Film News

ಬಾಲಿವುಡ್ ಬಾದ್ ಷಾ ಶಾರುಖ್ ಗೆ ಬೆದರಿಕೆ, ವೈ ಕೆಟಗಿರಿ ಭದ್ರತೆ ಕಲ್ಪಿಸಿದ ಸರ್ಕಾರ…..!

ದೇಶದ ಸಿನಿರಂಗದಲ್ಲಿ ಭಾರಿ ಕ್ರೇಜ್ ಹೊಂದಿರುವ ನಟರ ಸಾಲಿನಲ್ಲಿ ಶಾರುಖ್ ಸಹ ಸೇರುತ್ತಾರೆ. 60ರ ವಯಸ್ಸಿನಲ್ಲಿಯೂ ಸಹ ಆಕ್ಷನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಶಾರುಖ್ ಬ್ಯಾಕ್ ಟು ಬ್ಯಾಕ್ ಡಿಜಾಸ್ಟರ್‍ ಗಳ ಮೂಲಕ ಸಿನೆಮಾಗಳಿಂದ ದೂರವೇ ಉಳಿದರು. ಬಳಿಕ ಪಠಾನ್ ಹಾಗೂ ಜವಾನ್ ಸಿನೆಮಾಗಳ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಇದೀಗ ಅವರಿಗೆ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರ ವೈ ಕೆಟಗಿರಿ ಭದ್ರತೆಯನ್ನು ಕಲ್ಪಿಸಿದೆ.

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ ಶಾರುಖ್ ಖಾನ್ ಇತ್ತೀಚಿಗಷ್ಟೆ ಪಠಾನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 60ರ ವಯಸ್ಸಿನಲ್ಲಿಯೂ ಸಹ ಆಕ್ಷನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಶಾರುಖ್ ಬ್ಯಾಕ್ ಟು ಬ್ಯಾಕ್ ಡಿಜಾಸ್ಟರ್‍ ಗಳ ಮೂಲಕ ಸಿನೆಮಾಗಳಿಂದ ದೂರವೇ ಉಳಿದರು. ಬಳಿಕ ಪಠಾನ್ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಆತನಿಗೆ ಬಿಗ್ ಸಕ್ಸಸ್ ಕೊಡುವುದರ ಜೊತೆಗೆ ಸೂಪರ್‍ ಹಿಟ್ ಇಲ್ಲದೇ ಇರುವಂತಹ ಬಾಲಿವುಡ್ ಗೂ ಸಹ ಒಳ್ಳೆಯ ಸಕ್ಸಸ್ ತಂದುಕೊಟ್ಟರು ಎಂದು ಹೇಳಬಹುದಾಗಿದೆ. ಬಳಿಕ ಜವಾನ್ ಸಿನೆಮಾದ ಮೂಲಕ ಮತ್ತೆ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು ಈ ಸಿನೆಮಾ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಶಾರುಖ್ ಖಾನ್ ರವರಿಗೆ ಮುಂಬೈ ಮಾಫಿಯಾದಿಂದ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಈ ಹಿನ್ನೆಲೆಯಲ್ಲಿ ಅವರಿಗೆ ಮಹಾರಾಷ್ಟ್ರ ಸರ್ಕಾರ ವೈ ಪ್ಲಸ್ ಕೆಟಗಿರಿ ಭದ್ರತೆಯನ್ನು ಒದಗಿಸಿದೆ. ಈ ಕೆಟಗಿರಿಯಲ್ಲಿ ಅವರಿಗೆ ಆರು ಮಂದಿ ಸಿಬ್ಬಂದಿ ನಿರಂತರವಾಗಿ ಶಾರುಖ್ ಖಾನ್ ರವರಿಗೆ ಭದ್ರತೆ ನೀಡುತ್ತಿರುತ್ತಾರೆ. ಜವಾನ್ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಈ ಕಾರಣದಿಂದ ಅವರಿಗೆ ಅಂಡರ್‍ ವರ್ಲ್ಡ್ ಮಾಫಿಯಾದಿಂದ ಬೆದರಿಕೆ ಕರೆಗಳು ಬರುತ್ತಿದೆ ಎಂದು ಶಾರುಖ್ ಖಾನ್ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.  ಈ ಹಿಂದೆ ಸ್ಟಾರ್‍ ನಟ ಸಲ್ಮಾನ್ ಖಾನ್ ರವರಿಗೂ ಸಹ ಮಾಫಿಯಾ ಲೀಡರ್‍ ಗಳು ನೇರವಾಗಿಯೇ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಅವರಿಗೂ ಸಹ ಅಲ್ಲಿನ ಸರ್ಕಾರ ಹೆಚ್ಚಿನ ಭದ್ರತೆಯನ್ನು ಒದಗಿಸಿತ್ತು.

Most Popular

To Top