Film News

ಡೈರೆಕ್ಟರ್ ಕರೆದ್ರು ಅಂತಾ ಹೋದರೇ ಸೀರೆ ಬಿಚ್ಚಿ ಮಲಗು ಎಂದ್ರಂತೆ, ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಜ್ಯೋತಿ….!

ಸಿನಿರಂಗದಲ್ಲಿ ಅನೇಕ ನಟಿಯರು, ಕಲಾವಿದರು ಹೇಳಿಕೊಳ್ಳಲು ಆಗದಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಮಿಟೂ ಎಂಬ ಅಭಿಯಾನ ಶುರುವಾದ ಬಳಿಕ ಕೆಲವು ಕಲಾವಿದರು ತಾವು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದೀಗ ಕ್ಯಾರೆಕ್ಟರ್‍ ಆರ್ಟಿಸ್ಟ್ ಜ್ಯೋತಿ ಸಹ ತಮಗಾದ ಕಹಿ ಅನುಭವವೊದನ್ನು ಹೇಳಿಕೊಂಡಿದ್ದಾರೆ. ನಿರ್ದೇಶಕರೊಬ್ಬರ ಆಕೆಯ ಬಳಿ ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಆಕೆ ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗಿದೆ.

ನಟಿ ಜ್ಯೋತಿ ಇದ್ದಿದ್ದು ಇದ್ದಂಗೆ ಹೇಳುವ ಪ್ರವೃತ್ತಿ ಹೊಂದಿದವರಾಗಿದ್ದಾರೆ. ಅನೇಕ ವಿಚಾರಗಳ ಬಗ್ಗೆ ಆಕೆ ಅನೇಕ ಬಾರಿ ನೇರವಾಗಿಯೇ ಹೇಳಿದ್ದಾರೆ. ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ರೊಮ್ಯಾಂಟಿಕ್ ಪಾತ್ರಗಳ ಮೂಲಕ ತನ್ನದೇ ಆದ ಕ್ರೇಜ್ ಸಹ ಪಡೆದುಕೊಂಡಿದ್ದಾರೆ. ಅನೇಕ ಸಿನೆಮಾಗಳಲ್ಲಿ ವ್ಯಾಂಪ್ ಪಾತ್ರಗಳಲ್ಲೂ ಸಹ ಆಕೆ ನಟಿಸಿದ್ದಾರೆ. ವ್ಯಾಂಪ್ ರೋಲ್ ಜೊತೆಗೆ ಕೊಂಚ ಕಾಮಿಡಿ ಸಹ ಟಚ್ ಮಾಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.  ಇನ್ನೂ ಇತ್ತೀಚಿಗೆ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆಕೆ ಸ್ಟಾರ್‍ ನಿರ್ದೇಶಕ ಇವಿವಿ ಸತ್ಯನಾರಾಯಣ ಬಗ್ಗೆ ನಟಿ ಜ್ಯೋತಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

