ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕಾಟೇರಾ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಪಸಂದಾಗವನೆ ಹಾಡು ಭಾರಿ ಸದ್ದು ಮಾಡಿತ್ತು. ಈ ಹಾಡು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಹಾಡಿಗೂ ಮೊದಲು ಸಿನೆಮಾದ ಮೇಕಿಂಗ್ ವಿಡಿಯೋ ಸಹ ರಿಲೀಸ್ ಆಗಿದ್ದು, ವಿಡಿಯೋ ಸಹ ವೈರಲ್ ಆಗಿತ್ತು. ಇದೀಗ ಶಬರಿಮಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಕಾಟೇರ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ. ಈ ವಿಡಿಯೋ ರಾಕ್ ಲೈನ್ ವೆಂಕಟೇಶ್ ಶೇರ್ ಮಾಡಿದ್ದಾರೆ.
ಕನ್ನಡದ ಸಿನಿರಂಗದ ಸ್ಟಾರ್ ದರ್ಶನ್ ಈ ಸಿನೆಮಾದ ನಾಯಕನಾಗಿದ್ದಾನೆ. ಈ ಸಿನೆಮಾಗಾಗಿ ಡಿ ಬಾಸ್ ಅಭಿಮಾನಿಗಳು ಈಗರ್ ಆಗಿ ಕಾಯುತ್ತಿದ್ದಾರೆ. ಇದೀಗ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪೇಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲ ಅಯ್ಯಪ್ಪ ಮಾಲಾಧಾರಿಗಳು ಕಾಟೇರಾ ಸಿನೆಮಾದ ಪೋಸ್ಟರ್ ಗಳನ್ನು ಹಿಡಿದು ಅಯ್ಯಪ್ಪನ ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ. ಶಬರಿಮಲೆಗೆ ಹೋಗುವ ದರ್ಶನ್ ಅಭಿಮಾನಿಗಳು ಈ ವಿಶೇಷ ಕೆಲಸ ಮಾಡಿದ್ದಾರೆ. ಅಪಾರ ಸಂಖ್ಯೆಯ ದರ್ಶನ್ ಅಭಿಮಾನಿಗಳು ಈ ವಿಡಿಯೋ ನೋಡಿ ಪುಲ್ ಖುಷಿಯಾಗಿದ್ದಾರೆ. ಅಯ್ಯಪ್ಪನ ಸನ್ನಿಧಾನದಲ್ಲಿ ಕಾಟೇರ ಸಿನೆಮಾಗೆ ದೈವದ ಆಶೀರ್ವಾದ ಸಿಕ್ಕಿದ ಅನುಭವ ಮೂಡುತ್ತದೆ ಎಂದು ಅಭಿಮಾನಿಗಳು ತಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಕಾಟೇರಾ ಸಿನೆಮಾ ಬಿಗ್ ಬಜೆಟ್ ಸಿನೆಮಾ ಆಗಿದೆ. ಈ ಸಿನೆಮಾ ದೊಡ್ಡ ಮಟ್ಟದಲ್ಲೇ ಗೆಲ್ಲಲಿ ಅಂತಲೇ ಅಭಿಮಾನಿಗಳು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಈ ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾ ನಿರಂತರವಾಗಿ ನೂರು ದಿನಗಳವರೆಗೂ ಚಿತ್ರೀಕರಣ ಮಾಡಿದ್ದಾರೆ. ಕೊನೆಯ ಹಂತದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಡಿ.10ರವರೆಗೆ ಈ ಸಿನೆಮಾದ ಶೂಟಿಂಗ್ ನಡೆಯಲಿದೆ. ಶೂಟಿಂಗ್ ಮುಗಿದ ಕೂಡಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿದೆ. ಕೆಲವು ದಿನಗಳ ಹಿಂದೆ ಪಸಂದಾಗವಳೇ ಎಂಬ ಹಾಡು ರಿಲೀಸ್ ಆಗಿದ್ದು, ಈ ಹಾಡು ತುಂಬಾನೆ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಟ್ರೈಲರ್ ಗಾಗಿ ಅಭಿಮಾನಿಗಲು ಈಗರ್ ಆಗಿ ಕಾಯುತ್ತಿದ್ದಾರೆ.