News

ಹುಟ್ಟು ಹಬ್ಬದಂದು ದುಬೈಗೆ ಕರೆದುಕೊಂಡ ಹೋಗಿಲ್ಲ ಅಂತಾ ಗಂಡನನ್ನೆ ಕೊಂದ ಪತ್ನಿ….!

ಗಂಡ ಹೆಂಡತಿಯರ ಜಗಳ ತಿಂದು ಮಲಗುವ ತನಕ ಎಂಬ ನಾಣ್ಣುಡಿಯನ್ನು ಕೇಳಿದ್ದೇವೆ. ಆದರೆ ಇದೀಗ ಗಂಡ ಹೆಂಡಿಯ ನಡುವೆ ನಡೆದಂತಹ ಜಗಳ ಒಂದು ಜೀವ ಹೋಗಿದೆ. ಹೆಂಡತಿಯೊಬ್ಬಳು ತನ್ನ ಹುಟ್ಟುಹಬ್ಬದಂದು ದುಬೈಗೆ ಕರೆದುಕೊಂಡು ಹೋಗಿಲ್ಲ ಅಂತಾ ಗಂಡನ ಮೂಗಿಗೆ ಬಲವಾಗಿ ಹೊಡೆದಿದ್ದು, ಆಸ್ಪತ್ರಗೆ ಹೋಗುವ ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎನ್ನಲಾಗಿದೆ.

ಮೃತ ದುರ್ದೈವಿಯನ್ನು ನಿಖಿಲ್ ಖನ್ನಾ ಎಂದು ಗುರ್ತಿಸಲಾಗಿದ್ದು, ಆತ ಪತ್ನಿ ರೇಣುಕಾ ವಿರದ್ದು ಕೊಲೆ ಆರೋಪ ಕೇಳಿಬಂದಿದೆ. ಮೃತ ನಿಖಿಲ್ ಉದ್ಯಮಿಯಾಗಿದ್ದರು. ನಿಖಿಲ್ ಹಾಗೂ ರೇಣುಕಾ ಪ್ರೀತಿಸಿ ಮದುವೆಯಾದರು. ಸುಮಾರು ಆರು ವರ್ಷಗಳಿಂದ ಇಬ್ಬರೂ ಅನ್ಯೋನ್ಯತೆಯಿಂದ ಚೆನ್ನಾಗಿ ಜೀವನ ಸಾಗಿಸುತ್ತಿದ್ದರು. ರೇಣುಕಾ ಹುಟ್ಟುಹಬ್ಬ ಹಾಗೂ ಇದೇ ತಿಂಗಳಲ್ಲಿ ಅವರ ಮದುವೆ ವಾರ್ಷಿಕೊತ್ಸವ ಸಹ ಇತ್ತು ಎನ್ನಲಾಗಿದ್ದು, ಎರಡನ್ನೂ ದುಬೈನಲ್ಲಿ ಸೆಲೆಬ್ರೇಟ್ ಮಾಡಲು ರೇಣುಕಾ ಮೊದಲೇ ಪ್ಲಾನ್ ಮಾಡಿದ್ದರು. ಅದಕ್ಕೆ ನಿಖಿಲ್ ಸಹ ಸಮ್ಮತಿಸಿದ್ದರಂತೆ. ಆದರೆ ದುರಾದೃಷ್ಟಾವಶಾತ್ ಪತ್ನಿಯ ಹುಟ್ಟುಹಬ್ಬದಂದು ನಿಖಿಲ್ ತಮ್ಮ ಬ್ಯುಸಿನೆಸ್  ವ್ಯವಹಾರದಲ್ಲಿ ಬ್ಯುಸಿಯಾಗಿದ್ದರು. ಈ ಕಾರಣದಿಂದ ಪತ್ನಿಯನ್ನು ದುಬೈಗೆ ಕರೆದುಕೊಂಡು ಹೋಗಲು ಆಗಿರಲಿಲ್ಲ. ಈ ಕಾರಣದಿಂದ ಇಬ್ಬರ ನಡುವೆ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ರೇಣುಕಾ ಬಲವಾಗಿ ನಿಖಿಲ್ ಮೂಗಿಗೆ ಹೊಡೆದಿದ್ದಾರೆ.

ಇನ್ನೂ ರೇಣುಕಾ ಮೂಗಿಗೆ ಹೊಡೆಯುತ್ತಿದ್ದಂತೆ ನಿಖಿಲ್ ಮೂಗಿನಿಂದ ರಕ್ತ ಸುರಿದಿದೆ. ನಿಖಿಲ್ ಕುಸಿದು ಬಿದಿದ್ದು, ಪ್ರಜ್ಞೆ ತಪ್ಪಿದ್ದಾರಂತೆ. ಆಗ ಅಕ್ಕಪಕ್ಕದಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಆತ ಇಹಲೋಕ ತ್ಯೆಜಿಸಿದ್ದಾರೆ. ಇನ್ನೂ ಪತ್ನಿ ರೇಣುಕಾ ರವರನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ದ ಐಪಿಸಿ ಸೆಕ್ಷನ್ 302 ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Most Popular

To Top