News

ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಸಿಹಿ ಸುದ್ದಿ, ಬಸ್ ನಲ್ಲಿ ತಿರುಪತಿ ಟೂರ್ ಪ್ಯಾಕೇಜ್, ಉಚಿತ ದರ್ಶನದ ಜೊತೆಗೆ ಮತ್ತಷ್ಟು ಸೌಲಭ್ಯ…!

ದೇಶದ ಶ್ರೀಮಂತ ಹಾಗೂ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇದೀಗ ತೆಲಂಗಾಣ ಪ್ರವಾಸೋದ್ಯಮ ವತಿಯಿಂದ ಹೊಸ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಸದ್ಯ ಹೈದರಾಬಾದ್ ನಿಂದ ಮಾತ್ರ ಲಭ್ಯವಿದೆ. ಯಾದಗಿರಿ, ಗುಲ್ಬರ್ಗಾ, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದಿಂದ ತಿರುಪತಿಗೆ ಹೋಗುವ ಭಕ್ತರಿಗೆ ಈ ಪ್ಯಾಕೇಜ್ ಅನುಕೂಲವಾಗಲಿದೆ. ಈ ಪ್ಯಾಕೇಜ್ ಮೂರು ದಿನಗಳ ಕಾಲ ಇರಲಿದ್ದು, ಈ ಪ್ಯಾಕೇಜ್ ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ತಿರುಮಲ ತಿಮ್ಮಪ್ಪನ ಉತ್ತರ ಕರ್ನಾಟಕ ಭಾಗದ ಭಕ್ತರಿಗೆ ಇದು ಗುಡ್ ನ್ಯೂಸ್ ಆಗಿದೆ. ತೆಲಂಗಾಣ ಪ್ರವಾಸೋದ್ಯಮ ತಿರುಮಲ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಮೂರು ದಿನಗಳ ಕಾಲ ಇರಲಿದೆ. ಮೊದಲ ದಿನದ ಸಂಜೆ ಹೈದರಾಬಾದ್ ನ KPHP, ಸಿಕಿಂದರಾವಾದ್, ಬೇಗಂ ಪೇಟ್ ಹಾಗೂ ಬಶೀರ್‍ ಬಾಗ್ ನಲ್ಲಿ ಪ್ರವಾಸೋದ್ಯಮ ಬಸ್ ಹತ್ತಬೇಕು. ಎರಡನೇ ದಿನ ಈ ಬಸ್ ತಿರುಮಲಕ್ಕೆ ತಲುಪಲಿದೆ. ಬಳಿಕ ಕೆಲ ಸಮಯ ವಿಶ್ರಾಂತಿ ಪಡೆದು ಸ್ಥಳೀಯವಾಗಿರುವ ದೇವಾಲಯಗಳಿಗೆ ಭೇಟಿ ನೀಟಿ ಬಳಿಕ ತಿರುಮಲದಲ್ಲಿರುವ ಶ್ರೀವಾರಿಯ ದರ್ಶನ ಸಹ ಶೀಘ್ರವಾಗಿ ನಡೆಯಲಿದೆ. ದರ್ಶನದ ಬಳಿಕ ಮೂರನೇ ದಿನ ಹೈದರಾಬಾದ್ ಗೆ ವಾಪಸ್ಸು ಆಗಲಿದೆ. ಇನ್ನೂ ಈ ಪ್ಯಾಕೇಜ್ ದರದ ವಿಚಾರಕ್ಕೆ ಬಂದರೇ ವಯಸ್ಕತಿಗೆ 3700 ಮಕ್ಕಳಿಗೆ  2960 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಬಸ್ ಪ್ರಯಾಣದ ಜೊತೆಗೆ ತಿರುಮಲದಲ್ಲಿ ಉಚಿತವಾಗಿ ಹಾಗೂ ಶೀಘ್ರವಾಗಿ ದರ್ಶನ ಮಾಡಿಕೊಳ್ಳಬಹುದಾಗಿದೆ.

ಇನ್ನೂ ವಿಮಾನ ಪ್ಯಾಕೇಜ್ ಸಹ ಲಭ್ಯವಿದೆ. ಬೆಳಿಗ್ಗೆ 6.55ಕ್ಕೆ ಹೈದರಾಬಾದ್ ನ ವಿಮಾನದಲ್ಲಿ ಪ್ರಯಾಣಿಸಿದರೇ ಬೆಳಿಗ್ಗೆ 8 ಗಂಟೆಗೆ ರೇಣಿಗುಂಟಾ ವಿಮಾನ ನಿಲ್ದಾಣಕ್ಕೆ ತಲುಪುತ್ತದೆ. ಬಳಿಕ ಕಾರಿನಿಂದ ತಿರುಪತಿಯ ಹೋಟೆಲ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಫ್ರೇಶ್ ಆದ ಬಳಿಕ ಕಾರಿನಲ್ಲೇ ತಿರುಮಲಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಎರಡು ಗಂಟೆಯಲ್ಲಿ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪೂರ್ಣಗೊಳ್ಳಲಿದೆ. ಈ ಪ್ಯಾಕೇಜ್ ಬೆಲೆ 12,999 ರೂಪಾಯಿಯಾಗಿದೆ. ಈ ಪ್ಯಾಕೇಜ್ ನಲ್ಲಿ ವಿಮಾನ ಟಿಕೆಟ್, ಸ್ಥಳೀಯ ಸಾರಿಗೆ, ತಿರುಮಲದಲ್ಲಿ ವಿಶೇಷ ಪ್ರವೇಶ ದರ್ಶನ ಒಳಗೊಂಡಿದೆ. ತಾವು ಈ ಪ್ಯಾಕೇಜ್ ನ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಬುಕ್ ಮಾಡಲು https://tourism.telangana.gov.in/ ಭೇಟಿ ನೀಡಬಹುದಾಗಿದೆ.

Most Popular

To Top