News

ಉತ್ತರ ಪ್ರದೇಶದಲ್ಲೊಬ್ಬ ಬೇಡರ ಕಣ್ಣಪ್ಪನನ್ನು ಮೀರಿಸುವಂತಹ ಶಿವನ ಭಕ್ತ, ಭಕ್ತಿಯ ಪರಾಕಾಷ್ಟೆ ಅಂದ್ರೇ ಇದೇನಾ? ಶಿವನಿಗೆ ತಲೆ ಕತ್ತರಿಸಿ ಕೊಡಲು ಮುಂದಾದ ಭಕ್ತ…..!

ಪುರಾಣಗಳಲ್ಲಿ ನಾವೆಲ್ಲರೂ ಶಿವನ ಮಹಾ ಭಕ್ತ ಬೇಡರ ಕಣ್ಣಪ್ಪರ ಬಗ್ಗೆ ಕೇಳಿದ್ದೇವೆ. ಬೇಡರ ಕಣ್ಣಪ್ಪನಿಗಿಂತ ಮಹಾ ಭಕ್ತನೋರ್ವ ಉತ್ತರ ಪ್ರದೇಶದಲ್ಲಿದ್ದಾನೆ. ಹೌದು ಬೇಡರ ಕಣ್ಣಪ್ಪ ಶಿವನಿಗೆ ನೇತ್ರಗಳನ್ನು ನೀಡಿದ ಹಾಗೆ ಶಿವನಿಗೆ ಈ ಭಕ್ತ ತನ್ನ ತಲೆಯನ್ನೇ ಕತ್ತರಿಸಿ ನೀಡಲು ಮುಂದಾಗಿದ್ದಾರೆ ಮರ ಕತ್ತಿರಿಸುವಂತಹ ಯಂತ್ರದಿಂದ ತಲೆಯನ್ನು ಕತ್ತಿರಿಸಿ ನೀಡಲು ಮುಂದಾದಂತಹ ಘಟನೆಯೊಂದು ಉತ್ತರ ಪ್ರದೇಶದ ಲಲಿತ್ ಪುರ ಜಿಲ್ಲೆಯ ಸದರ್‍ ಕೊತ್ವಾಲಿ ವ್ಯಾಪ್ತಿಯ ರಘುನಾಥಪುರ ಗ್ರಾಮದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಲಲಿತ್ ಪುರ ಜಿಲ್ಲೆಯಲ್ಲಿ ಶಿವನ ಪರಮ ಭಕ್ತನೊರ್ವನಿದ್ದಾನೆ. ಮಂಗಳವಾರ ಮುಂಜಾನೆ ಶಿವನ ಭಕ್ತ ಮರಗಳನ್ನು ಕತ್ತರಿಸುವಂತಹ ಯಂತ್ರದಿಂದ ತಲೆಯನ್ನು ಕತ್ತರಿಸಿ ಮನೆಯ ಬಳಿಯಿರುವ ಶಿವನ ದೇವಾಲಯಕ್ಕೆ ಅರ್ಪಿಸಲು ಯತ್ನಿಸಿದ್ದಾನೆ. ಇನ್ನೂ ಈ ಘಟನೆಯ ಇಡೀ ಊರಿನ ಜನರನ್ನು ಶಾಕ್ ಆಗುವಂತೆ ಮಾಡಿದೆ. ಚಿಂತಾಜನಕ ಸ್ಥಿತಿಯಲ್ಲಿರುವಂತಹ ಆ ಶಿವನ ಭಕ್ತನನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಆ ಯುವಕನನ್ನು ದೀಪಕ್ ಎಂದು ಗುರ್ತಿಸಲಾಗಿದೆ. ದೀಪಕ್ ಶಿವನ ಪರಮ ಭಕ್ತನಾಗಿದ್ದಾನೆ. ಶ್ರದ್ದಾ ಭಕ್ತಿಯಿಂದ ಪ್ರತಿನಿತ್ಯ ಶಿವನನ್ನು ಪೂಜಿಸುತ್ತಿದ್ದ. ಇನ್ನೂ ಕೆಲವು ದಿನಗಳಿಂದಲೂ ಶಿವನಿಗೆ ತನ್ನ ತಲೆಯನ್ನು ಸಮರ್ಪಿಸಬೇಕೆಂದು ಹೇಳಿಕೊಳ್ಳುತ್ತಿದ್ದ. ಇದನ್ನು ನೋಟ್ ಬುಕ್ ನಲ್ಲಿ ಸಹ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

ರಘುನಾಥಪುರದ ನಿವಾಸಿ ದೀಪಕ್ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಂಗಳ ಮುಂಜಾನೆ 4 ಗಂಟೆ ವೇಳೆಗೆ ಅವರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ತೆರಳಿದ್ದರಂತೆ. ಪೂಜೆ ನಡೆಯುತ್ತಿದ್ದ ವೇಳೆ ದೇವರಿಗೆ ನನ್ನ ತಲೆಯನ್ನು ಸಮರ್ಪಿಸುತ್ತೇನೆ ಎಂದು ಹೇಳಿ ಮರ ಕತ್ತರಿಸುವಂತಹ ಯಂತ್ರವನ್ನು ತೆಗೆದುಕೊಂಡು ದೇವಸ್ಥಾನದ ಮುಂಭಾಗ ತಲೆಯನ್ನು ಕತ್ತರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ದೇವಸ್ಥಾನದ ಅರ್ಚಕ ಮಂತ್ರಗಳ ಪಠಿಸುವಾಗಲೇ ತನ್ನ ಕತ್ತನ್ನು ಕತ್ತರಿಸಿಕೊಳ್ಳಲು ದೀಪಕ್ ಶುರು ಮಾಡಿದ್ದಾನೆ. ಇದನ್ನು ಕಂಡ ಇತರರು ಶಾಕ್ ಆಗಿದ್ದಾರೆ. ಬಳಿಕ ತೀವ್ರ ಅಸ್ವಸ್ತ ಸ್ಥಿತಿಯಲ್ಲಿದ್ದ ದೀಪಕ್ ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ದೀಪಕ್ ಸ್ಥೀತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

Most Popular

To Top