Film News

ತೀವ್ರವಾದ ಜ್ವರದಿಂದ ಬಳಲುತ್ತಿದ್ದಾರೆ ಪವನ್ ಕಲ್ಯಾಣ್, ವಿಶ್ರಾಂತಿ ಪಡೆಯದೇ ರಾಜಕೀಯದಲ್ಲಿ ಸಕ್ರೀಯರಾದ ಜನಸೇನಾನಿ….!

ತೆಲುಗು ರಾಷ್ಟ್ರಗಳಲ್ಲಿ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ದೊಡ್ಡ ಖ್ಯಾತಿ ಹೊಂದಿರುವ ನಟ ಹಾಗೂ ರಾಜಕಾರಣಿ. ಆತನ ಹೆಸರು ಒಂದು ಸಂಚಲನ ಮೂಡಿಸುತ್ತದೆ. ಸುದೀರ್ಘವಾಗಿ ಸಿನಿರಂಗ ಹಾಗೂ ರಾಜಕೀಯ ಎರಡರಲ್ಲೂ ತಮ್ಮದೇ ಆದ ಶೈಲಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ, ರಾಜಕೀಯವಾಗಿ ಜನರ ಸಮಸ್ಯೆಗಳ ಬಗ್ಗೆ ಅನೇಕ ಹೋರಾಟಗಳನ್ನು ಮಾಡುತ್ತಾ ಅನೇಕರಿಗೆ ಆದರ್ಶಪ್ರಾಯರಾಗಿದ್ದಾರೆ. ನಿರಂತರವಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಇದೀಗ ಅವರು ತೀವ್ರವಾದ ಜ್ವರಕ್ಕೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.

ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಮುಂದಿನ ವರ್ಷ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಆಂಧ್ರ ರಾಜಕೀಯದ ಮೇಲೆ ತುಂಬಾನೆ ಪೋಕಸ್ ಇಟ್ಟಿದ್ದಾರೆ. ಈ ಕಾರಣದಿಂದ ಆತ ಒಪ್ಪಿಕೊಂಡಿದ್ದ ಅನೇಕ ಸಿನೆಮಾಗಳ ಶೂಟಿಂಗ್ ಸಹ ಬಹುತೇಕ ಪೂರ್ಣಗೊಳಿಸಿದ್ದಾರೆ. ಇದೀಗ ಸಂಪೂರ್ಣವಾಗಿ ರಾಜಕೀಯದ ಮೇಲೆ ಪೋಕಸ್ ಇಟ್ಟಿದ್ದಾರೆ. ಅವರ ಸಿನೆಮಾಗಳನ್ನು ಚುನಾವಣೆಯಾದ ಬಳಿಕ ಪೂರ್ಣಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗಷ್ಟೆ ನಾರಾ ಲೋಕೇಶ್ ಪಾದಯಾತ್ರೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಸಹ ಭಾಗಿಯಾಗಿದ್ದರು.

ಇನ್ನೂ ರಾಜಕೀಯ ಕಾರ್ಯಕ್ರಮಗಳಲ್ಲಿ ಪುಲ್ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ರವರು ತೀವ್ರವಾದ ಜ್ವರದಿಂದ ಬಳಲುತ್ತಿದ್ದಾರಂತೆ. ಕಳೆದ ರಾತ್ರಿಯಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಂತೆ. ಈ ಕಾರಣದಿಂದ ಪವನ್ ಕಲ್ಯಾಣ್ ತನ್ನ ಎಲ್ಲಾ ಶೆಡ್ಯೂಲ್ಸ್ ಕ್ಯಾನ್ಸಲ್ ಮಾಡಿದ್ದಾರಂತೆ. ರಾಜಕೀಯ ಕಾರ್ಯಕ್ರಮಗಳನ್ನು ಪೋಸ್ಟ್ ಪೋನ್ ಮಾಡಿದ್ದಾರಂತೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದಾರಂತೆ. ಆದರೆ ಪವನ್ ಕಲ್ಯಾಣ್ ರವರು ಹೆಚ್ಚು ವಿಶ್ರಾಂತಿ ಪಡೆಯದೇ ಶೀಘ್ರದಲ್ಲೇ ರಾಜಕೀಯ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪವನ್ ಕಲ್ಯಾಣ್ ಶೀಘ್ರದಲ್ಲೇ ಗುಣಮುಖರಾಗಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top