Film News

ನಮ್ಮ ಮದುವೆ ಆ ಶಿವನ ಆಜ್ಞೆ, ಮೋನಿಕಾ ಮಗು ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ತಿರುಮಲದಲ್ಲಿ ಮನೋಜ್ ಹೇಳಿಕೆ….!

ಕೆಲವು ದಿನಗಳ ಹಿಂದೆಯಷ್ಟೆ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಮದುವೆ ಅದ್ದೂರಿಯಾಗಿ ನೆರವೇರಿದೆ. ಇಡೀ ಮದುವೆಯ ಜವಾಬ್ದಾರಿಯನ್ನು ಮನೋಜ್ ಸಹೋದರಿ ಮಂಚು ಲಕ್ಷ್ಮೀ ವಹಿಸಿಕೊಂಡಿದ್ದರು. ಮದುವೆಯಾದ ಬಳಿಕ ನವ ದಂಪತಿ ತಿರುಮಲಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಇದೇ ವೇಳೆ ಅಲ್ಲಿನ ಮಿಡಿಯಾದವರ ಕಣ್ಣಿಗೆ ಈ ಜೋಡಿ ಕಾಣಿಸಿಕೊಂಡಿದೆ. ಈ ವೇಳೆ ಮನೋಜ್ ಪ್ರೀತಿ, ಮದುವೆ ಹಾಗೂ ಮೋನಿಕಾ ಮಗನ ಬಗ್ಗೆ ಮಾತನಾಡಿದ್ದಾರೆ.

ಮದುವೆಯಾದ ಬಳಿಕ ಮೊದಲ ಬಾರಿಗೆ ತಿರುಮಲದಲ್ಲಿನ ತಿಮ್ಮಪ್ಪನ ದರ್ಶನಕ್ಕೆ ತೆರಳಿದ ಮನೋಜ್ ಹಾಗೂ ಮೋನಿಕಾ ಅಲ್ಲಿದ್ದ ಮಿಡಿಯಾದೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಮನೋಜ್ ಮಾತನಾಡುತ್ತಾ ನಾವಿಬ್ಬರೂ ಮದುವೆಯಾಗಿ ಮೋನಿಕಾ ಮನೆಯಿಂದ ತಿರುಮಲಕ್ಕೆ ಬಂದಿದ್ದೇವೆ. ಈ ವೇಳೆ ಒಂದನ್ನು ಹೇಳಲು ಬಯಸುತ್ತೇನೆ. ಜೀವನದಲ್ಲಿ ಏನದಾರೂ ಸೋಲಬಹುದು ಆದರೆ ಪ್ರೀತಿ ಎಂದಿಗೂ ಸೋಲಬಾರದು ಎಂಬುದನ್ನು ನಂಬುತ್ತೇನೆ. ಈ ದಿನ ಪ್ರೀತಿ ಜಯಿಸಿದೆ. ನಮ್ಮ ತಂದೆಯ ಆರ್ಶಿವಾದ ಹಾಗೂ ಸಹೋದರಿಯ ಸಪೋರ್ಟ್ ಕಾರಣದಿಂದ ನಾವಿಬ್ಬರೂ ಒಂದಾಗಿದ್ದೇವೆ. ನಮಗೆ ಆರ್ಶೀವಾದ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಮದುವೆಯ ಸಮಯದಲ್ಲಿ ಮನೋಜ್ ಶಿವನ ಆಜ್ಞೆಯಂತೆ ಮದುವೆಯಾಗಿದೆ ಎಂಬರ್ಥ ಬರುವಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಸಹ ಮಾತನಾಡಿದ ಮನೋಜ್ ಶಿವನ ಆಜ್ಞೆಯಿಲ್ಲದೇ ಇರುವೆ ಸಹ ಕಚ್ಚುವುದಿಲ್ಲ.12 ವರ್ಷಗಳಿಂದ ಮೋನಿಕಾ ನನ್ನ ಸ್ನೇಹಿತೆಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಅನೇಕ ವಿರೋಧಗಳನ್ನು ಸಹ ಎದುರಿಸಿದ್ದೇವೆ. ಮೋನಿಕಾ ಮಗನ ಬಗ್ಗೆ ಸಹ ಯೋಚನೆ ಮಾಡಿದ್ದೇವೆ. ಹೇಗಾದರೂ ಸರಿ ಒಳ್ಳೆಯ ಜೀವನಕ್ಕಾಗಿ ಒಂದು ನಿರ್ಧಾರಕ್ಕೆ ಬರಲು ತೀರ್ಮಾನ ತೆಗೆದುಕೊಂಡೆವು. ಶಿವನ ಆರ್ಶಿವಾದದೊಂದಿಗೆ ಎಲ್ಲರೂ ಮುಂದೆ ನಿಂತು ನಮ್ಮ ಮದುವೆ ಮಾಡಿದ್ದಾರೆ. ಮೋನಿಕಾ ರೆಡ್ಡಿ ಮಗ ಧೈರವ್ ರೆಡ್ಡಿ ಸಂಪೂರ್ಣ ಜವಾಬ್ದಾರಿಯನ್ನು ಮನೋಜ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಕಾರಣದಿಂದಲೇ ಆ ಪೋಸ್ಟ್ ಹಾಕಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಳಿಕ ರಾಜಕೀಯದ ಬಗ್ಗೆ ಸಹ ಮಾತನಾಡಿದ್ದು ಸದ್ಯ ನಾನು ರಾಜಕೀಯದಿಂದ ದೂರ ಇರುತ್ತೇನೆ. ಆದರೆ ಪ್ರಜಾಸೇವೆ ಮಾಡುತ್ತೇನೆ. ಯಾರಿಗೆ ಸಮಸ್ಯೆ ಬಂದರೂ ನಾನು ಮುಂದೆ ಇರುತ್ತೇನೆ ಎಂದಿದ್ದಾರೆ. ಇನ್ನೂ ದೇವರ ದಯೆಯಿಂದ ಮತ್ತೆ ಕೆರಿಯರ್‍ ಪ್ರಾರಂಭಿಸಿದ್ದೇನೆ. ವಾಟ್ ದಿ ಫಿಸ್ ಸಿನೆಮಾ ಶೂಟಿಂಗ್ ಸಹ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದೇ ವರ್ಷ ಆಗಸ್ಟ್ ಮಾಹೆಯಲ್ಲಿ ಈ ಸಿನೆಮಾ ತೆರೆಗೆ ಬರಲಿದೆ ಎನ್ನಲಾಗಿದೆ.

Most Popular

To Top