ಆ ದಿನಗಳು ಎಂಬ ಕನ್ನಡದ ಸಿನೆಮಾ ಮೂಲಕ ಫೇಂ ಪಡೆದುಕೊಂಡ ನಟ ಚೇತನ್ ಅಹಿಂಸಾ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ವಿ.ಡಿ.ಸಾರ್ವಕರ್ ಪೊಟೋ ಜೊತೆಗೆ ಗಾಂಧೀಜಿ ಪೊಟೋ ಸಹ ತೆರವು ಮಾಡಬೇಕು ಎಂದು ಅವರು ಹೇಳಿಕೆ ನೀಡಿದ್ದು, ವಿವಾದ ಸೃಷ್ಟಿಸಿದೆ ಎನ್ನಲಾಗಿದೆ.
ಕರ್ನಾಟಕದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದೆ. ಸುಮಾರು ದಿನಗಳಿಂದ ಸುವರ್ಣ ಸೌಧದಲ್ಲಿ ಸಾರ್ವಕರ್ ರವರ ಪೊಟೋ ತೆರವು ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸೋಷಿಯಲ್ ಮಿಡಿಯಾದಲ್ಲಿ ಹೇಳಿಕೆ ನೀಡಿದ್ದರು. ಸುರ್ವಣ ಸೌಧದಿಂದ ಸಾವರ್ಕರ್ ಪೊಟೋ ತೆಗೆದರೆ ಸೂಕ್ತ. ಅದನ್ನು ನನಗೆ ಬಿಟ್ಟರೇ ಇವತ್ತೆ ತೆಗೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈ ಹೇಳಿಕೆಯ ಬಗ್ಗೆ ರಿಯಾಕ್ಟ್ ಆಗಿರುವಂತಹ ನಟ ಚೇತನ್ ವಿವಾದ ಸೃಷ್ಟಿಸುವಂತ ರಿಪ್ಲೆ ಕೊಟ್ಟಿದ್ದಾರೆ. ಕಾಂಗ್ರೇಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ದಾಂತಿಕ ಶತ್ರುಗಳಾಗಿರಬಹುದು. ಆದರೆ ನಮ್ಮಂತಹ ಸಮಾನತಾವಾದಿಗಳಿಗೆ ಸಾವರ್ಕರ್ ಹಾಗೂ ಗಾಂಧಿ ಇಬ್ಬರೂ ಸೈದ್ದಾಂತಿಕ ಶತ್ರುಗಳು ಎಂದು ರಿಪ್ಲೆ ಕೊಟ್ಟಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಯವರ ಪೋಸ್ಟ್ ಗೆ ರಿಪ್ಲೆ ಕೊಟ್ಟಿರುವ ಚೇತನ್ ನೀವು ಸಾವರ್ಕರ್ ಹಾಗೂ ಗಾಂಧಿ ಇಬ್ಬರ ಪೊಟೋಗಳನ್ನು ತೆಗೆದುಹಾಕುವುದು ಸೂಕ್ತ. ಇಲ್ಲವಾದರೇ ಇಬ್ಬರನ್ನು ಇಟ್ಟಕೊಳ್ಳಿ, ಜೊತೆಗೆ ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ರವರ ಭಾವಚಿತ್ರವನ್ನು ಹಾಕಿ ಎಂದು ಹೇಳಿದ್ದಾರೆ. ಇನ್ನೂ ಚೇತನ್ ನೀಡಿರುವ ಹೇಳಿಕೆಘಲು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ವಿವಾದ ಸಹ ಸೃಷ್ಟಿಸಿದೆ ಎನ್ನಲಾಗಿದೆ.