ಈವಿವಿ ಸತ್ಯನಾರಾಯಣ ರವರು ತೊಟ್ಟಿ ಗ್ಯಾಂಗ್ ಎಂಬ ಸಿನೆಮಾದಲ್ಲಿ ನಟಿಸುವ ಅವಕಾಶ ಕೊಟ್ಟರು. ಸಾಮಾನ್ಯವಾಗಿ ಅವರು ಕಥೆಯನ್ನು ನಟ ನಟಿಯರಿಗೆ ಹೇಳಿದರು. ನನಗೆ ಕ್ಯಾರೆಕ್ಟರ್‍ ಸಹ ಫಿಕ್ಸ್ ಮಾಡಿದ್ರು, ಶೂಟಿಂಗ್ ಗೆ ಬನ್ನಿ ಎನ್ನುತ್ತಾರೆ. ಮತ್ತೇ ಎವಡಿಗೋಲ ವಾಡಿದಿ ಎಂಬ ಸಿನೆಮಾದಲ್ಲೂ ಸಹ ಒಳ್ಳೆಯ ಪಾತ್ರ ಕೊಟ್ಟರು. ಆ ಸಿನೆಮಾದಲ್ಲಿನ ರೋಲ್ ನನಗೆ ತುಂಬಾ ಇಷ್ಟವಾಗಿತ್ತು. ಅದೇ ಸಿನೆಮಾದಲ್ಲಿ ತೆಲಂಗಾಣ ಶಕುಂತಲಾ ಸಹ ನಟಿಸಿದ್ದರು. ಆಕೆಗೆ ಆಕೆಯ ಪಾತ್ರ ಏನು ಎಂದು ಹೇಳಿರಲಿಲ್ಲ. ಆದರೆ ಕೃಷ್ಣ ಭಗವಾನ್ ಜೊತೆಗೆ ಆಕೆಗೆ ಫನ್ನಿ ಬೆಡ್ ಸೀನ್ ಇತ್ತು. ಅದು ಮಾಡಲು ಆಕೆ ಸಹ ತುಂಬಾ ಕಿರಿಕಿರಿ ಅನುಭವಿಸಿದ್ದರು. ಶೂಟಿಂಗ್ ಮಧ್ಯೆ ನಾನು ಆ ಸೀನ್ ಮಾಡೊಲ್ಲ ಎಂದು ಹೋಗಲು ಹೇಗೆ ಸಾಧ್ಯ. ಬಳಿಕ ಆಕೆ ನಾನು ಅಂತಹ ದೃಶ್ಯದಲ್ಲಿ ನಟಿಸೊಲ್ಲ ಎಂದು ಸಹ ಹೇಳಿದ್ದರು. ನನಗೆ ಕಿತಕಿತಲು ಸಿನೆಮಾದಲ್ಲಿ ಪಾತ್ರವೊಂದನ್ನು ನೀಡಿದ್ದರು. ಆದರೆ ನನ್ನ ಪಾತ್ರ ಏನು ಎಂಬ ವಿಚಾರ ಹೇಳಿರಲಿಲ್ಲ.  ನಾಳೆ ಶೂಟಿಂಗ್ ಇದೆ ಬಂದು ಬಿಡು ಎಂದು ಹೇಳಿದ್ದರು. ನಾನು ಅವರು ಕೇಳಿದ್ದಾರೆ ಎಂದು ಹೋದೆ.

ಆದರೆ ಅದು ವ್ಯಾಂಪ್ ರೋಲ್ ಆಗಿತ್ತು. ಸೆಟ್ ಚೆನ್ನಾಗಿ ರೆಡಿ ಮಾಡಿದ್ದರು. ನಾನು ಹೋಗಿದ ಕೂಡಲೇ ಸೀರೆ ಕಾಸ್ಟ್ಯೂಮ್ ಸಹ ಕೊಟ್ಟರು. ಆ ಸಮಯದಲ್ಲಿ ಇವಿವಿ ರವರು ಸೀರೆ ಬಿಚ್ಚಿ ಅಲ್ಲಿ ಮಲಗು, ಸೆರಗಿ ತೆಗೆದು ನಟಿಸಬೇಕು ಎಂದು ಹೇಳಿದ್ದರು. ಸೆಟ್ ನಲ್ಲಿ ಅನೇಕರು ಇದ್ದರು. ನನಗೆ ತುಂಬಾ ಕಿರಿಕಿರಿ ಅನ್ನಿಸಿತ್ತು. ನಾನು ಆ ಪಾತ್ರ ಇಷ್ಟವಿರಲಿಲ್ಲ. ಕೂಡಲೇ ನನಗೆ ಈ ಸೀನ್ ಮಾಡೋಕೆ ಕಿರಿಕಿರಿ ಆಗುತ್ತಿದೆ. ಈ ದೃಶ್ಯ ಬದಲಿಸಿ ಎಂದು ಹೇಳಿದ್ದೆ. ನನಗೆ ಎದುರು ಹೇಳುತ್ತೀಯಾ ನಾನು ಹೇಳಿದ್ರೆ ಕೇಳೊಲ್ವ ಎಂದು ಅವರು ನನ್ನ ಮೇಲೆ ಕೋಪಗೊಂಡರು. ನಾನು ಮಾಡೋದೆ ಇಲ್ಲ ಎಂದು ಹೇಳಿದ್ದೆ. ಅಲ್ಲಿದ್ದರೇ ನನ್ನನ್ನು ಮನವೊಲಿಸುತ್ತಾರೆ ಎಂದು ಅಲ್ಲಿಂದ ಹೊರಟು ಬಿಟ್ಟೆ. ಅಂದಿನಿಂದ ನಾನು ಇವಿವಿ ರವರ ಸಿನೆಮಾದಲ್ಲಿ ನಟಿಸಲಿಲ್ಲ ಎಂದು ಜ್ಯೋತಿ ಹೇಳಿದ್ದಾರೆ. ಆಕೆಯ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Most Popular

To Top