ಕೆಲವು ದಿನಗಳ ಹಿಂದೆಯಷ್ಟೆ ಮಳೆ ಹುಡುಗಿ ಪೂಜಾ ಗಾಂಧಿ ಸರಳವಾಗಿ ಮದುವೆಯಾಗಿದ್ದಾರೆ. ಆಕೆಯ ಪ್ರಿಯಕರ ವಿಜಯ್ ಘೋರ್ಪಡೆ ಎಂಬ ಉದ್ಯಮಿಯನ್ನು ಕುವೆಂಪು ರವರ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾಗಿ ನಾಲ್ಕು ದಿನಗಳ ಕಳೆದಿದ್ದು, ಸದ್ಯ ಈ ಜೋಡಿ ತೀರ್ಥಹಳ್ಳಿಯಲ್ಲಿನ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಮದುವೆಯಾದ ಬಳಿಕ ನವ ದಂಪತಿ ಹನಿಮೂನ್ ಗೆ ಹೋಗುತ್ತಿರುತ್ತಾರೆ. ಆದರೆ ಹನಿಮೂನ್ ಗೆ ಅಂತ ಬೇರೆ ಕಡೆಗೆ ಹೋಗ ಪೂಜಾ ಗಾಂಧಿ ಹಾಗೂ ವಿಜಯ್ ಘೋರ್ಪಡೆ ಶಿವಮೊಗ್ಗದಲ್ಲಿರುವ ಕವಿಶೈಲಕ್ಕೆ ಭೇಟಿ ಕೊಟ್ಟಿದ್ದಾರೆ. ತೀರ್ಥಹಳ್ಳಿಯಲ್ಲಿರುವ ಕುವೆಂಪು ರವರ ಮನೆಗೆ ಭೇಟಿ ನೀಡಿದ್ದಾರೆ. ಮದುವೆಯಾದ ಬಳಿಕ ನೇರವಾಗಿ ಕುಪ್ಪಳಿಯ ಕವಿಶೈಲಕ್ಕೆ ಬಂದಿದ್ದಾರೆ. ಕವಿಶೈಲದಲ್ಲಿ ಓಡಾಡಿ ಪುಲ್ ಖುಷಿ ಪಟ್ಟಿದ್ದಾರೆ. ಅಲ್ಲಿನ ಕಪ್ಪು ಬಂಡೆಗಳ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸರಳವಾದ ಉಡುಗೆ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ ಈ ನವ ಜೋಡಿ. ಈ ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ಎಲ್ಲ ಕಡೆ ವೈರಲ್ ಆಗುತ್ತಿದೆ.
ನಟಿ ಪೂಜಾ ಗಾಂಧಿ ಮತ್ತು ವಿಜಯ್ ಕಳೆದ ನವೆಂಬರ್ 29 ರಂದು ಸರಳವಾಗಿ ಬೆಂಗಳೂರಿನ ಯಲಹಂಕಾದಲ್ಲಿ ಮದುವೆಯಾಗಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಮದುವೆಯಲ್ಲಿ ಭಾಗಿಯಾಗಿ ಜೋಡಿಗೆ ಶುಭ ಕೋರಿದ್ದಾರೆ. ಇನ್ನೂ ಪೂಜಾ ಗಾಂಧಿಗೆ ಕನ್ನಡ ಕಲಿಸಿದ ಗುರುವೇ ಈ ವಿಜಯ್ ಘೋರ್ಪಡೆ. ಆತ ಬೆಂಗಳೂರಿನ ಲಾಜಿಸ್ಟಿಕ್ ಕಂಪನಿಯ ಮಾಲೀಕರಾಗಿದ್ದಾರೆ. ವಿಜಯ್ ರವರ ಕನ್ನಡದ ಪ್ರೀತಿ, ಸಾಹಿತ್ಯ, ಬರವಣಿಗೆ ಎಲ್ಲವನ್ನೂ ಪೂಜಾ ಗಾಂಧಿಯವರ ಮನಸಲ್ಲಿ ಬಿತ್ತಿದ್ದು ವಿಜಯ್ ರವರೇ ಎನ್ನಲಾಗಿದೆ. ಅವರ ಸರಳ ಮದುವೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಹನಿಮೂನ್ ಗೆ ಹೋಗದೇ ಕವಿಶೈಲಕ್ಕೆ ಭೇಟಿ ನೀಡಿದ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.