ವಿವಾಹೇತರ ಸಂಬಂಧಗಳ ಬಗ್ಗೆ ಸೀನಿಯರ್ ನಟಿ ಅರುಣ ಇರಾನಿ ಸಂಚಲನಾತ್ಮಕ ಹೇಳಿಕೆಗಳು….!

Follow Us :

ಸಾಮಾನ್ಯವಾಗಿ ಸಿನಿರಂಗದಲ್ಲಿ ಎಷ್ಟು ಬೇಗ ಲವ್ ಆಗುತ್ತೋ ಅಷ್ಟೇ ಬೇಗ ಬ್ರೇಕಪ್ ಆಗುತ್ತದೆ.  ಎಷ್ಟು ಬೇಗ ಮದುವೆಯಾಗುತ್ತದೆಯೋ ಅಷ್ಟೇ ಬೇಗ ವಿಚ್ಚೇದನಗಳು ಸಹ ನಡೆಯುತ್ತಿರುತ್ತವೆ. ವಯಸ್ಸಿನಲ್ಲಿ ಹಾಫ್ ಸೆಂಚುರಿ ಹೊಡೆದರೂ ಸಹ ಪ್ರೀತಿ ಪ್ರೇಮ ಎಂದು ಅಫೈರ್‍ ಗಳನ್ನು ನಡೆಸುತ್ತಿರುತ್ತಾರೆ. ಅದರಲ್ಲೂ ಬಾಲಿವುಡ್ ನಲ್ಲಿ ಇಂತಹವು ತುಂಬಾನೆ ಹೆಚ್ಚು ನಡೆಯುತ್ತಿರುತ್ತವೆ ಎಂದು ಹೇಳಬಹುದಾಗಿದೆ. ಬಾಲಿವುಡ್ ಸ್ಟಾರ್‍ ಕಲಾವಿದರೂ ಸಹ ಇಂತಹ ಸುದ್ದಿಗಳಿಗೆ ಅತೀತರಲ್ಲ. ಇದೀಗ ವಿವಾಹೇತರ ಸಂಬಂಧಗಳ ಬಗ್ಗೆ ಸೀನಿಯರ್‍ ನಟಿ ಅರುಣ ಇರಾನಿ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸೀನಿಯರ್‍ ನಟಿ ಅರುಣ ಇರಾನಿ ವಿವಾಹೇತರ ಸಂಬಂಧಗಳ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಸಂತೋಷದಿಂದ ಅನ್ಯೋನ್ಯವಾಗಿರುವ ಕುಟುಂಬಗಳು ನಾಶವಾಗಲು ಹೆಂಗಸರೇ ಕಾರಣ ಎಂಬ ವಾದದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಅನೈತಿಕವಾದ ಪ್ರೀತಿ, ವಿವಾಹೇತರ ಸಂಬಂಧಗಳ ಕಾರಣದಿಂದ ಕುಟುಂಬಗಳಲ್ಲಿ ಬರುವಂತಹ ಸಮಸ್ಯೆಗಳಿಗೆ ಮಹಿಳೆಯರನ್ನೇ ಆರೋಪಿಯನ್ನಾಗಿ ಮಾಡಿ ನಿಂದನೆ ಮಾಡುವುದು ಸರಿಯಲ್ಲ. ಒಂದು ಮಹಿಳೆಯ ಸಂಸಾರ ನಾಶವಾಗಲು ಮತ್ತೊಂದು ಮಹಿಳೆಯೇ ಕಾರಣ ಎಂದು ಹೇಳುತ್ತಾರೆ. ಆದರೆ ಆ ರೀತಿಯಲ್ಲಿ ಮಾತನಾಡುವ ಮುನ್ನಾ ಕೊಂಚ ಯೋಚಿಸಬೇಕು. ನಿಮ್ಮನ್ನು ಸಂತೋಷದಿಂದ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಪತಿಯದ್ದೆ ಆಗಿರುತ್ತದೆ. ಬೇರೆ ಮಹಿಳೆಯರದ್ದಲ್ಲ, ಮೊದಲು ನಿಮ್ಮ ಪತಿಯನ್ನು ನೀವು ಹಿಡಿತದಲ್ಲಿಟ್ಟುಕೊಳ್ಳಬೇಕು. ಒಂದು ಸಂಸಾರವನ್ನು ನಾಶ ಮಾಡುವ ಉದ್ದೇಶದಿಂದ ಯಾವುದೇ ಮಹಿಳೆಯ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದಿಲ್ಲ. ಸಂಸಾರ ನಾಶ ಮಾಡುವುದು ಮಹಿಳೆಯರಿಗೆ ತಮಾಷೆಯಲ್ಲ ಎಂದು ಹೇಳಿದ್ದಾರೆ.

ಇನ್ನೂ ಇದಕ್ಕೊಂದು ಉದಾಹರಣೆಯನ್ನು ಸಹ ನೀಡಿದ್ದಾರೆ. ನಟಿ ಹೇಮಾಮಾಲಿನಿ ಕುರಿತು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಹೇಮಾಮಾಲಿನಿ ಧರ್ಮೇಂದ್ರ ಕುಟುಂಬವನ್ನು ನಾಶ ಮಾಡುವ ಉದ್ದೇಶದಿಂದಲೇ ಆಕೆ ಆತನನ್ನು ವಿವಾಹವಾದರು ಎಂದು ಪ್ರಶ್ನೆಗಳನ್ನು ಮಾಡಿದರು. ಮದುವೆಯಾದ ಗಂಡಸಿನೊಂದಿಗೆ ಏಳು ಹೆಜ್ಜೆ ಹಾಕವುದು, ಆತನೊಂದಿಗೆ ರಿಲೇಷನ್ ಶಿಪ್ ಮುಂದುವರೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಪ್ರೀತಿಗೆ ಇರುವಂತಹ ಸೆಕ್ಯುರಿಟಿ, ಮದುವೆಗೆ ಇರುವುದಿಲ್ಲ. ಪ್ರೀತಿಯಿಲ್ಲದೇ ಮದುವೆಯಾಗುವುದು ವ್ಯರ್ಥ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನೂ ಅರುಣ ಇರಾನಿ ಸಹ ಮದುವೆಯಾದ ಸಂದೇಶ ಕೊಹ್ಲಿ ಎಂಬ ನಿರ್ದೇಶಕನನ್ನು ಮದುವೆಯಾದರು.. ಆಕೆ ಮದುವೆಯಾದ ಸಮಯದಲ್ಲಿ ಸಂದೇಶ್ ಕೊಹ್ಲಿಗೆ ಇಬ್ಬರು ಮಕ್ಕಳಿದ್ದರು. ಸದ್ಯ ಅರುಣ ಇರಾನಿ ನೀಡಿದ ಹೇಳಿಕೆಗಳು ವೈರಲ್ ಆಗಿದೆ.