Film News

ಯುವ ಸಿನೆಮಾ ಪ್ರಿ ರಿಲೀಸ್ ಈವೆಂಟ್ ನಲ್ಲಿ ಭಾವುಕರಾದ ಯುವ ರಾಜ್ ಕುಮಾರ್, ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ, ನನ್ನ ಶಕ್ತಿಯಾಗಿದ್ದಾರೆ ಎಂದ ನಟ…..!

ಸ್ಯಾಂಡಲ್ ವುಡ್ ನ ದೊಡ್ಮನೆ ಕುಡಿ ಯುವ ರಾಜ್ ಕುಮಾರ್ ರವರ ಚೊಚ್ಚಲ ಸಿನೆಮಾ ಯುವ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಈ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿದ್ದು, ಈ ವೇಳೆ ನಟ ಯುವ ರಾಜ್ ಕುಮಾರ್‍ ಅಪ್ಪು ರವರನ್ನು ನೆನೆದು ಎಮೋಷನಲ್ ಆಗಿದ್ದಾರೆ. ನಾನು ಹೋದ ಕಡೆಯೆಲ್ಲಾ ಅಪ್ಪು ಮಗ ಬಂದ ಎಂದು ಕರೆಯುತ್ತಾರೆ ಎಂದು ಭಾವುಕರಾಗಿದ್ದಾರೆ. ಈ ಪ್ರಮೋಷನ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್‍, ರಾಘವೇಂದ್ರ ರಾಜ್ ಕುಮಾರ್‍ ಇಡೀ ಕುಟುಂಬ ಹಾಜರಾಗಿದ್ದರು. ಈ ಸಿನೆಮಾದಲ್ಲಿ ಕಾಂತಾರ ಬ್ಯೂಟಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಯುವ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ಯುವ ರಾಜ್ ಕುಮಾರ್‍ ನಾನು ಎಲ್ಲಿಗೇ ಹೋದರೂ ಅಪ್ಪು ಮಗ ಬಂದ ಎಂದು ಜನರು ಹೇಳುತ್ತಾರೆ. ಆ ಮಾತನ್ನು ಕೇಳಿ ನನಗೆ ತುಂಬಾ ಸಂತೋಷವಾಗುತ್ತದೆ. ನಮ್ಮ ಚಿಕ್ಕಪ್ಪ ಇಲ್ಲಿಯೇ ಇದ್ದಾರೆ, ಅವರು ನನ್ನ ಶಕ್ತಿಯಾಗಿ ಜೊತೆಗೆ ಇದ್ದಾರೆ. ನನ್ನ ಕೈ ಹಿಡಿದು ನಡೆಸುತ್ತಿರುತ್ತಾರೆ. ಇಲ್ಲಿಯವರೆಗೂ ನನ್ನನ್ನು ಕರೆದುಕೊಂಡು ಬಂದು ನಿಮ್ಮ ಮಡಿಲಿಗೆ ಬಿಟ್ಟಿದ್ದಾರೆ. ಇನ್ನು ಮುಂದೆ ನೀವು ಏನು ಹೇಳ್ತೀರೋ ಹಾಗೆ ಎಂದಿದ್ದಾರೆ. ರಾಜ್ ಕುಮಾರ್‍ ಕುಟುಂಬಕ್ಕೆನು, ಅವರಿಗೆ ಎಲ್ಲಾ ಸುಲಭ, ಅವರ ತಂದೆ ತಾಯಿ ಹೆಸರು ಹೇಳಿಕೊಂಡು ಸಿನೆಮಾಗೆ ಬರುತ್ತಾರೆ ಎಂದು ಅನೇಕರು ಹೇಳುತ್ತಿರುತ್ತಾರೆ. ಆದರೇ ಅದು ಸುಲಭದ ಕೆಲಸವಲ್ಲ. ಇಲ್ಲಿ ಬಂದು ನಿಲ್ಲಬೇಕು ಎಂಬುದು ನನ್ನ ಸುಮಾರು ವರ್ಷದ ಕನಸಾಗಿದೆ. ನಾನು ಚಿಕ್ಕವನಾಗಿದ್ದಾಗಲೇ ಎಲ್ಲರೂ ನಿರ್ಣಯಿಸಿದ್ದರು. ನಾನು ನಟನಾಗುತ್ತೀನಿ ಅಂತಾ. ನನ್ನ ಮನಸ್ಸಿನಲ್ಲೂ ಚಿತ್ರರಂಗಕ್ಕೆ ಬರಬೇಕು ಎಂಬ ಆಸೆಯಾಯ್ತು. ಕಷ್ಟಪಟ್ಟು ಅನುಭವ ಪಡೆದುಕೊಂಡು ನಿಮ್ಮ ಮುಂದೆ ಬಂದಿದ್ದೇನೆ.

ನಮ್ಮ ಮನೆ ನಡೆಯುತ್ತಿರುವುದು ನಿಮ್ಮಿಂದಲೇ. ನಿಮ್ಮೆಲ್ಲರಿಗೂ ಗೊತ್ತು ನನಗೆ ಬೇರೆ ಏನು ಕೆಲಸ ಇಲ್ಲ. ನಮಗೆ ಗೊತ್ತಿರೋದು ಒಂದೆ ಸಿನೆಮಾ, ನಿಮ್ಮೆಲ್ಲರ ಸಂತೋಷ ಹಾಗೂ ಪ್ರೀತಿ ಗಳಿಸುವುದೇ ನಮ್ಮ ಜವಾಬ್ದಾರಿ. ವಿಜಯ್ ಕಿರಗಂದೂರು ಸರ್‍ ಗೆ ನಮ್ಮ ಚಿಕ್ಕಪ್ಪ ನೀವು ಗುರು ಸಿನೆಮಾ ಮಾಡಬೇಕು ಎಂದು ಹೇಳಿದ್ರಂತೆ. ಗುರುನಾ ನೀವೇ ಲಾಂಚ್ ಮಾಡಬೇಕೆಂದು ನಮ್ಮ ಆಂಟಿ ಸಹ ಹೇಳಿದ್ರು. ಬಳಿಕ ಅದೆಷ್ಟೋ ಜನ ಯುವ ಜೊತೆ ಸಿನೆಮಾ ಮಾಡಿ ಎಂದು ಹೇಳಿದ್ದರೀ. ಅದು ನನಗೆ ಗೊತ್ತು. ಈ ಸಿನೆಮಾ ನಿರ್ಮಾಣವಾಗಿದ್ದೇ ನಿಮ್ಮಿಂದ. ನೀವೇ ನನ್ನ ಕರೆದುಕೊಂಡು ಬಂದು ನಿಲ್ಲಿಸಿದ್ದೀರಾ, ಇಲ್ಲಿಂದ ನನ್ನ ಹೇಗೆ ಕರೆದುಕೊಂಡು ಹೋಗುತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು, ನನಗೆ ದಾರಿ ಕಾಣದೆ ಇರುವ ಸಮಯದಲ್ಲಿ ಹೊಂಬಾಳೆ ಸಂಸ್ಥೆ ನನಗೆ ಸಾಥ್ ನೀಡಿದೆ ಎಂದು ಯುವ ರಾಜ್ ಕುಮಾರ್‍ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Most Popular

To Top