Film News

ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾದ ಜೀವಿತ ಹಾಗೂ ರಾಜಶೇಖರ್, ಕಾರಣವಾದ್ರು ಏನು?

ತೆಲುಗು ಸಿನಿರಂಗದ ಖ್ಯಾತ ನಟ ರಾಜಶೇಖರ್‍ ಹಾಗೂ ಆತನ ಪತ್ನಿ ಜೀವಿತ ರವರಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ನಾಂಪಲ್ಲಿ ಕೋರ್ಟ್ ವಿಧಿಸಿದೆ ಎಂದು ತಿಳಿದುಬಂದಿದೆ. ಸುಮಾರು ದಿನಗಳ ಹಿಂದೆ ಚಿರಂಜೀವಿ ಬ್ಲಡ್ ಬ್ಯಾಂಕ್ ಕುರಿತು ಮಿಡಿಯಾ ಸಮಾವೇಶವೊಂದರಲ್ಲಿ ಅಪಪ್ರಚಾರ ಮಾಡಿದ್ದರು ಎಂದು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ ಕಳೆದ 2011 ರಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್‍ ಹಾಗೂ ಜೀವಿತರವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ನಟ ರಾಜಶೇಖರ್‍ ಹಾಗೂ ಜೀವಿತ ದಂಪತಿಗೆ ಮಾನನಷ್ಟ ಮೊಕದ್ದಮೆ ಕೇಸ್ ನಟಿ ಶಿಕ್ಷೆ ವಿಧಿಸಲಾಗಿದೆ. ಚಿರಂಜೀವಿಯವರ ಬ್ಲಡ್ ಬ್ಯಾಂಕ್ ನಲ್ಲಿ ಶೇಖರಣೆ ಮಾಡಿದ ರಕ್ತವನ್ನು ಮಾರ್ಕೆಟ್ ನಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂದು ಮಿಡಿಯಾ ಸಮಾವೇಶವೊಂದರಲ್ಲಿ ಜೀವಿತ ಹಾಗೂ ರಾಜಶೇಖರ್‍ 2011 ರಲ್ಲಿ ಆರೋಪಿಸಿದ್ದರು. ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕ ಅಲ್ಲು ಅರವಿಂದ್ ಕೋರ್ಟ್‌ ಮೊರೆ ಹೋಗಿದ್ದರು. ಮೆಗಾಸ್ಟಾರ್‍ ಚಿರಂಜೀವಿ ಹೆಸರನಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳು, ಟ್ರಸ್ಟ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಜೊತೆಗೆ ಅವರು ಮಾಡಿದಂತಹ ಆರೋಪಗಳಿಗೆ ಸಂಬಂಧಿಸಿದ ವಿಡಿಯೋ ಹಾಗೂ ಮಿಡಿಯಾದಲ್ಲಿ ಪ್ರಸಾರವಾದ ಸುದ್ದಿಯನ್ನು ಸಹ ಕೋರ್ಟ್‌ನಲ್ಲಿ ಸಲ್ಲಿಸಿದ್ದರು.

ಇನ್ನೂ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿ ತೀರ್ಪನ್ನು ನೀಡಿದೆ. ಅದರಂತೆ ರಾಜಶೇಖರ್‍ ಹಾಗೂ ಜೀವಿತ ರವರಿಗೆ ಒಂದು ವರ್ಷ ಜೈಲು ಶಿಕ್ಷೆಯ ಜೊತೆಗೆ ಐದು ಸಾವಿರ ದಂಡವನ್ನು ಸಹ ವಿಧಿಸಲಾಗಿದೆ.  ದಂಡವನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕೊರ್ಟ್‌ಗೆ ಹೋಗುವ ಅವಕಾಶವನ್ನು ಕಲ್ಪಿಸಿ, ಬೈಲ್ ಸಹ ಮಂಜೂರು ಮಾಡಿದೆ.

Most Popular

To Top