Film News

ಸ್ಟಾರ್ ನಟಿಯರಾದ ತ್ರಿಷಾ ಹಾಗೂ ಅನುಷ್ಕಾ ಖ್ಯಾತ ಹಾಸ್ಯ ನಟ ಸುನೀಲ್ ರನ್ನು ಅವಮಾನಿಸಿದ್ರಾ, ವೈರಲ್ ಆದ ಸುದ್ದಿ….!

ತೆಲುಗು ಸಿನಿರಂಗದ ಖ್ಯಾತ ಹಾಸ್ಯ ನಟ ಸುನೀಲ್ ಅನೇಕ ಸಿನೆಮಾಗಳಲ್ಲಿ ಪ್ರಧಾನ ನಾಯಕನಾಗಿ ನಟಿಸಿದ್ದಾರೆ. ಕೆರಿಯರ್‍ ಆರಂಭದಲ್ಲಿ ಉದಯ್ ಕಿರಣ್, ನಿತಿನ್, ತರುಣ್, ವೆಂಕಟೇಶ್, ನಾಗಾರ್ಜುನ್ ರವರಂತಹ ನಟರೊಂದಿಗೆ ನಟಿಸಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ. ಅದರಲ್ಲೂ ಅವರ ನುವ್ವೆ ನುವ್ವೆ, ಮನಸಂತಾ ನುವ್ವೆ, ನುವ್ವು ನಾಕು ನಚ್ಚಾವು, ಮನ್ಮಧುಡು ಮೊದಲಾದ ಸಿನೆಮಾಗಳಲ್ಲಿ ಮಾಡಿದ ಹಾಸ್ಯ ಈಗಲೂ ಸಹ ತುಂಬಾನೆ ಫೇಮಸ್ ಆಗಿದೆ ಎನ್ನಬಹುದಾಗಿದೆ.

ಅನೇಕ ಸಿನೆಮಾಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದ ಸುನೀಲ್ ರವರಿಗೆ ಹಿರೋ ಆಗಿ ಅವಕಾಶಗಳು ಬಂದವು. ಅಂದಾಲರಾಮುಡು ಎಂಬ ಸಿನೆಮಾದ ಬಳಿಕ ಆತನಿಗೆ ಅನೇಕ ಆಫರ್‍ ಗಳೂ ಸಹ ಬಂದವು. ಆದರೆ ಹಿರೋ ಆಗಿ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು ಎಂದೇ ಹೇಳಬಹುದು. ಸಾಲು ಸಾಲು ಸೋಲುಗಳನ್ನು ಕಂಡ ಹಿನ್ನೆಲೆಯಲ್ಲಿ ಅವರು ಮತ್ತೆ ಕ್ಯಾರೆಕ್ಟರ್‍ ಆರ್ಟಿಸ್ಟ್ ಆದರು. ಇದೀಗ ಪ್ರಮುಖ ಪಾತ್ರಗಳನ್ನು ಪೋಷಣೆ ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸುನೀಲ್ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅವರ ಕಾಮೆಂಟ್ ಗಳು ಹಾಟ್ ಟಾಪಿಕ್ ಆಗಿದೆ. ತಾನು ಹಾಸ್ಯ ನಟನಾದ ಕಾರಣದಿಂದ ಹಿರೋಯಿನ್ ಗಳು ಅವರ ಸಿನೆಮಾಗಳನ್ನು ರಿಜೆಕ್ಟ್ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ.

ಸಂರ್ದಶನದಲ್ಲಿ ಸುನೀಲ್ ರವರಿಗೆ ಪ್ರಶ್ನೆಯೊಂದು ಎದುರಾಗಿತ್ತು. ನೀವು ಹಾಸ್ಯ ನಟರಾಗಿದ್ದ ಕಾರಣದಿಂದ ನಿಮ್ಮನ್ನು ಹಿರೋಯಿನ್ ಗಳು ಕಡಿಮೆ ಮಾಡಿ ನೋಡಿದ್ರಾ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಸುನೀಲ್ ನಾನು ಹಾಸ್ಯ ನಟನಾದ ಹಿನ್ನೆಲೆಯಲ್ಲಿ ಕೆಲವು ಹಿರೋಯಿನ್ ಗಳು ಇಂಟ್ರಸ್ಟ್ ತೋರಿಸಲಿಲ್ಲ. ಅದರಲ್ಲೂ ಮುಖ್ಯವಾಗಿ ರಾಜಮೌಳಿಯವರ ಮರ್ಯಾದ ರಾಮನ್ನ ಸಿನೆಮಾಗೆ ಈ ರೀತಿಯ ಸಮಸ್ಯೆಗಳು ಎದುರಾಗಿದ್ದವು. ಈ ಸಿನೆಮಾಗಾಗಿ ಮೊದಲು ಅನುಷ್ಕಾ ರವರನ್ನು ಕೇಳಿದ್ದರು. ಆದರೆ ಅವರು ರಿಜೆಕ್ಟ್ ಮಾಡಿದ್ದರು. ಬಳಿಕ ತ್ರಿಷಾ ರವರನ್ನು ಸಂಪರ್ಕ ಮಾಡಲಾಗಿತ್ತು. ಅವರೂ ಸಹ ರಿಜೆಕ್ಟ್ ಮಾಡಿದರು. ಬಳಿಕ ಸಲೋನಿಯನ್ನು ತೆಗೆದುಕೊಳ್ಳಲಾಯಿತು.  ಕೆಲವು ಸ್ಟಾರ್‍ ನಟಿಯರು ಎಲ್ಲರ ಮುಂದೆ ಸುನೀಲ್ ಜೊತೆ ನಟಿಸಬೇಕೆಂದು ಹೇಳುತ್ತಾರೆ ಆದರೆ ಸಿನೆಮಾ ಬಗ್ಗೆ ಕೇಳಿದರೇ ರಿಜೆಕ್ಟ್ ಮಾಡುತ್ತಾರೆ ಎಂದು ಸುನೀಲ್ ಹೇಳಿದ್ದಾರೆ.

ಆದರೆ ಅಂದಾಲ ರಾಮುಡು ಸಿನೆಮಾಗೆ ಅಂತಹ ಸಮಸ್ಯೆ ಎದುರಾಗಿರಲಿಲ್ಲ. ಈ ಸಿನೆಮಾದ ಕಥೆಯನ್ನು ಕೇಳಿದ ಕೂಡಲೇ ದಿವಂಗತ ನಟಿ ಆರ್ತಿ ಅಗರ್ವಾಲ್ ಕೂಡಲೇ ಒಪ್ಪಿಕೊಂಡರು. ಏನೇ ಆದರೂ ನನ್ನ ಜೊತೆಗೆ ನಟಿಸುವುದು, ನಟಿಸದೇ ಇರುವುದು ಅವರ ವೈಯುಕ್ತಿಕ ವಿಚಾರ ಎಂದು ಹೇಳಿದ್ದಾರೆ. ಇನ್ನೂ ಸುನೀಲ್ ಹಂಚಿಕೊಂಡ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

Most Popular

To Top