗಳ ಮೂಲಕ ಫೇಂ ಸಂಪಾದಿಸಿಕೊಳ್ಳಲು ಉಮೈರ್‍ ಸಂಧು ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕರು ಆತನ ವಿರುದ್ದ ಆಕ್ರೋಷ ಹೊರಹಾಕುತ್ತಿರುತ್ತಾರೆ. ಇದೀಗ ಅಲ್ಲು ಅರ್ಜುನ್ ಅಭಿಮಾನಿಗಳು ಉಮೈರ್‍ ಸಂಧು ಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಉಮೈರ್‍ ಸಂಧು ಯಾವಾಗ ಈ ರೀತಿಯ ಟ್ವೀಟ್ ಮಾಡುವುದನ್ನು ನಿಲ್ಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.