News

ಬಿಗ್ ಬಾಸ್ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಶಾಸಕ ಪ್ರದೀಪ್, ಟೀಕೆಗಳಿಗೆ ಕೌಂಟರ್ ಕೊಟ್ಟ ಶಾಸಕ…..!

ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮಗಳಲ್ಲಿ ಒಂದಾದ ಬಿಗ್ ಬಾಸ್ ಸೀಸನ್ 10 ಇದೀಗ ಶುರುವಾಗಿದ್ದು, ಬಿಗ್ ಬಾಸ್ ಮನೆಯ ಒಳಗೆ ಸ್ಪರ್ಧಾಳುಗಳು ಎಂಟ್ರಿ ಕೊಟ್ಟಾಗಿದೆ. ಈ ಮನೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದರು. ಈ ಬಗ್ಗೆ ರಾಜ್ಯದಾದ್ಯಂತ ಟೀಕೆಗಳು, ವಿಮರ್ಶೆಗಳು ಎದುರಾಗಿದ್ದವು. ಇದೀಗ ಬಿಗ್ ಬಾಸ್ ಮನೆಯಿಂದ ಒಂದೇ ದಿನಕ್ಕೆ ಶಾಸಕ ಪ್ರದೀಪ್ ಹೊರಬಂದಿದ್ದು, ಟೀಕೆಗಳಿಗೆ ಕೌಂಟರ್‍ ಸಹ ಕೊಟ್ಟಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಶಾಸಕರೊಬ್ಬರು ಎಂಟ್ರಿ ಕೊಟ್ಟಿದ್ದರು. ಈ ಕುರಿತು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಶಾಸಕ ಪ್ರದೀಪ್ ಈಶ್ವರ್‍ ರವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಬೇಕು ಅಥವಾ ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ದೊಡ್ಡ ಮಟ್ಟದ ಕೂಗು ಸಹ ಕೇಳಿಬಂದಿತ್ತು. ಜೊತೆಗೆ ಮಾಜಿ ಸಚಿವ ಡಾ.ಕೆ.ಸುಧಾಕರ್‍ ಸಹ ಪ್ರದೀಪ್ ಈಶ್ವರ್‍ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರ ಬಗ್ಗೆ ಕಿಡಿ ಕಾರಿದ್ದರು. ಚಿಕ್ಕಬಳ್ಳಾಪುರದ ಮಾನ ಹರಾಜು ಹಾಕಿದ್ದಾರೆ ಎಂದು ಟೀಕೆ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಮದ್ಯೆ ಪ್ರದೀಪ್ ಈಶ್ವರ್‍ ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಜೊತೆಗೆ ತಮ್ಮ ವಿರುದ್ದ ಹರಿದು ಬಂದ ಟೀಕೆಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಕೌಂಟರ್‍ ಕೊಟ್ಟಿದ್ದಾರೆ.

ತಾನು ಬಿಗ್ ಬಾಸ್ ಮನೆಗೆ ಹೋಗಿದ್ದು ಏಕೆ ಎಂದು ಶಾಸಕ ಪ್ರದೀಪ್ ಈಶ್ವರ್‍ ಸುದ್ದಿ ತಿಳಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊಟಿವೇಷನ್ ಮಾಡುವ ನಿಟ್ಟಿನಲ್ಲಿ ರಿಯಾಲಿಟಿ ಶೋಗೆ ಅತಿಥಿಯಾಗಿ ಮೂರು ತಾಸು ಬರಲು ಹೇಳಿದ್ದರು. ಅದರಂತೆ ನಾನು ಆಯೋಜಕರ ಆಹ್ವಾನದ ಮೇರೆಗೆ ಬಿಗ್ ಬಾಸ್ ಮನೆಗೆ ಹೋಗಿ ಬಂದೆ. ಬಿಗ್ ಬಾಸ್ ಮನೆಯಲ್ಲಿರುವ ಯುವಕರಿಗೆ ಅನುಕೂಲವಾಗಲಿ ಎಂದು ಭಾವಿಸಿ ಹೋಗಿದ್ದೆ ವಿನಃ ಬೇರೆ ಉದ್ದೇಶದಿಂದಲ್ಲ. ಆದರೆ ನನ್ನನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ ನಾನು ಅಂತಹ ಟೀಕೆಗಳಿಗೆ ಕಿವಿಗೊಡುವುದಿಲ್ಲ. ಟೀಕೆಗಳು, ಹೊಗಳಿಕೆಗಳು ಎರಡನ್ನು ನಾನು ತಲೆಗೆ ಹಾಕಿಕೊಳ್ಳುವುದಿಲ್ಲ ಎಂದು ಟೀಕಾಕಾರರಿಗೆ ಟಾಂಗ್ ಕೊಟ್ಟಿದ್ದಾರೆ.

Most Popular

To Top