Film News

ಆ ರೀತಿ ಬದುಕುವ ಬದಲು ಸಾಯೋದಕ್ಕೂ ಸಿದ್ದವಾಗೋದು ಲೇಸು ಎಂದ ಮಂಚು ಮನೋಜ್, ವೈರಲ್ ಆದ ಟ್ವೀಟ್….!

ಇತ್ತೀಚಿಗಷ್ಟೆ ತೆಲುಗು ಸ್ಟಾರ್‍ ನಟ ಮೋಹನ್ ಬಾಬು ರವರ ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಗಲಾಟೆಯಾದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಸುಮಾರು ದಿನಗಳಿಂದ ಅವರಿಬ್ಬರ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೂ ಮಂಚು ಮನೋಜ್ ಅವರ ಗಲಾಟೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಅದು ಹಾಟ್ ಟಾಪಿಕ್ ಆಗಿತ್ತು.  ಇದೀಗ ಮನೋಜ್ ಮತ್ತೊಂದು ಟ್ವೀಟ್ ಮಾಡಿದ್ದು ಸಖತ್ ವೈರಲ್ ಆಗಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಮನೋಜ್ ತಮ್ಮ ಸಂಬಂಧಿಕರ ಮನೆಯಲ್ಲಿದ್ದಾಗ ಮಂಚು ವಿಷ್ಣು ಹೋಗಿ ಗಲಾಟೆ ಮಾಡಿದ್ದ ಎನ್ನಲಾದ ವಿಡಿಯೋ ಒಂದನ್ನು ಮನೋಜ್ ತನ್ನ ಟ್ವಿಟರ್‍ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು ಬಳಿಕ ಮೋಹನ್ ಬಾಬು ಸಹ ಈ ಬಗ್ಗೆ ಇಬ್ಬರಿಗೂ ಬುದ್ದಿ ಹೇಳಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮಂಚು ಲಕ್ಷ್ಮೀ ಹಾಗೂ ಮೋಹನ್ ಬಾಬು ಇಬ್ಬರ ನಡುವಣ ವಿವಾದವನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಮನೋಜ್ ಟ್ವೀಟ್ ಮೂಲಕ ಕೆಲವೊಂದು ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ ಸದ್ಯ ಅವರ ಹೇಳಿಕೆಗಳು ವೈರಲ್ ಆಗುತ್ತಿವೆ.

ಮಂಚು ಮನೋಜ್ ಹಂಚಿಕೊಂಡ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಮನೋಜ್ ತನ್ನ ಅಣ್ಣ ವಿಷ್ಣು ಜೊತೆಗಿನ ವಿವಾದದ ಬಳಿಕ ನೇರವಾಗಿ ಮಾತನಾಡುವಂತಹ ಅವಕಾಶ ಇಲ್ಲದ ಕಾರಣ ತನ್ನ ಅಭಿಪ್ರಾಯಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಮನೋಜ್ ಹಾಕಿದ ಪೋಸ್ಟ್ ತುಂಬಾ ಶಾಕಿಂಗ್ ಆಗಿದೆ. ಟ್ವಿಟರ್‍ ಮೂಲಕ ಮನೋಜ್ ಕೊಟೇಶನ್ ಪೋಸ್ಟರ್‍ ಗಳನ್ನು ಹಂಚಿಕೊಂಡಿದ್ದಾರೆ. ಒಂದು ಪೋಸ್ಟರ್‍ ನಲ್ಲಿ ತಪ್ಪುಗಳನ್ನು ನೋಡಿ ನೋಡದಂಗೆ ಸುಮ್ಮನೆ ಬಿಡಲು ಸಾಧ್ಯವಿಲ್ಲವಲ್ಲ, ನಾನು ವಾಸ್ತವಕ್ಕಾಗಿ ಹೋರಾಡುತ್ತಾ ಸಾಯುತ್ತೇನೆ ಎಂದೂ, ಮತ್ತೊಂದು ಪೋಸ್ಟ್ ನಲ್ಲಿ ಕ್ರಿಯೇಟಿವಿಟಿಗೆ ನೆಗೆಟಿವಿಟಿ ಶತ್ರು ಎಂದು ಎರಡು ಕೋಟ್ಸ್ ಇರುವಂತಹ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಅಷ್ಟೇಅಲ್ಲದೇ ಈ ಪೋಸ್ಟ್ ಗೆ ಬದುಕಿ, ಬದುಕಲು ಬಿಡಿ ಎಂದು ಕ್ಯಾಪ್ಷನ್ ನೀಡಿರುವುದು ತುಂಬಾ ಆಸಕ್ತಿಕರವಾಗಿದೆ. ಇನ್ನೂ ಮನೋಜ್ ರವರ ಈ ಪೋಸ್ಟ್ ಅಣ್ಣ ತಮ್ಮಂದಿರ ವಿವಾದ ಎಲ್ಲಿವರೆಗೂ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಅಭಿಮಾನಿಗಳೂ ಸಹ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಅವರ ಅಕ್ಕ ಮಂಚು ಲಕ್ಷ್ಮೀ ಸಹ ಅವರಿಬ್ಬರ ನಡುವೆ ಸಂದಾನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top