Film News

ಹಿರಿಯ ನಟಿ ಲೀಲಾವತಿ ನಿಧನ, ಶೋಕಸಾಗರದಲ್ಲಿ ಮುಳುಗಿದ ಕನ್ನಡ ಸಿನಿರಂಗ….!

ಕನ್ನಡ ಸಿನಿರಂಗದ ಹಿರಿಯ ನಟಿ ಲೀಲಾವತಿ ರವರು ವಯೋಸಹಜ ಕಾಯಿಲೆಯಿಂದ ದೈವಾಧೀನರಾಗಿದ್ದು, ಕಳೆದರೆಡು ದಿನಗಳಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದ ಲೀಲಾವತಿಯವರು ಇಂದು ಇಹಲೋಕ ತ್ಯೆಜಿಸಿದ್ದಾರೆ. ಇಂದು (ಡಿ.8) ಮದ್ಯಾಹ್ನ ದಿಢೀರ್‍ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದ್ದು, ಕೂಡಲೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ದಿವಂಗತ ಲೀಲಾವತಿಯವರಯ ಸುಮಾರು 50 ವರ್ಷಗಳ ಕಾಲ ಕನ್ನಡ ಸಿನಿರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರಿಗೆ 86 ವರ್ಷ ವಯಸ್ಸಾಗಿತ್ತು. ವರನಟ ರಾಜ್ ಕುಮಾರ್‍, ವಿಷ್ಣುವರ್ಧನ್ ಸೇರಿದಂತೆ ಅನೇಕ ಸ್ಟಾರ್‍ ನಟರ ಜೊತೆಗೆ ಸುಮಾರು 600 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದರು. ಅವರು ನೆಲಮಂಗಲದ ಸೋಲದೇವನಹಳ್ಳಿ ಬಳಿ ಪುತ್ರ ವಿನೋದ್ ರಾಜ್ ರವರ ಜೊತೆ ವಾಸವಾಗಿದ್ದರು. ಲೀಲಾವತಿ ಹಾಗೂ ವಿನೋದ್ ರಾಜ್ ಸಿನೆಮಾಗಳಿಂದ ದೂರ ಉಳಿದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನೂ ಲೀಲಾವತಿಯವರು ಅನಾರೋಗ್ಯಕ್ಕೆ ಗುರಿಯಾದ ಬಳಿಕ ಶಿವರಾಜ್ ಕುಮಾರ್‍, ಗೀತಾ ಶಿವರಾಜ್ ಕುಮಾರ್‍, ದರ್ಶನ್, ಅಭಿಷೇಕ್ ಅಂಬರೀಶ್, ಅರ್ಜುನ್ ಸರ್ಜಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ಸೇರಿದಂತೆ ಅನೇಕರು ಭೇಟಿ ನೀಡಿ ಲೀಲಾವತಿಯವರ ಆರೋಗ್ಯ ವಿಚಾರಿಸಿ, ವಿನೋದ್ ರಾಜ್ ಗೆ ಧೈರ್ಯ ತುಂಬಿದ್ದರು.

ಲೀಲಾವತಿಯವರು ಚಿತ್ರರಂಗದಿಂದ ದೂರ ಉಳಿದರೂ ಸಹ ಸಿನೆಮಾ ಕಲಾವಿದರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದಾರೆ. ಪ್ರಾಣಿಗಳ ಮೇಲೆ ತುಂಬಾನೆ ಪ್ರೀತಿ ಹೊಂದಿರುವ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಲಿ ಪಶು ಆಸ್ಪತ್ರೆ ನಿರ್ಮಿಸಿ ಕೆಲವು ದಿನಗಳ ಹಿಂದೆಯಷ್ಟೆ ಉದ್ಘಾಟಿಸಲಾಗಿತ್ತು. ಇದೀಗ ಅವರು ವಯೋಸಹಜ ಕಾಯಿಲೆಯಿಂದ ದೇವರಲ್ಲಿ ಲೀನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

Most Popular

To Top