News

ಮಗು ತನ್ನ ತಂದೆಯನ್ನು ಭೇಟಿಯಾಗಬಾರದೆಂದು ಹೆತ್ತ ಮಗುವನ್ನೆ ಕೊಲೆ ಮಾಡಿದ ಪಾಪಿ ತಾಯಿ, ಸಿಇಒ ಸುಚನಾ ಬಂಧನ…..!

ತಾಯಿಯೊಬ್ಬರು ಹೆತ್ತ ಮಗುವನ್ನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತನ್ನ ಮಗು ತಂದೆಯನ್ನು ಭೇಟಿಯಾಗಬಾರದು ಎಂಬ ಕಾರಣಕ್ಕಾಗಿ ಸ್ಟಾರ್ಟ್ ಅಪ್ ಕಂಪನಿಯೊಂದರ ಸಿಇಒ ಸುಚನಾ ಸೇಠ್ ಎಂಬಾಕೆ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ತನ್ನ ಮಗು ಪತಿಯನ್ನು ಭೇಟಿಯಾಗುವುದು ಇಷ್ಟವಿಲ್ಲದ ಕಾರಣ ಸುಚನಾ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.

ಆರೋಪಿ ಸುಚನಾ ಕಳೆದ 2010 ರಲ್ಲಿ ಮದುವೆಯಾಗಿದ್ದರು, 2019 ರಲ್ಲಿ ಈ ದಂಪತಿಗೆ ಒಂದು ಮಗು ಜನಿಸಿತ್ತು. ಆದರೆ ಪತಿ ಹಾಗೂ ಪತ್ನಿಯ ನಡುವಣ ಕೆಲವೊಂದು ವಿಬೇದಗಳ ಕಾರಣದಿಂದ 2020 ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ವಿಚ್ಚೇದನ ನೀಡಿದೆ. ಪ್ರತೀ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ನ್ಯಾಯಾಲಯ ಅನುಮತಇ ನೀಡಿತ್ತು. ಆದರೆ ತನ್ನ ಮಗುವನ್ನು ಪತಿ ಭೇಟಿಯಾಗುವುದು ಸುಚನಾಗೆ ಇಷ್ಟವಿರಲಿಲ್ಲವಂತೆ. ಆದ್ದರಿಂದ ತನ್ನ ಮಗುವನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ತನ್ನ ನಾಲ್ಕು ವರ್ಷದ ಮಗನನ್ನು ಸುಚನಾ ಕಳೆದ ಶನಿವಾರ ಗೋವಾದ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾಳೆ. ಸೋಮವಾರ ಅಲ್ಲಿಂದ ರೂಂ ಖಾಲಿ ಮಾಡಿ ಟ್ಯಾಕ್ಸಿ ಮೂಲಕ ಕರ್ನಾಟಕಕ್ಕೆ ವಾಪಸ್ಸಾಗಿದ್ದಾಳೆ.

ಬಳಿಕ ಹೋಟೆಲ್ ಸಿಬ್ಬಂದಿ ಸುಚನಾ ಇದ್ದ ಕೋಣೆಯನ್ನು ಸ್ವಚ್ಚಮಾಡಲು ಹೋದಾಗ ಅಲ್ಲಲ್ಲಿ ರಕ್ತದ ಕಲೆಗಳು ಇರೋದು ಕಂಡುಬಂದು ಅನುಮಾನಗೊಂಡಿದ್ದಾರೆ. ಹೋಟೆಲ್ ಸಿಬ್ಬಂದಿ ಮ್ಯಾನೇಜ್ ಮೆಂಟ್ ಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಹೋಟೆಲ್ ಗೆ ಬರುವಾಗ ಸುಚನಾ ಹಾಗೂ ಮಗು ಇಬ್ಬರೂ ಬಂದಿದ್ದಾರೆ, ಹೋಗುವಾಗ ಸುಚನಾ ಒಬ್ಬರೇ ಹೋಗಿದ್ದಾರೆ. ಇದರಿಂದ ಸುಚನಾ ಮೇಲೆ ಅನುಮಾನ ಬಂದು ಆಕೆ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್‍ ಗೆ ಕರೆ ಮಾಡಿ ಸುಚನಾ ಸೇಠ್ ಜೊತೆಗೆ ಮಾತನಾಡಿದ್ದಾರೆ. ಆದರೆ ಆಖೆ ಮಗನನ್ನು ತನ್ನ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾಗಿ ಹೇಳಿದ್ದಾಳೆ.

ನಂತರ ಸುಚನಾ ನೀಡಿದ ವಿಳಾಸ ಪರಿಶೀಲನೆ ನಡೆಸಿದಾಗ ಅದು ಸುಳ್ಳು ಎಂದು ಗೊತ್ತಾಗಿದೆ. ಬಳಿಕ ಟ್ಯಾಕ್ಸಿ ಡ್ರೈವರ್‍ ಗೆ ಹೈವೇ ಬಳಿ ಪೊಲೀಸ್ ಠಾಣೆ ಕಂಡ ಕೂಡಲೇ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅವರ ಸೂಚನೆಯಂತೆ ಟ್ಯಾಕ್ಸಿ ಡ್ರೈವರ್‍ ಎನ್.ಹೆಚ್-4 ರ ಐಮಂಗಳ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿ ಪೊಲೀಸರಿಗೆ ಸುಚನಾಳನ್ನು ಒಪ್ಪಿಸಿದ್ದು, ಕಾರ್‍ ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Most Popular

To Top