News

10 ರೂಪಾಯಿಗಾಗಿ ಲಕ್ಷ ಕಳೆದುಕೊಂಡ ವ್ಯಕ್ತಿ, 10 ರೂಪಾಯಿ ಆಸೆ ತೋರಿ ಲಕ್ಷ ಎಗರಿಸಿದ ಖದೀಮರು…..!

ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಕೆನರಾ ಬ್ಯಾಕ್ ಬಳಿ ವೃದ್ದನೋರ್ವ 10 ರೂಪಾಯಿ ಆಸೆಗೆ 1 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವೃದ್ದ ನನ್ನು ಗಮನಿಸಿದ ಕೆಲ ಖದೀಮರು ವೃದ್ದನನ್ನು ಯಾಮಾರಿಸಿ ಲಕ್ಷ ಎಗಿಸಿದ್ದಾರೆ. 10 ರೂಪಾಯಿ ನೋಟನ್ನು ರಸ್ತೆಗೆ ಹಾಕಿ ಅದನ್ನು ವೃದ್ದನಿಗೆ ತೊರಿಸಿ ಯಾಮಾರಿಸಿದ್ದಾರೆ.

ಚನ್ನಪಟ್ಟಣದ ಮಂಗಳವಾರಪೇಟೆ ಎಂಬ ಪ್ರದೇಶದ ನಿವಾಸಿ ರಾಘವೇಂದ್ರ ಲಕ್ಷ ಕಳೆದುಕೊಂಡ ವ್ಯಕ್ತಿ. ರಾಘವೇಂದ್ರ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಹತ್ತು ರೂಪಾಯಿ ನೋಟುಗಳನ್ನು ಬೀಳಿಸಿ, ನಿಮ್ಮ ಹಣ ಬಿದ್ದಿದ್ದೆ ನೋಡಿ ಎಂದು ಹೇಳಿ ಮುಂದೆ ಹೋಗಿದ್ದಾನೆ. ಆಗ ರಾಘವೇಂದ್ರ ಹತ್ತು ರೂಪಾಯಿ ಎತ್ತಿಕೊಳ್ಳಲು ಹೋಗಿದ್ದಾನೆ. ಕೈಯಲ್ಲಿದ್ದ ಒಂದು ಲಕ್ಷ ಹಣದ ಕವರ್‍ ಅನ್ನು ಬೈಕ್ ನ ಹ್ಯಾಂಡಲ್ ಗೆ ಹಾಕಿದ್ದಾನೆ. ಕೂಡಲೇ ಮತ್ತೋರ್ವ ವ್ಯಕ್ತಿ ಬೈಕ್ ನಲ್ಲಿ ಬಂದು ಹಣ ಇದ್ದ ಕವರ್‍ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.

ಇನ್ನೂ ಬೈಕ್ ನಲ್ಲಿ ಬಂದ ಕಳ್ಳ ಹಣ ಎಗರಿಸಿಕೊಂಡು ಹೋಗುತ್ತಿರುವುದನ್ನು ಅಲ್ಲಿದ್ದ ಮಹಿಳೆಯೊಬ್ಬರು ಕೂಗಿ ಹೇಳುತ್ತಿದ್ದರೂ ರಾಘವೇಂದ್ರ ಮಾತ್ರ ಹತ್ತು ರೂಪಾಯಿ ಆಯ್ದುಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ. ಈ ಮೂಲಕ ಹತ್ತು ರೂಪಾಯಿ ಆಸೆಗೆ ಬಿದ್ದು ಲಕ್ಷ ಹಣ ಕಳೆದುಕೊಂಡಿದ್ದಾರೆ ರಾಘವೇಂದ್ರ. ಇನ್ನೂ ಈ ಸಂಬಂಧ ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿ, ಕಳ್ಳರನ್ನು ಹಿಡಿಯಲು ಬಲೆ ಬೀಸಿದ್ದಾರೆ.

Most Popular

To Top