ವಿಜಯ್ ದೇವರಕೊಂಡ ಬಗ್ಗೆ ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ ಸಮಂತಾ, ವೈರಲ್ ಆದ ಪೋಸ್ಟ್….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದ ಎರಡು ವರ್ಷಗಳಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ತಮ್ಮ ವೈಯುಕ್ತಿಕ ವಿಚಾರಗಳ ಕಾರಣದಿಂದ ಆಕೆ ತುಂಬಾ ನೋವುಗಳನ್ನು ಕಂಡಿದ್ದಾರೆ. ವೈಯುಕ್ತಿಕ ವಿಚಾರಗಳ ಜತೆಗೆ, ಸಿನೆಮಾ ಕೆರಿಯರ್‍, ಆರೋಗ್ಯದಿಂದಲೂ…

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದ ಎರಡು ವರ್ಷಗಳಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ತಮ್ಮ ವೈಯುಕ್ತಿಕ ವಿಚಾರಗಳ ಕಾರಣದಿಂದ ಆಕೆ ತುಂಬಾ ನೋವುಗಳನ್ನು ಕಂಡಿದ್ದಾರೆ. ವೈಯುಕ್ತಿಕ ವಿಚಾರಗಳ ಜತೆಗೆ, ಸಿನೆಮಾ ಕೆರಿಯರ್‍, ಆರೋಗ್ಯದಿಂದಲೂ ಸಹ ಆಕೆ ತುಂಬಾ ಸವಾಲುಗಳನ್ನು ಎದುರಿಸಿದ್ದಾರೆ. ಸದ್ಯ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ರೌಡಿ ಹಿರೋ ವಿಜಯ್ ದೇವರಕೊಂಡ ಬಗ್ಗೆ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು. ಅದು ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ನಿರ್ದೇಶಕ ಶಿವ ನಿರ್ವಾಣ ಸಾರಥ್ಯದಲ್ಲಿ ಸೆಟ್ಟೇರಿದ ಖುಷಿ ಎಂಬ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಗೆ ಬರಲಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಕಥೆಯನ್ನುಳ್ಳ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಹಿಂದೆ ಸಮಂತಾ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದ ಹಿನ್ನೆಲೆಯಲ್ಲಿ ಈ ಸಿನೆಮಾದ ಶೂಟಿಂಗ್ ಸಹ ನಿಂತಿತ್ತು. ಸುಮಾರು ತಿಂಗಳುಗಳ ಕಾಲ ಸಮಂತಾ ಮಯೋಸೈಟೀಸ್ ಕಾರಣದಿಂದ ನಿಗೂಡವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಆಕೆ ಆ ವ್ಯಾಧಿಯಿಂದ ಹೊರಬಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ ಸಿನೆಮಾದ ಶೂಟಿಂಗ್ ನಲ್ಲೂ ಸಹ ಭಾಗಿಯಾಗಿದ್ದಾರೆ.

ಇನ್ನೂ ಸಮಂತಾ ಹಾಗೂ ವಿಜಯ್ ದೇವರಕೊಂಡ ಈ ಹಿಂದೆ ಮಹಾನಟಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಸಮಂತಾ ಹಾಗೂ ವಿಜಯ್ ದೇವರಕೊಂಡ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಶುರುವಾಗಿ ಒಂದು ವರ್ಷ ಕಳೆದಿದ್ದು, ಈ ಸಮಯದಲ್ಲಿ ಸಮಂತಾ ವಿಜಯ್ ದೇವರಕೊಂಡ ಬಗ್ಗೆ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಮಂತಾ ವಿಜಯ್ ದೇವರಕೊಂಡ ಬಗ್ಗೆ ಮಾಡಿರುವ ಪೋಸ್ಟ್ ನಲ್ಲಿರುವಂತೆ, ನಿಮ್ಮ ಬೆಸ್ಟ್ ಅನ್ನು ನೋಡಿದ್ದೀರಾ, ನಿಮ್ಮ ವರಸ್ಟ್ ಅನ್ನು ಸಹ ನೋಡಿದ್ದೀರಾ, ಕೊನೆಯದಾಗಿ ನಗು ಬರುವುದನ್ನು ಸಹ ನೋಡಿದ್ದೀರಾ, ಮುಂದೆ ಬರುವುದನ್ನು ನೋಡಿದ್ದೀರಾ, ನಿಮ್ಮ ಪತನವನ್ನು ಸಹ ನೋಡಿದ್ದೀರಾ, ನೀವು ಬೆಳೆಯುವುದನ್ನು ಸಹ ನೋಡಿದ್ದೀರಾ, ಕೆಲವು ಮಂದಿ ಸ್ನೇಹಿತರು ನಿಮ್ಮೊಂದಿಗೆ ಬೆಂಬಲವಾಗಿ ಇರುತ್ತಾರೆ, ಈ ರೀತಿಯಾಗಿ ನಿಮ್ಮೊಂದಿಗೆ ವರ್ಷ ತುಂಬಾ ಚೆನ್ನಾಗಿ ಕಳೆದಿದೆ ಎಂದು ವೈಟ್ ಲವ್ ಸಿಂಬಲ್ ಹಾಕಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಸಮಂತಾ ಹಂಚಿಕೊಂಡ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಆ ಪೋಸ್ಟ್ ಮೂಲಕ ತಮ್ಮಿಬ್ಬರ ನಡುವೆ ಇರುವಂತಹ ಸ್ನೇಹದ ಬಗ್ಗೆ ಸಾರಿ ಹೇಳಿದ್ದಾರೆ. ಇನ್ನೂ ಸಮಂತಾ ಕಷ್ಟದಲ್ಲಿದ್ದಾಗ ವಿಜಯ್ ದೇವರಕೊಂಡ ಆಕೆಗೆ ಧೈರ್ಯ ತುಂಬುವ ಸಂದೇಶ ಹಾಕಿದ್ದರು. ಇನ್ನೂ ಈ ಪೊಸ್ಟ್ ಜೊತೆಗೆ ಆಕೆ ಪೊಟೋ ಒಂದನ್ನು ಸಹ ಹಂಚಿಕೊಂಡಿದ್ದು, ಈ ಪೋಟೋ ಸಹ ಸಖತ್ ವೈರಲ್ ಆಗುತ್ತಿದೆ.