Film News

ಗೋಲ್ಡನ್ ಲೆಗ್, ಐರನ್ ಲೆಗ್ ಎಂಬುದನ್ನು ನಾನು ನಂಬಲ್ಲ, ಟ್ಯಾಲೆಂಟ್ ಇದ್ದರೇ ಮಾತ್ರ ಅವಕಾಶ ಸಿಗುತ್ತೆ ಎಂದ ಸಂಯುಕ್ತ ಮಿನನ್….!

ಕೇರಳ ಮೂಲದ ನಟಿ ಸಂಯುಕ್ತಾ ಮಿನನ್ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಆಕೆ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ವಿರೂಪಾಕ್ಷ ಸಿನೆಮಾದಲ್ಲಿ ನಟಿಸಿದ್ದು, ಇಂದು ಈ (ಏ.21) ರಂದು ಬಿಡುಗಡೆಯಾಗಿದೆ. ಇದೀಗ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು ಹೇಳಿಕೆಗಳು ವೈರಲ್ ಆಗುತ್ತಿವೆ.

ನಟಿ ಸಂಯುಕ್ತಾ ಮಿನನ್ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.  ಐರನ್ ಲೆಗ್, ಗೋಲ್ಡನ್ ಲೆಗ್ ಎಂದು ಹೇಳುವ ಕಾನ್ಸಫ್ಟ್ ತುಂಬಾ ತಪ್ಪು, ಒಂದು ಹುಡುಗಿ ಲಕ್ಕಿ ಎಂದು ಸಿನೆಮಾಗಳಿಗೆ ಆಯ್ಕೆ ಮಾಡಿದ್ದಾರೆ ಎಂಬ ಕಾನ್ಸೆಪ್ಟ ಅನ್ನು ನಾನು ನಂಬುವುದಿಲ್ಲ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಜೊತೆಗೆ ಪ್ರಯತ್ನಗಳನ್ನು ಸಹ ಮಾಡುತ್ತೇವೆ. ಅದರಿಂದಲೇ ನಮಗೆ ಸಕ್ಸಸ್ ಸಿಗುತ್ತದೆ ವಿನಃ ಗೋಲ್ಡನ್ ಲೆಗ್, ಐರನ್ ಲೆಗ್ ಎಂಬುದರ ಕಾರಣದಿಂದಲ್ಲ. ಅದು ಎಂದು ಸಹ ವರ್ಕೌಟ್ ಆಗಲ್ಲ. ಒಂದು ಸ್ಕ್ರಿಪ್ಟ್ ಅಥವಾ ಒಂದು ಪಾತ್ರಕ್ಕೆ ನ್ಯಾಯ ಮಾಡುತ್ತಾಳೆ ಎಂದರೇ ಆಕೆಯನ್ನು ಸಿನೆಮಾದಲ್ಲಿ ತೆಗೆದುಕೊಳ್ಳುತ್ತಾರೆ. ಆಕೆಯ ಪ್ರತಿಭೆಯ ಮೇಲೆ ನಿರ್ಧಾರ ಆಗುತ್ತದೆ. ಅಷ್ಟೇ ವಿನಃ ಅದು ಲಕ್ಕಿ ಎಂದು ತೆಗೆದುಕೊಳ್ಳುವು ಎಲ್ಲವೂ ಊಹೆಗಳು ಅಷ್ಟೆ ಎಂದು ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಸಂಯುಕ್ತಾ ಮಿನನ್ ಟಾಲಿವುಡ್ ನಲ್ಲಿ ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಒಳ್ಳೆಯ ಓಪೆನಿಂಗ್ ಪಡೆದುಕೊಂಡರು. ಆಕೆಯ ಅಭಿನಯ, ಸೌಂದರ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿಟ್ಟಿಸಿಕೊಂಡರು. ಬಳಿಕ ಕಳೆದ ವರ್ಷ ಬಿಂಬಿಸಾರ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಮೂಲಕವೂ ಸಹ ಸಂಯುಕ್ತ ಮಿನನ್ ಒಳ್ಳೆಯ ಸಕ್ಸಸ್ ಕಂಡುಕೊಂಡರು. ತೆಲುಗುನಲ್ಲಿ ಬ್ಯಾಕ್ ಟು ಬ್ಯಾಕ್ ಅಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದ ನಟಿ ಸಂಯುಕ್ತಾ ಮಿನನ್ ಇತ್ತಿಚಿಗೆ ತೆರೆಕಂಡ ಧನುಷ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಹಿಟ್ ಪಡೆದುಕೊಂಡಿದೆ. ಇದೀಗ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಜೊತೆಗೆ ವಿರೂಪಾಕ್ಷ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಇನ್ನೂ ನಟ ಸಾಯಿ ಧರಮ್ ತೇಜ್ ರವರು 2021 ರಲ್ಲಿ ಭೀಕರ ಅಪಘಾತಕ್ಕೆ ಗುರಿಯಾಗಿದ್ದರು. ಅಪಘಾತದ ಬಳಿಕ ಸಾಯಿ ಧರಮ್ ತೇಜ್ ನಟಿಸಿರುವ ಸಿನೆಮಾ ಇದಾಗಿದೆ. ಇನ್ನೂ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನುಇಟ್ಟುಕೊಂಡಿದ್ದು, ಸಿನೆಮಾ ಯಾವ ರೀತಿಯಲ್ಲಿ ಸಕ್ಸಸ್ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top