Film News

ನಾಗಚೈತನ್ಯಗೆ ಕೌಂಟರ್ ಕೊಟ್ಟ ಸಮಂತಾ ಪೋಸ್ಟ್? ನಾವು ಬೇರೆಯಾಗಲು ಕಾರಣ ಅದೇ ಎಂದ ನಟಿ……!

ಸಿನಿರಂಗದಲ್ಲಿ ಪ್ರೀತಿ, ಮದುವೆ ಹಾಗೂ ವಿಚ್ಚೇದನ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಈ ಹಾದಿಯಲ್ಲೇ ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಸಿ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದುಕೊಂಡರು. ಇನ್ನೂ ಅವರು ವಿಚ್ಚೇದನ ಪಡೆದುಕೊಳ್ಳಲು ಕಾರಣವಾದರೂ ಏನು ಎಂಬ ವಿಚಾರ ಇಂದಿಗೂ ಸಹ ನಿಗೂಡವಾಗಿಯೇ ಇದೆ. ಕೆಲವು ದಿನಗಳ ಹಿಂದೆ ನಾಗಚೈತನ್ಯ ವಿಚ್ಚೇದನದ ಬಗ್ಗೆ ಮಾತನಾಡಿದ್ದರು. ಅದಕ್ಕೆ ಇದೀಗ ಸಮಂತಾ ಕೌಂಟರ್‍ ಕೊಡುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಪಡೆದುಕೊಂಡು ಅನೇಕ ತಿಂಗಳುಗಳೇ ಕಳೆದಿದ್ದು, ಇಂದಿಗೂ ಸಹ ಅವರಿಬ್ಬರ ವಿಚ್ಚೇದನಕ್ಕೆ ಕಾರಣ ತಿಳಿದಿಲ್ಲ. ವಿಚ್ಚೇದನ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ರಿಯಾಕ್ಟ್ ಆಗಿದ್ದರು. ಕಸ್ಟಡಿ ಸಿನೆಮಾದ ಪ್ರಮೋಷನ್ ನಿಮಿತ್ತ ನಡೆದ ಸಂದರ್ಶನದಲ್ಲಿ ನಾಗಚೈತನ್ಯ ವಿಚ್ಚೇದನ ಬಗ್ಗೆ ಕಾಮೆಂಟ್ಸ್ ಮಾಡಿದ್ದರು. ನಾವು ವಿಚ್ಚೇದನ ಪಡೆದು ದೂರವಾದರೂ ಸಹ ಆಕೆಯೊಂದಿಗೆ ಇದ್ದ ದಿನಗಳನ್ನು ನಾನು ತುಂಬಾ ಗೌರವಿಸುತ್ತೇನೆ. ನಿಜ ಹೇಳಬೇಕಂದರೇ ಆಕೆ ತುಂಬಾ ಒಳ್ಳೆಯವಳು, ಎಲ್ಲಾ ಸಂತೊಷಗಳಿಗೂ ಆಕೆ ಅರ್ಹಳು. ಇನ್ನೂ ನಾವು ಬೇರೆಯಾಗಲು ಮುಖ್ಯ ಕಾರಣವೇ ರೂಮರ್‍ ಗಳು. ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ರೂಮರ್‍ ಗಳು, ಕೆಲವು ಸುದ್ದಿಗಳ ಕಾರಣದಿಂದ ನಮ್ಮ ನಡುವೆ ಗಲಾಟೆ ನಡೆಯಿತು. ಮೊದಲಿಗೆ ರೂಮರ್‍ ಗಳ ಬಗ್ಗೆ ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಅದು ದೊಡ್ಡದಾಗಿ ವಿಚ್ಚೇದನದ ವರೆಗೂ ಬಂದು ಬೇರೆಯಾಗಬೇಕಾದ ಸ್ಥಿತಿ ಎದುರಾಗಿದೆ ಎಂದು ಹೇಳಿದ್ದರು.

ಇನ್ನೂ ನಾಗಚೈತನ್ಯ ಕಾಮೆಂಟ್ ಗಳಿಗೆ ಸಮಂತಾ ಕೌಂಟರ್‍ ಕೊಟ್ಟಿದ್ದಾರೋ ಅಥವಾ ಸಾಮಾನ್ಯವಾಗಿ ಪೋಸ್ಟ್ ಮಾಡಿದ್ದಾರೋ ತಿಳಿಯದು ಆದರೆ ಸಮಂತಾ ಪೋಸ್ಟ್ ಮಾತ್ರ ಸಖತ್ ವೈರಲ್ ಆಗುತ್ತಿದೆ. ಸಮಂತಾ ಹಂಚಿಕೊಂಡ ಪೋಸ್ಟ್ ನಲ್ಲಿ ನಾವೆಲ್ಲರೂ ಒಂದೇ, ಕೇವಲ ಈಗೋ, ನಂಬಿಕೆ, ಭಯಗಳ ಕಾರಣದಿಂದಲೇ ನಾವು ಬೇರೆಯಾಗಿದ್ದೇವೆ ಎಂದು ಕೊಟೇಷನ್ ಪೋಸ್ಟರ್‍ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ಗೆ ಅನೇಕರು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ಚೈತನ್ಯ ಹಾಗೂ ಸಮಂತಾ ಈಗೋ ಕಾರಣದಿಂದಲೇ ಬೇರೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಸಮಂತಾ ಆಗಾಗ ಸೊಷಿಯಲ್ ಮಿಡಿಯಾದಲ್ಲಿ ವಿಚ್ಚೇದನದ ಬಗ್ಗೆ ಈ ರೀತಿಯ ಪರೋಕ್ಷ ಪೋಸ್ಟ್ ಗಳು ಮಾಡುತ್ತಲೇ ಇರುತ್ತಾರೆ.

ಇನ್ನೂ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದುಕೊಳ್ಳಲು ನಿಖರ ಕಾರಣ ಏನು ಎಂಬುದು ಅವರಿಬ್ಬರಿಗೆ ಬಿಟ್ಟರೇ ಅವರ ಕುಟುಂಬಸ್ಥರಿಗೆ ತಿಳಿದಿರಬಹುದು ಅಷ್ಟೇ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಅವರ ವಿಚ್ಚೇದನಕ್ಕೆ ಅನೇಕ ಕಾರಣಗಳು ಹರಿದಾಡಿದ್ದು ಸಹ ತಿಳಿದೇ ಇದೆ. ಇದೀಗ ಅವರಿಬ್ಬರೂ ಅವರವರ ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.

Most Popular

To Top