News

ರಕ್ಷಾ ಬಂಧನದ ಸಂಭ್ರಮದಲ್ಲಿ ದುರಂತ, ಅಣ್ಣನ ಮೃತ ದೇಹದ ಕೈಗೆ ರಾಖಿ ಕಟ್ಟಿದ ತಂಗಿ….!

ದೇಶದಾದ್ಯಂತ ರಾಖಿ ಹಬ್ಬದ ಸಂಭ್ರಮ ಮನೆಮಾಡಿದೆ. ಸಹೋದರರು ನಮ್ಮನ್ನು ರಕ್ಷಣೆ ಮಾಡಲಿ, ಸಹೋದರರ ಆಯಸ್ಸು ಜಾಸ್ತಿಯಾಗಲಿ ಎಂದು ಸಹೋದರಿಯರು ರಾಖಿ ಕಟ್ಟುವ ಮೂಲಕ ಶುಭ ಕೋರುತ್ತಾರೆ. ಸಹೋದರರೂ ರಾಖಿ ಕಟ್ಟಿದ ಸಹೋದರಿಯರಿಗೆ ಉಡುಗೊರೆ ಕೊಟ್ಟು ಆರ್ಶಿವಾದ ಮಾಡುತ್ತಾರೆ. ಎಲ್ಲಾ ಕಡೆ ಸಂಭ್ರಮದ ವಾತಾವರಣ ಮನೆ ಮಾಡಿದ್ದರೇ, ಅಲ್ಲಿ ಮಾತ್ರ ಸೂತಕದ ಚಾಯೆ, ರಾಖಿ ಕಟ್ಟಿಸಿಕೊಳ್ಳಲು ಬರಬೇಕಿದ್ದ ಅಣ್ಣ ಶವವಾಗಿ ಬಂದ. ಆದರೂ ಸಹ ಸಹೋದರಿ ಮೃತಪಟ್ಟ ಅಣ್ಣದ ಕೈಗೆ ರಾಖಿ ಕಟ್ಟಿ, ಕಣ್ಣೀರಿಡುತ್ತಾ ಅಂತಿಮ ವಿದಾಯ ಹೇಳಿದ್ದಾರೆ.

ಇನ್ನೂ ಈ ಘಟನೆ ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಧೂಳಿಕಟ್ಟಾ ಎಂಬ ಗ್ರಾಮದಲ್ಲಿ ನಡೆದಿದೆ. ಧೂಳಿಕಟ್ಟಾ ಗ್ರಾಮ ಚೌಧರಿ ಕನಕಯ್ಯ ಎಂಬ ವ್ಯಕ್ತಿಯೇ ಮೃತ ದುರ್ದೈವಿ. ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ಆತ ಮನೆಗೆ ಬಂದಿದ್ದರು. ಎಲ್ಲಾ ಕುಟುಂಬಸ್ಥರು ಸೇರಿ ಹಬ್ಬ ಮಾಡಬೇಕೆಂಬ ಖುಷಿಯಲ್ಲಿದ್ದರು. ಆದರೆ ಈ ವೇಳೆ ಕನಕಯ್ಯನಿಗೆ ಹೃದಯಾಘಾತವಾಗಿದೆ. ಸಂಭ್ರಮಿಸಬೇಕಾದ ಮನೆಯಲ್ಲಿ ಸೂತಕದ ಚಾಯೆ ಆವರಿಸಿದೆ. ರಾಖಿ ಕಟ್ಟಿ ಆರ್ಶಿವಾದ ಪಡೆಯಬೇಕು ಎಂದು ಇದ್ದ ಸಹೋದರಿಗೆ ತನ್ನ ಅಣ್ಣ ಇಲ್ಲ ಎಂಬ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ಸಹ ಆಗುತ್ತಿಲ್ಲ. ತನ್ನ ಅಣ್ಣನಿಗೆ ಕೊನೆಯದಾಗಿ ರಾಖಿ ಕಟ್ಟಿ ಅಂತಿಮ ವಿದಾಯ ಹೇಳಿದ್ದಾರೆ.

ಇನ್ನೂ ರಾಖಿ ಹಬ್ಬದಂದು ಮತ್ತೊಂದು ವಿಶೇಷ ನಡೆದಿದೆ. ಛತ್ತೀಸ್ ಘಟ್ ದ ರಾಯ್ ಪುರದಲ್ಲಿ ಮಹಿಳೆಯೊಬ್ಬರು ತನ್ನ ಅಣ್ಣನಿಗೆ ರಾಖಿ ಹಬ್ಬದಂದು ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಸಾಮಾಣ್ಯವಾಗಿ ರಾಖಿ ಹಬ್ಬದಂದು ಅಣ್ಣನಿಗೆ ರಾಖಿ ಕಟ್ಟಿದರೇ ಅಣ್ಣ ಒಳ್ಳೆಯ ಉಡುಗೊರೆ ತಂಗಿಗೆ ನೀಡುತ್ತಾನೆ. ಆದರೆ ಇಲ್ಲೊಬ್ಬ ಸಹೋದರಿ ತನ್ನ ಅಣ್ಣನ ಜೀವ ಉಳಿಸಲು ತನ್ನ ಒಂದು ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿದ್ದಾರೆ. 48 ವರ್ಷದ ಓಂ ಪ್ರಕಾಶ್ ಧಂಗರ್‍ ಎಂಬಾತನಿಗೆ ಆಕೆಯ ಸಹೋದರಿ ಕಿಡ್ನಿ ನೀಡಲು ಮುಂದಾಗಿದ್ದಾರೆ

Most Popular

To Top