Film News

ಬಿಚ್ಚಗಾಡು ಸಿನೆಮಾ ಮಿಸ್ ಮಾಡಿಕೊಂಡೆ ಎಂದ ತೆಲುಗು ನಟ ಶ್ರೀಕಾಂತ್….!

ತೆಲುಗು ಸಿನಿರಂಗದಲ್ಲಿ ಫ್ಯಾಮಿಲಿ ಹಿರೋ ಆಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಶ್ರೀಕಾಂತ್. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್‍ ರೋಲ್ಸ್ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ.  ಶ್ರೀಕಾಂತ್ ತನ್ನ ಕೆರಿಯರ್‍ ಆರಂಭದಲ್ಲಿ ವಿಲನ್ ಪಾತ್ರಗಳನ್ನು ಪೋಷಣೆ ಮಾಡಿದ್ದರು. 1995 ರಿಂದಲೇ ಹಿರೋ ಆಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ.  ಇದೀಗ ಅವರು ಮತ್ತೆ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ತಾನು ಬಿಚ್ಚಗಾಡು ಸಿನೆಮಾ ಮಿಸ್ ಮಾಡಿಕೊಂಡ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ.

ಕಳೆದ 2016 ರಲ್ಲಿ ಬಿಡುಗಡೆಯಾದ ಬಿಚ್ಚಗಾಡು ಸಿನೆಮಾ ಭಾರಿ ಸಕ್ಸಸ್ ಕಂಡಿತ್ತು. ಈ ಸಿನೆಮಾದಲ್ಲಿ ವಿಜಯ್ ಆಂಟೋನಿ ಬದಲಿಗೆ ಶ್ರೀಕಾಂತ್ ನಟಿಸಬೇಕಿತ್ತಂತೆ. ಆದರೆ ಕೆಲವೊಂದು ಕಾರಣಗಳಿಂದ ಶ್ರೀಕಾಂತ್ ಬದಲಿಗೆ ವಿಜಯ್ ಆಂಟೋನಿ ನಟಿಸಬೇಕಾಯಿತು. ಬಿಚ್ಚಗಾಡು ಸಿನೆಮಾದ ತೆಲುಗು ವರ್ಷನ್ ನಲ್ಲಿ ಶ್ರೀಕಾಂತ್ ಜೊತೆಗೆ ಮಾಡಬೇಕು ಎಂದುಕೊಂಡಿದ್ದರಂತೆ. ಮಹತಾಮ್ ಸಿನೆಮಾಗೆ ಆಂಟೋನಿ ಮ್ಯೂಸಿಕ್ ಡೈರೆಕ್ಟರ್‍ ಆಗಿ ಕೆಲಸ ಮಾಡಿದ್ದರಂತೆ. ಇದೇ ಸಮಯದಲ್ಲಿ ಶ್ರೀಕಾಂತ್ ಹಾಗೂ ಆಂಟೋನಿ ನಡುವೆ ಸ್ನೇಹ ಏರ್ಪಟ್ಟಿತ್ತಂತೆ. ಈ ಸಮಯದಲ್ಲೇ ಬಿಚ್ಚಗಾಡು ಸಿನೆಮಾದ ತೆಲುಗು ರಿಮೇಕ್ ನಲ್ಲಿ ಶ್ರೀಕಾಂತ್ ಜೊತೆ ಮಾಡಬೇಕೆಂದುಕೊಂಡು ನಿರ್ಮಾಪಕ ಚದಲವಾಡ ತಿರುಪತಿ ರಾವ್ ರನ್ನು ಸಹ ಭೇಟಿ ಆಗಿದ್ದರಂತೆ. ಈ ವಿಚಾರಗಳನ್ನು ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಶ್ರೀಕಾಂತ್ ಇಮೇಜ್ ಗೆ ತಕ್ಕಂತೆ ಮದರ್‍ ಸೆಂಟಿಮೆಂಟ್ ಸಹ ಮತಷ್ಟು ಏರಿಸಬೇಕೆಂದು ಪ್ಲಾನ್ ಮಾಡಿದ್ದರಂತೆ. ಆದರೆ ಬಡ್ಜೆಟ್ ಕಾರಣದಿಂದ ನಿರ್ಮಾಪಕ ಹಿಂದೆಸರಿದರಂತೆ. ಇದರಿಂದ ಬಿಚ್ಚಗಾಡು ಸಿನೆಮಾ ತೆಲುಗು ರಿಮೇಕ್ ಕಾರ್ಯರೂಪಕ್ಕೆ ಬರಲಿಲ್ಲವಂತೆ. ಇನ್ನೂ ಈ ಸಿನೆಮಾ ಏನಾದರೂ ಶ್ರೀಕಾಂತ್ ಮಾಡಿದ್ದರೇ ಆತನ ಕೆರಿಯರ್‍ ಮತಷ್ಟು ಏರುತ್ತಿದ್ದು ಎಂದು ಹೇಳಬಹುದಾಗಿದೆ. ಇನ್ನೂ ಇದಾಗದ ಕಾರಣದಿಂದ ನಿರ್ಮಾಪಕ ಚದಲವಾಡ ತಿರುಪತಿ ರಾವ್ ರವರು ತೆಲುಗಿನಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಯಿತು. ಈ ಸಿನೆಮಾ ಭಾರಿ ಸಕ್ಸಸ್ ಕಂಡಿದ್ದು, ನಿರ್ಮಾಪಕರಿಗೆ ಒಳ್ಳೆಯ ಲಾಭ ಸಹ ತಂದುಕೊಟ್ಟಿದೆ.

ಇನ್ನೂ ಬಿಚ್ಚಗಾಡು ಸಿನೆಮಾದ ಸೀಕ್ವೆಲ್ ಬಿಚ್ಚಗಾಡು-2 ಸಹ ಸೆಟ್ಟೇರಿದೆ. ಬಿಚ್ಚಗಾಡು ಸಿನೆಮಾವನ್ನು ಶಶಿ ಎಂಬ ನಿರ್ದೇಶಕ ನಿರ್ದೇಶನ ಮಾಡಿದ್ದಾರೆ. ಆಂಟೋನಿ ಹಿರೋ ಆಗಿ ನಟಿಸಿದ್ದು, ನಿರ್ಮಾಪಕ ಸಹ ಆಗಿದ್ದಾರೆ. ಬಿಚ್ಚಗಾಡು-2 ಸಿನೆಮಾವನ್ನು ಆಂಟೋನಿ ರವರೇ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಬಿಚ್ಚಗಾಡು-2 ಸಿನೆಮಾದ ಶೂಟಿಂಗ್ ಸಮಯದಲ್ಲಿ ಆಂಟೋನಿಗೆ ಭಾರಿ ಆಕ್ಸಿಡೆಂಟ್ ಆಗಿತ್ತು. ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

Most Popular

To Top