Film News

ಸಿನಿರಂಗದಲ್ಲಿ 20 ವರ್ಷ ಪೂರ್ಣಗೊಳಿಸಿದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ಮೆಗಾ ಗ್ಯಾಫ್ ವಿವಾದದ ನಡುವೆ ಚಿರು ವಿಶ್…!

ತೆಲುಗು ಸಿನಿರಂಗದ ಅಲ್ಲು ಕುಟುಂಬದ ಸ್ಟಾರ್‍ ನಟ ಐಕಾನ್ ಸ್ಟಾರ್‍, ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಆಗಿ 20 ವರ್ಷ ಪೂರ್ಣಗೊಳಿಸಿದ್ದಾರೆ. ಮಾ.28 ಕ್ಕೆ ಅಲ್ಲು ಅರ್ಜುನ್ ಸಿನಿ ಕೆರಿಯರ್‍ ಪ್ರಾರಂಭಿಸಿ 20 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ರವರಿಗೆ ಸಿನೆಮಾ ಸ್ಟಾರ್‍ ಗಳೂ ಸೇರಿದಂತೆ ಅವರ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಅಲ್ಲು ಅರ್ಜುನ್ ಮತಷ್ಟು ಸಕ್ಸಸ್ ಗಳಿಸಬೇಕೆಂದು ಶುಭ ಕೋರುತ್ತಿದ್ದಾರೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಸಹ ಅಲ್ಲು ಅರ್ಜುನ್ ಗೆ ಶುಭಾಷಯ ಕೋರಿದ್ದಾರೆ.

ಕೆಲವೊಂದು ದಿನಗಳಿಂದ ಮೆಗಾ ಕುಟುಂಬ ಹಾಗೂ ಅಲ್ಲು ಕುಟುಂಬದ ನಡುವೆ ವಿಬೇದಗಳು ಸೃಷ್ಟಿಯಾಗಿದೆ ಎಂಬ ರೂಮರ್‍ ಗಳು ಹರಿದಾಡುತ್ತಿವೆ. ಈ ರೂಮರ್‍ ಗಳು ಸುಮಾರು ದಿನಗಳಿಂದ ಹರಿದಾಡುತ್ತಲೇ ಇದೆ. ಇದರ ಜೊತೆಗೆ ಇತ್ತೀಚಿಗೆ ರಾಮ್ ಚರಣ್ ಹುಟ್ಟುಹಬ್ಬ ಅದ್ದೂರಿಯಾಗಿ ನೆರವೇರಿತ್ತು. ಈ ಹುಟ್ಟುಹಬ್ಬಕ್ಕೆ ಸಿನಿಮಾ ಸೆಲೆಬ್ರೆಟಿಗಳು, ರಾಜಕೀಯ ಗಣ್ಯರು ಸಹ ಭಾಗವಹಿಸಿದ್ದರು. ಜೊತೆಗೆ ಅನೇಕರು ಸೋಷಿಯಲ್ ಮಿಡಿಯಾ ಮೂಲಕ ಶುಭಾಷಯಗಳನ್ನು ಕೋರಿದ್ದರು. ಆದರೆ ಅಲ್ಲು ಅರ್ಜುನ್ ಮಾತ್ರ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಯಾವುದೇ ರೀತಿಯ ಶುಭಾಷಯ ಕೋರಿಲ್ಲ. ಈ ಕಾರಣದಿಂದ ಇಬ್ಬರ ನಡುವೆ ವಿಬೇದಗಳು ಇದೆಎಂಬ ರೂಮರ್‍ ಮತಷ್ಟು ಜೋರಾಗಿದೆ. ಈ ನಡುವೆ ಅಲ್ಲು ಅರ್ಜುನ್ ಸಿನಿರಂಗದಲ್ಲಿ 20 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬನ್ನಿಗೆ ಶುಭಾಷಯಗಳನ್ನು ಕೋರಿದ್ದಾರೆ.

ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಅಲ್ಲು ಅರ್ಜುನ್ ಗೆ ಶುಭ ಕೋರುತ್ತಾ ಟ್ವೀಟ್ ಮಾಡಿದ್ದಾರೆ. ಡಿಯರ್‍ ಅಲ್ಲು ಅರ್ಜುನ್ ನೀನು ಸಿನಿರಂಗದಲ್ಲಿ 20 ವರ್ಷ ಪೂರ್ಣಗೊಳಿಸಿದ್ದುಮ ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ನಿನ್ನ ಚಿಕ್ಕಂದಿನ ನೆನಪುಗಳು ನನಗೆ ಇನ್ನೂ ಚೆನ್ನಾಗಿ ನೆನಪಿನಲ್ಲಿದೆ. ಸಮಯ ಎಂಬುದು ತುಂಬಾ ವೇಗವಾಗಿ ನಡೆಯುತ್ತಿದೆ ಅನ್ನಿಸುತ್ತಿದೆ. ನಿನ್ನ ಸಿನಿ ಪ್ರಯಾಣದಲ್ಲಿ ಐಕಾನ್ ಸ್ಟಾರ್‍ ಆಗಿ, ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಬೆಳೆದಿದ್ದೀಯಾ. ಮುಂದಿನ ದಿನಗಳಲ್ಲಿ ನೀನು ಮತಷ್ಟು ಸಾಧನೆ ಮಾಡಬೇಕು ಎಂದು ಕೋರುತ್ತಿದ್ದೇನೆ ಎಂಬರ್ಥದಲ್ಲಿ ಚಿರಂಜೀವಿ ಟ್ವೀಟ್ ಮಾಡಿದ್ದಾರೆ. ಇನ್ನೂ ಚಿರಂಜೀವಿ ಟ್ವೀಟ್ ಗೆ ಬನ್ನಿ ಸಹ ರಿಪ್ಲೆ ಕೊಟ್ಟಿದ್ದಾರೆ. ನಿಮ್ಮ ಆರ್ಶಿವಾದಕ್ಕೆ, ಶುಭಾಷಯಗಳಿಗೆ ಮನಃಪೂರ್ವಕ ಧನ್ಯವಾದಗಳು, ನಿಮ್ಮ ಮೇಲೆ ನನಗಿರುವ ಗೌರವಭಾವ, ಪ್ರೀತಿ ಸದಾ ಇರುತ್ತದೆ. ಥ್ಯಾಂಕ್ಯೂ ಚಿಕಬಾಬಿ (ಚಿರಂಜೀವಿಯವರನ್ನು ಬನ್ನಿ ಪ್ರೀತಿಯಿಂದ ಚಿಕಬಾಬಿ ಎಂದು ಕರೆಯುತ್ತಾರೆ) ಎಂದು ರಿಪ್ಲೆ ಕೊಟ್ಟಿದ್ದಾರೆ.

ಇನ್ನೂ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಚರ್ಚೆಗಳೂ ಸಹ ನಡೆಯುತ್ತಿದೆ. ಕೊಣಿದೆಲಾ ಹಾಗೂ ಅಲ್ಲು ಕುಟುಂಬದ ನಡುವೆ ವೈಮನಸ್ಸು ಸೃಷ್ಟಿಯಾಗಿದೆ. ಈ ಕಾರಣದಿಂದಲೇ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಬನ್ನಿ ವಿಶ್ ಸಹ ಮಾಡಿಲ್ಲ ಎಂದು ಕೆಲವರು ಹೇಳುತ್ತಿದ್ದರೇ, ಮತ್ತೆ ಕೆಲವರು ರಾಮ್ ಚರಣ್ ಗೆ ಬನ್ನಿ ಪೊನ್ ಮೂಲಕ ಅಥವಾ ವೈಯುಕ್ತಿಕವಾಗಿ ವಿಶಸ್ ಹೇಳಿರಬಹುದು ಸೋಷಿಯಲ್ ಮಿಡಿಯಾದಲ್ಲಿ ವಿಶ್ ಮಾಡಿಲ್ಲ ಎಂದ ಮಾತ್ರಕ್ಕೆ ಅವರ ನಡುವೆ ವಿಬೇದಗಳಿವೆ ಎಂದು ಅರ್ಥವಲ್ಲ ಎಂದೂ ಸಹ ಕೆಲವರು ಅಭಿಪ್ರಾಯಪಡುತ್ತಿದ್ದಾರೆ.

Most Popular

To Top