Film News

ತನ್ನ ಹೆಸರು ಡ್ರಗ್ಸ್ ಕೇಸ್ ನಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಸುರೇಖಾವಾಣಿ ವಿಡಿಯೋ ಮೂಲಕ ಸ್ಪಷ್ಟನೆ, ಅಷ್ಟಕ್ಕೂ ಆಕೆ ಹೇಳಿದ್ದು ಏನು?

ಕಬಾಲಿ ಸಿನೆಮಾದ ನಿರ್ಮಾಪಕ ಕೆ.ಪಿ.ಚೌದರಿ ಕೆಲವು ದಿನಗಳ ಹಿಂದೆಯಷ್ಟ ಡ್ರಸ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ಅವರ ಬಳಿಯಿದ್ದ ಕೊಕೈನ್ ವಶಪಡಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಆತನಿಂದ ಕೆಲವೊಂದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಆತನ ಪೋನ್ ಕಾಲ್ ಲೀಸ್ಟ್ ಪರಿಶೀಲನೆ ನಡೆಸಿ ಆತ ಸಂಭಾಷಣೆ ನಡೆಸಿದ ಅನೇಕರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಜ್ಯೋತಿ, ಸುರೇಖಾವಾಣಿ, ಆಕೆಯ ಪುತ್ರಿ ಸುಪ್ರೀತಾ, ಅಶುರೆಡ್ಡಿ ಸೇರಿದಂತೆ ಅನೇಕ ಕಲಾವಿದರ ಹೆಸರುಗಳು ಕೇಳಿಬರುತ್ತಿವೆ. ಇದೀಗ ಸುರೇಖಾವಾಣಿ ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಿರ್ಮಾಪಕ ಕೆಪಿ ಚೌದರಿಯನ್ನು ಬಂಧಿಸಿರುವಂತಹ ಪೊಲೀಸರು ಆತನ ಕಾಲ್ ಲೀಸ್ಟ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನೇಕರೊಂದಿಗೆ ಆತ ಸಂಭಾಷಣೆ ನಡೆಸಿರುವುದು ಸಿಕ್ಕಿಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಲೀಸ್ಟ್ ನಲ್ಲಿ ಅನೇಕ ಸಿನೆಮಾ ಸೆಲೆಬ್ರೆಟಿಗಳು, ಕಿರುತೆರೆ ನಟಿಯರ ಹೆಸರುಗಳೂ ಸಹ ಕೇಳಿಬರುತ್ತಿವೆ. ಈ ಪೈಕಿ ಬಿಗ್ ಬಾಸ್ ಖ್ಯಾತಿಯ ಅಷುರೆಡ್ಡಿ, ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಾದ ಜ್ಯೋತಿ, ಸುರೇಖವಾಣಿ ಹಾಗೂ ಆಕೆಯ ಪುತ್ರಿ ಸುಪ್ರೀತಾ ಹೆಸರುಗಳು ಸಹ ಕೇಳಿಬಂದಿವೆ. ಜೊತೆಗೆ ಅವರೊಂದಿಗೆ ಇರುವಂತಹ ಕೆಲವೊಂದು ಪೊಟೋಗಳು ಸಹ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಈ ಪ್ರಕರಣದಲ್ಲಿ ಸುರೇಖಾವಾಣಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಕೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಸೀನಿಯರ್‍ ನಟಿ ಸುರೇಖಾವಾಣಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಕೆ ತನ್ನ ಮೇಲೆ ಬರುತ್ತಿರುವಂತಹ ಆರೋಪಗಳ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ನಮ್ಮ ಮೇಲೆ ಬರುತ್ತಿರುವ ಆರೋಪಗಳು ಸುಳ್ಳು ಆರೋಪಗಳಾಗಿದೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ದಯಮಾಡಿ ನಮ್ಮ ಮೇಲೆ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ. ನಿಮ್ಮ ಆರೋಪಗಳ ಕಾರಣದಿಂದ, ನಮ್ಮ ಕೆರಿಯರ್‍, ನಮ್ಮ ಭವಿಷ್ಯತ್, ನಮ್ಮ ಮಕ್ಕಳ ಕೆರಿಯರ್‍, ಕುಟುಂಬದ ಆರೋಗ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ದಯಮಾಡಿ ನಮ್ಮನ್ನು ಅರ್ಥ ಮಾಡಿಕೊಳ್ಳಿ ಎಂದು ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

ಇನ್ನೂ ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೆಸರುಗಳು ಕೇಳಿಬರುತ್ತಿದ್ದಂತೆ ನಟಿ ಅಶುರೆಡ್ಡಿ, ಜ್ಯೋತಿ ರವರು ಸಹ ಕ್ಲಾರಿಟಿ ಕೊಟ್ಟಿದ್ದಾರೆ. ಇದೀಗ ಸುರೇಖಾವಾಣಿ ಸಹ ತಮ್ಮ ಸ್ಪಷ್ಟನೆಯನ್ನು ವಿಡಿಯೋ ಮೂಲಕ ಹೇಳಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೆಲ್ಲಾ ಹೆಸರುಗಳು ಕೇಳಿಬರಲಿದೆ ಎಂಬುದು ತಿಳಿದು ಬರಬೇಕಿದೆ.

Most Popular

To Top