Film News

ಕನ್ನಡ ಬಿಗ್ ಬಾಸ್ ನಿಂದ ಹೊರಬನ್ನಿ ಎಂದು ಕಿಚ್ಚ ಸುದೀಪ್ ರವರಿಗೆ ಮನವಿ, ಬಿಗ್ ಬಾಸ್ ವಿರುದ್ದ ಜನಾಕ್ರೋಶ…..!

ಕನ್ನಡದ ರಿಯಾಲಿಟಿ ಶೋಗಳಲ್ಲಿ ತುಂಬಾನೆ ಖ್ಯಾತಿ ಪಡೆದುಕೊಂಡ ಶೋ ಬಿಗ್ ಬಾಸ್ ಎಂದು ಹೇಳಬಹುದಾಗಿದೆ. ಕಲರ್ಸ್ ಕನ್ನಡ ಚಾನಲ್ ನಲ್ಲಿ ಈ ಕಾರ್ಯಕ್ರಮ ಮೂಡಿಬರುತ್ತಿದೆ. ಆದರೆ ಇದೀಗ ಈ ರಿಯಾಲಿಟಿ ಶೋ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ವೀಕ್ಷಕರು ಸೋಷಿಯಲ್ ಮಿಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಶೋ ನಡೆಸುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಕೆ.ವಿ. ಪ್ರವೀಣ ಎಂಬುವವರು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಭಾರತೀಯ ಮಾಧ್ಯಮ ಪ್ರಾಧಿಕಾರಕ್ಕೆ ಮಿಂಚಂಚೆ ಹಾಗೂ ಅಂಚೆ ಮೂಲಕ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ವಕೀಲ ಪ್ರವೀಣರವರು ನೀಡಿದ ದೂರಿನಲ್ಲಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ತೀರ ನೈತಿಕ ಗುಣಮಟ್ಟವನ್ನು ಕಳೆದುಕೊಂಡಿದೆ. ಚಪ್ಪಲಿಯಿಂದ ಹೊಡೆದಾಡುವಂತಹ ದೃಶ್ಯಗಳು, ಅಶ್ಲೀಲ ಪದಗಳು, ಬೆದರಿಕೆ ಹಾಕುತ್ತಿರುವುದು ಬಿಗ್ ಬಾಸ್ ಶೋನಲ್ಲಿರುವ ಸ್ಪರ್ಧಿಗಳ ನಡುವೆ ಏರ್ಪಡುತ್ತಿದೆ. ಇದೊಂದು ಕೌಟುಂಬಿಕ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ದೂರಿದ್ದಾರೆ. ಅಷ್ಟೇಅಲ್ಲದೇ ಬಿಗ್ ಬಾಸ್ ಸ್ಪರ್ಧಿಗಳ ವಿರುದ್ದ ಜನಾಕ್ರೋಶ ತುಂಬಾನೆ ವ್ಯಕ್ತವಾಗುತ್ತಿದೆ. ಕೆಲ ಸ್ಫರ್ಧಿಗಳ ವರ್ತನೆ ಸಹ ಅತಿರೇಕವಾಗಿದೆ ಎಂದು ಸೋಷಿಯಲ್ ಮಿಡಿಯಾ ಮೂಲಕ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದರಲ್ಲಿ ಪ್ರತಾಪ್ ಹಾಗೂ ಸಂಗೀತ ರವರ ಕಣ್ಣುಗಳಿಗೆ ಹಾನಿಯಾಗಿದೆ. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಜನರು ಆಗ್ರಹಿಸಿದ್ದಾರೆ. ಜೊತೆಗೆ ವಿನಯ್ ಗೌಡ ಬೇರೆ ಸ್ಪರ್ಧಿಗಳಿಗೆ ನೇರವಾಗಿ ಬೆದರಿಕೆ ಸಹ ಹಾಕಿದ್ದಾರೆ. ಅವರು ವಿರುದ್ದ ಸೆಕ್ಷನ್ 506 ಪ್ರಕಾರ ಸುಮೋಟೋ ಪ್ರಕರಣ ದಾಖಲು ಮಾಡುವಂತೆ ಸಹ ಟ್ವೀಟ್ ಮಾಡಲಾಗುತ್ತಿದೆ. ಕಾರ್ಯಕ್ರಮದ ಮೂಲ ಆಶಯ ನಾಶವಾಗದಿರಲಿ, ಸ್ಫರ್ಧಿಗಳ ವ್ಯಕ್ತಿತ್ವ ಸಂರಕ್ಷಣೆಯಾಗಲಿ. ಎಲ್ಲೆ ಮೀರಿದ ವರ್ತನೆಯಿಂದ ಬಿಗ್ ಬಾಸ್ ನಡೆಯುತ್ತಿದೆ. ಬೆದರಿಕೆ, ಧಮ್ಕಿ ಮೊದಲಾದ ರೀತಿಯಲ್ಲಿ ಹಲ್ಲೆಗಳೂ ಸಹ ನಡೆಯುತ್ತಿವೆ. ದಯವಿಟ್ಟು ಈ ಬಗ್ಗೆ ಪೊಲೀಸರು ಕ್ರಮ ವಹಿಸಬೇಕೆಂದು ಅನೇಕರು ಟ್ವೀಟ್ ಮೂಲಕ ಪೊಲೀಸರಿಗೆ ಟ್ಯಾಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಕೆಟ್ಟ ಶೋ ನಿಂದ ಸುದೀಪ್ ರವರು ಹೊರಬನ್ನಿ. ಈ ಶೋ ನಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ದಯವಿಟ್ಟು ಈ ಶೋ ನಿಂದ ಹೊರಬನ್ನಿ ಎಂದು ಅನೇಕರು ಮನವಿ ಸಹ ಮಾಡುತ್ತಿದ್ದಾರೆ.

Most Popular

To Top