ಆ ಘಟನೆಯ ಕಾರಣದಿಂದ ನನಗೆ ನಿದ್ದೆಯಿಲ್ಲದಂತೆ ಆಗಿತ್ತು ಎಂದ ನ್ಯಾಚುರಲ್ ಸ್ಟಾರ್ ನಾನಿ, ವೈರಲ್ ಆದ ಕಾಮೆಂಟ್ಸ್….!

Follow Us :

ಸಿನಿರಂಗದಲ್ಲಿ ಕೆಲ ಕಲಾವಿದರು ಕಡಿಮೆ ಸಮಯದಲ್ಲೇ ಒಳ್ಳೆಯ ಕ್ರೇಜ್ ಸಂಪಾದಿಸಿಕೊಳ್ಳುತ್ತಾರೆ. ಅವರ ಪೈಕಿ ಟಾಲಿವುಡ್ ಸಿನಿರಂಗದ ನ್ಯಾಚುರಲ್ ಸ್ಟಾರ್‍ ನಾನಿ ಸಹ ಒಬ್ಬರಾಗಿದ್ದಾರೆ. ಅಷ್ಟ ಚಮ್ಮ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಾನಿ ಅನೇಕ ಸಿನೆಮಾಗಳಲ್ಲಿ ನಟಿಸಿ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ನಾನಿ ದಸರಾ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆ ಮೇಲೆ ಅಬ್ಬರಿಸಲಿದೆ. ಇನ್ನೂ ನಾನಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ವೈರಲ್ ಆಗಿದೆ.

ತೆಲುಗಿನ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾದ ದಸರಾ ಇದೇ ಮಾ.30 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ನ್ಯಾಚುರಲ್ ಸ್ಟಾರ್‍ ನಾನಿ ಹಾಗೂ ನಟಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಈ ಸಿನೆಮಾವನ್ನು ಹೊಸ ನಿರ್ದೇಶಕ ಶ್ರೀಕಾಂತ್ ಓದೆಲು ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಿನೆಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಸಿನೆಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಪುಲ್ ಬ್ಯುಸಿಯಾಗಿದೆ. ಜೊತೆಗೆ ಕೆಲವೊಂದು ಸಂದರ್ಶನಗಳಲ್ಲೂ ಸಹ ನ್ಯಾಚುರಲ್ ಸ್ಟಾರ್‍ ನಾನಿ ಪುಲ್ ಬ್ಯುಸಿಯಾಗಿದ್ದಾರೆ. ಈ ಹಾದಿಯಲ್ಲೇ ಸಂದರ್ಶನವೊಂದರಲ್ಲಿ ನಾನಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ನಾನಿ ದಸರಾ ಸಿನೆಮಾ ಶೂಟಿಂಗ್ ಸಮಯದಲ್ಲಿ ನಾನಿಗೆ ಗಾಬರಿಯಾಗುವಂತಹ ಘಟನೆಯೊಂದು ನಡೆದಿತ್ತಂತೆ. ಶೂಟಿಂಗ್ ವೇಳೆ ಡಂಪರ್‍ ಟ್ರಕ್ ಕೋಲ್ಸ್ ತೆಗೆದುಕೊಂಡು ಡಂಪ್ ಮಾಡುವ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ. ಆ ಡಂಪರ್‍ ಟ್ರಕ್ ನಿಂದ ನಾನು ಕೆಳಗೆ ಬೀಳಬೇಕು ಬಳಿಕ ಅದರಲ್ಲಿನ ಕೋಲ್ಸ್ ನನ್ನ ಮೇಲೆ ಬೀಳಬೇಕಿತ್ತು. ಈ ದೃಶ್ಯಕ್ಕಾಗಿ ಸಿಂಥೆಟಿಕ್ ಕೋಲ್ಸ್ ಸಿದ್ದ ಮಾಡಿದ್ದರು. ಆದರೆ ಅದೂ ಕೂಡ ತುಂಬಾ ಡಸ್ಟ್ ನಿಂದ ಕೂಡಿತ್ತು. ಸಿಂಥೆಟಿಕ್ ಕೋಲ್ಸ್ ಕೆಳಗೆ ನನ್ನನ್ನು ಮೇಲೆ ಎಬ್ಬಿಸಲು ಕೊಂಚ ಸಮಯ ಬೇಕಾಗಿದೆ. ಆ ಗ್ಯಾಪ್ ನಲ್ಲಿ ನನಗೆ ಉಸಿರಾಡಲು ತುಂಬಾನೆ ಕಷ್ಟವಾಗಿತ್ತು. ಆ ವೇಳೆ ಗಾಳಿ ತೆಗೆದುಕೊಳ್ಳದೇ ಇರಲಾರೆ, ಒಂದು ವೇಳೆ ಉಸಿರಾಡಿದರೇ ಡಸ್ಟ್ ಒಳಗೆ ಹೋಗುತ್ತಿತ್ತು. ಈ ರೀತಿಯಲ್ಲಿ ನಾನು ತುಂಭಾ ನರಕ ಅನುಭವಿಸಿದ್ದೆ ಎಂದಿದ್ದಾರೆ.

ಆ ದೃಶ್ಯದ ಶೂಟಿಂಗ್ ಬಳಿಕವೂ ಸಹ ನನಗೆ ಅದೇ ನೆನಪಿಗೆ ಬಂದು ತುಂಬಾನೆ ಸಮಸ್ಯೆ ಎದುರಿಸಿದ್ದೆ. ಈ ದೃಶ್ಯ ಶೂಟಿಂಗ್ ಆದ ಬಳಿಕ ಸುಮಾರು ದಿನಗಳ ಕಾಲ ಅದೇ ನನಗೆ ನೆನಪು ಬರುತ್ತಲೇ ಇತ್ತು. ಒಳಗೆ ಏನೋ ತಿಳಿಯದ ನೋವು ಅನುಭವ ಆಗುತ್ತಿತ್ತು.  ಇನ್ನೂ ಈ ಸಮಸ್ಯೆಯಿಂದ ಹೊರಬರಲು ನನಗೆ ತುಂಬಾ ದಿನಗಳ ಸಮಯ ಬೇಕಾಯಿತು. ಎರಡು ತಿಂಗಳ ಕಾಲ ನಿದ್ದೆಯಿಲ್ಲದೇ ಸಮಸ್ಯೆ ಎದುರಿಸಿದೆ ಎಂದಿದ್ದಾರೆ. ಇನ್ನೂ ನಾನಿ ನೀಡಿದ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಸಿನೆಮಾದ ಮೇಲೆ ನಾನಿ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.