Film News

ಮೆಗಾಸ್ಟಾರ್ ಚಿರಂಜೀವಿ ಮೇಲೂ ಮೊಟ್ಟೆ ಎಸೆದಿದ್ದರಂತೆ, ವಿಚಾರ ಬಿಚ್ಚಿಟ್ಟ ಮೆಗಾಸ್ಟಾರ್ ಚಿರು…!

ಸ್ವಂತ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ತೆಲುಗು ಸಿನಿರಂಗದಲ್ಲಿ ಮೆಗಾಸ್ಟಾರ್‍ ಆಗಿರುವ ಚಿರಂಜೀವಿ ಇಂದಿಗೂ ಸಹ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 2023 ಜನವರಿ ಮಾಹೆಯಲ್ಲಿ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ವಾಲ್ತೇರು ವೀರಯ್ಯ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಸಾಮಾನ್ಯ ಕುಟುಂಬದಿಂದ ಬಂದಂತಹ ಚಿರಂಜೀವಿ ಸ್ಟಾರ್‍ ನಟರಾಗಿ ಬೆಳೆಯಲು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರಂತೆ.

ಸೌತ್ ಸಿನಿರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಚಿರಂಜೀವಿ ತುಂಬಾ ಕಷ್ಟದಿಂದ ಸ್ಟಾರ್‍ ಆಗಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿರಂಗದ ಆಧಾರಸ್ತಂಭ ಎಂದು ಮೆಗಾ ಫ್ಯಾಮಿಲಿಯನ್ನು ಕರೆಯಲಾಗುತ್ತದೆ. ತನ್ನದೇ ಆದ ವಿಭಿನ್ನ ಸ್ಟೈಲ್, ಡ್ಯಾನ್ಸ್, ಮ್ಯಾನರಿಸಂ ಮೂಲಕ ಅನೇಕ ಅಭಿಮಾನಿಗಳಿಗೆ ಆರಾಧ್ಯದೈವ ಸಹ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಇನ್ನೂ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಾ ಮತಷ್ಟು ಫೇಮಸ್ ಆಗಿದ್ದಾರೆ. ಇದೀಗ ತಾವು ಅನುಭವಿಸಿದ ಸಮಸ್ಯೆಗಳು, ಕೆಲವೊಂದು ಕಹಿ ಘಟನೆಗಳ ಬಗ್ಗೆ ಗಾಯಕಿ ಸ್ಮಿತಾ ನಡೆಸಿಕೊಡುವ ನಿಜಂ ವಿಥ್ ಸ್ಮಿತಾ ಎಂಬ ಟಾಕ್ ಶೋ ನಲ್ಲಿ ರಿವೀಲ್ ಮಾಡಿದ್ದಾರೆ.

ಖ್ಯಾತ ಗಾಯಕಿ ಸ್ಮಿತಾ ನಿಜಂ ವಿಥ್ ಸ್ಮಿತಾ ಎಂಬ ಟಾಕ್ ಶೋ ಹೋಸ್ಟ್ ಮಾಡುತ್ತಿದ್ದಾರೆ. ಈ ಶೋ ನಲ್ಲಿ ಅತಿಥಿಯಾಗಿ ಮೆಗಾಸ್ಟಾರ್‍ ಚಿರಂಜೀವಿ ಭಾಗಿಯಾಗಿದ್ದಾರೆ. ಸದ್ಯ ಈ ಶೋ ನ ಪ್ರೊಮೋ ರಿಲೀಸ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಈ ಶೋ ನಲ್ಲಿ ಚಿರು ತಮ್ಮ ಜೀವನದಲ್ಲಿನ ಏಳು ಬೀಳು ಗಳ ಕುರಿತು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಸಿಂಗರ್‍ ಸ್ಮಿತಾ ಚಿರಂಜೀವಿಯವರಿಗೆ ಪ್ರಶ್ನೆ ಮಾಡುತ್ತಾ ಸಿನಿರಂಗದಲ್ಲಿ ತಾವು ಏನಾದರೂ ಅವಮಾನಗಳನ್ನು ಅನುಭವಿಸಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಚಿರಂಜೀವಿ ಸಹ ಉತ್ತರಿಸಿದ್ದಾರೆ. ಸಿನಿರಂಗದಲ್ಲಿ ನಾನು ಬೆಳೆಯುತ್ತಿದ್ದ ಸಮಯದಲ್ಲಿ ಜಗಿತ್ಯಾಲ ಜಿಲ್ಲೆಗೆ ಹೋಗಿದ್ದೆ. ಅಲ್ಲಿ ಅಭಿಮಾನಿಗಳು ನನಗೆ ಅದ್ದೂರಿಯಾಗಿ ಸ್ವಾಗತ ನೀಡಿದರು. ಆದರೆ ಮುಂದೆ ಸಾಗಿದ ಬಳಿಕ ಕೆಲವರು ಮೊಟ್ಟೆಗಳನ್ನು ನನ್ನ ಮೇಲೆ ಎಸೆದಿದ್ದರು ಎಂದು ಹೇಳಿದ್ದಾರೆ.

ಇನ್ನೂ ಈ ಶೋ ನಲ್ಲಿ ಅನೇಕ ಪ್ರಶ್ನೆಗಳು ಮೆಗಾಸ್ಟಾರ್‍ ಚಿರಂಜೀವಿಯವರಿಗೆ ಎದುರಾಗಿದ್ದು, ಅದಕ್ಕೆ ಚಿರು ಸಹ ಉತ್ತರ ನೀಡಿದ್ದಾರೆ. ಸದ್ಯ ಈ ಶೋನ ಪ್ರೊಮೋ ಮಾತ್ರ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಯವರಿಗೆ ಈ ವರ್ಷ ಒಳ್ಳೆಯ ಒಪೆನಿಂಗ್ ಸಿಕ್ಕಿದೆ. ವಾಲ್ತೇರು ವೀರಯ್ಯ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಚಿರಂಜೀವಿ ಭೋಳಾಶಂಕರ್‍ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top