ಪದ್ಮವಿಭೂಷಣ ಮೆಗಾಸ್ಟಾರ್ ಚಿರಂಜೀವಿ ರವರ ಮನೆಗೆ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಶಿವಣ್ಣ ರವರನ್ನು ಆತ್ಮೀಯವಾಗಿ ಚಿರಂಜೀವಿ ಸ್ವಾಗತಿಸಿದ್ದಾರೆ. ಜೊತೆಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಿದ್ದು, ಇಬ್ಬರೂ ಒಟ್ಟಿಗೆ ಊಟ ಸವಿದಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಇಬ್ಬರೂ ಸ್ಟಾರ್ ನಟರು ಭೇಟಿಯಾಗಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,
ಕೆಲವು ದಿನಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರ ಮೆಗಾಸ್ಟಾರ್ ಚಿರಂಜೀವಿಯವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿತ್ತು. ಈ ಸಂತಸದ ಸುದ್ದಿಯನ್ನು ಚಿರಂಜೀವಿಯವರ ಅಭಿಮಾನಿಗಳು ಸಂಭ್ರಮದಿಂದ ಸ್ವೀಕರಿಸಿ, ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ತೆಲಂಗಾಣ ಸರ್ಕಾರ ಸಹ ಚಿರಂಜೀವಿಯವರನ್ನು ಅತ್ಯಂತ ಗೌರವಯುತವಾಗಿ ಸತ್ಕರಿಸಿದ್ದಾರೆ. ಅದಕ್ಕೂ ಮುಂಚೆ ರಾಮ್ ಚರಣ್ ಪತ್ನಿ ಉಪಾಸನಾ ಸಹ ಸ್ಪೇಷಲ್ ಪಾರ್ಟಿ ನೀಡಿದ್ದರು. ಈ ಹಾದಿಯಲ್ಲೇ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಸಹ ಮೆಗಾಸ್ಟಾರ್ ಚಿರಂಜೀವಿಯವರನ್ನು ಅಭಿನಂದಿಸಲು ಹೈದರಾಬಾದ್ ಗೆ ಭೇಟಿ ನೀಡಿದ್ದಾರೆ. ಚಿರು ರವರ ಮನೆಗೆ ಭೇಟಿ ನೀಡಿ ಅವರಿಗೆ ಹೂ ಗುಚ್ಛ ನೀಡಿ ಅಭಿನಂದನೆ ತಿಳಿಸಿದ್ದಾರೆ. ಬಳಿಕ ಕೆಲ ಸಮಯ ಕೆಲವೊಂದು ವಿಚಾರಗಳನ್ನು ಚರ್ಚಿಸಿಕೊಂಡಿದ್ದಾರೆ. ಬಳಿಕ ಶಿವರಾಜ್ ಕುಮಾರ್ ರವರಿಗಾಗಿ ಸ್ಪೇಷಲ್ ಲಂಚ್ ಸಹ ಏರ್ಪಡಿಸಿದ್ದರು. ಜೊತೆಗೆ ಕೆಲ ಸಮಯ ಇಬ್ಬರೂ ಕೆಲವೊಂದು ವಿಚಾರಗಳ ಬಗ್ಗೆ ಚರ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿಯನ್ನು ಮೆಗಾಸ್ಟಾರ್ ಚಿರಂಜೀವಿ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ನಲ್ಲಿರುವಂತೆ ನನ್ನನ್ನು ಅಭಿನಂದಿಸುವದಕ್ಕಾಗಿ ನನ್ನ ಪ್ರೀತಿ ಪಾತ್ರರಾದ ಶಿವಣ್ಣ ಬೆಂಗಳೂರಿನಿಂದ ಬಂದಿದ್ದು, ನನಗೆ ಅತೀವ ಸಂತಸ ತಂದುಕೊಟ್ಟಿದೆ. ಲಂಚ್ ನಲ್ಲಿ ಅದ್ಬುತವಾದ ಸಮಯವನ್ನು ಕಳೆದಿದ್ದಾರೆ. ಲೆಜೆಂಡರಿ ರಾಜ್ ಕುಮಾರ್ ಹಾಗೂ ಅವರ ಕುಟುಂಬದ ಜೊತೆಗೆ ನಮ್ಮ ಅನುಬಂಧವನ್ನು, ನೆನಪುಗಳನ್ನು ಗುರುತು ಮಾಡಿಕೊಂಡೆವು. ಇದು ನನಗೆ ಮತಷ್ಟು ಸಂತೋಷ ತಂದುಕೊಟ್ಟಿತ್ತು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಪೊಟೋಗಳನ್ನು ಕಂಡ ಸ್ಟಾರ್ ಗಳ ಅಭಿಮಾನಿಗಳು ಕಾಮೆಂಟ್ ಗಳನ್ನು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.
ಇನ್ನೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇತ್ತೀಚಿಗೆ ತೆಲುಗು ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ತೆಲುಗು ಸಿನೆಮಾಗಳಲ್ಲಿ ಸ್ಪೇಷಲ್ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ. ಈ ಹಿಂದೆ ನಂದಮೂರಿ ಬಾಲಕೃಷ್ಣರವರ ಗೌತಮಿಪುತ್ರ ಶಾತಕರ್ಣಿ ಸಿನೆಮಾದಲ್ಲಿ ನಟಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ರವರ ಜೈಲರ್ ಸಿನೆಮಾದಲ್ಲಿ ಸಹ ನಟಿಸಿದ್ದಾರೆ. ಇದೀಗ ರಾಮ್ ಚರಣ್ ರವರ ಸಿನೆಮಾದಲ್ಲೂ ಸಹ ಶಿವಣ್ಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ.