Film News

ಲೇಡಿ ವಿಲನ್ ವರಲಕ್ಷ್ಮೀ ಎಂಗೇಜ್ ಮೆಂಟ್ ಬಗ್ಗೆ ಆಕೆಯ ಮಾಜಿ ಪ್ರಿಯಕರ ವಿಶಾಲ್ ಹೇಳಿದ್ದು ಏನು ಗೊತ್ತಾ?

ಬಣ್ಣದ ಲೋಕದಲ್ಲಿ ಹಿರೋಯಿನ್ ಆಗಿ ಎಂಟ್ರಿ ಕೊಟ್ಟ ವರಲಕ್ಷ್ಮೀ ಶರತ್ ಕುಮಾರ್‍ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಸಿನಿಜರ್ನಿ ಸಾಗಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆಯ ನಿಶ್ವಿತಾರ್ಥ ಸಹ ನಡೆದಿದೆ. ಈ ಕುರಿತು ವರಲಕ್ಷ್ಮೀ ಎಂಗೇಜ್ ಮೆಂಟ್ ಬಗ್ಗೆ ರೂಮರ್‍ ಪ್ರಿಯಕರ ವಿಶಾಲ್ ನೀಡಿದ ಕಾಮೆಂಟ್ಸ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ತೆಲುಗು, ತಮಿಳು ಹಾಗೂ ಕನ್ನಡ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರೀಯರಾಗಿದ್ದಾರೆ. ಆಕೆ ಮುಂಬೈ ಮೂಲದ ಆರ್ಟ್ ಗ್ಯಾಲರಿಸ್ಟ್ ಆದ ನಿಕೋಲಾಯ್ ಸಚ್ ದೇವ್ ಎಂಬಾತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮ ಕುಟುಂಬ ಸದಸ್ಯರು ಹಾಗೂ ಆಪ್ತರ ಸ್ನೇಹಿತರ ನಡುವೆ ನೆರವೇರಿದೆ. ಸುಮಾರು 14 ವರ್ಷಗಳಿಂದ ಅವರಿಬ್ಬರು ಸ್ನೇಹಿತರಾಗಿದ್ದಾರೆ. ಪೋಷಕರ ಒಪ್ಪಿಗೆಯಂತೆ ಮಾ.1 ರಂದು ಉಂಗುರಗಳನ್ನು ಬದಲಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ಈ ಜೋಡಿಯ ಮದುವೆ ಸಹ ನಡೆಯಲಿದೆ ಎನ್ನಲಾಗುತ್ತಿದೆ.

ಈ ಹಿಂದೆ ತಮಿಳಿನ ನಟ ವಿಶಾಲ್ ಹಾಗೂ ವರಲಕ್ಷ್ಮೀ ಪ್ರೀತಿಸಿಕೊಳ್ಳುತ್ತಿದ್ದರು ಎಂಬ ರೂಮರ್‍ ಕೇಳಿಬಂದಿತ್ತು. ಇಬ್ಬರೂ ತುಂಬಾ ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದರು, ಶೀಘ್ರದಲ್ಲೇ ಈ ಜೋಡಿಯ ಮದುವೆ ನಡೆಯುತ್ತದೆ ಎಂಬ ರೂಮರ್‍ ಸಹ ಕೇಳಿಬಂದಿತ್ತು. ಆದರೆ ಇಬ್ಬರ ನಡುವೆ ಬ್ರೇಕಪ್ ಆಯ್ತು ಎಂಬ ಸುದ್ದಿ ಸಹ ವೈರಲ್ ಆಯ್ತು. ಇಂದಿಗೂ ಸಹ ವಿಶಾಲ್ ಮದುವೆಯಾಗಿಲ್ಲ. ಆದರೆ ಕೆಲವು ದಿನಗಳ ಹಿಂದೆಯಷ್ಟೆ ವರಲಕ್ಷ್ಮೀ ಎಂಗೇಜ್ ಮೆಂಟ್ ಮಾಡಿಕೊಂಡರು. ಈ ಕುರಿತು ವಿಶಾಲ್ ರಿಯಾಕ್ಷನ್ ಗಾಗಿ ಅನೇಕರು ಕಾಯುತ್ತಿದ್ದರು. ಇದೀಗ ಈ ಕುರಿತು ವಿಶಾಲ್ ರಿಯಾಕ್ಟ್ ಆಗಿದ್ದಾರೆ. ವರಲಕ್ಷ್ಮೀ  ತಮಿಳು ಸಿನೆಮಾಗಳ ಜೊತೆಗೆ ತೆಲುಗಿನಲ್ಲೂ ಸಹ ಮುನ್ನುಗ್ಗುತ್ತಿದ್ದಾರೆ. ಟಾಲಿವುಡ್ ನಲ್ಲೂ ಸಹ ಆಕೆಗೆ ಒಳ್ಳೆಯ ಮಾರ್ಕೆಟ್ ಇದೆ. ಹನುಮಾನ್ ಸಿನೆಮಾದಲ್ಲಿ ವರಲಕ್ಷ್ಮೀ ಪಾತ್ರ ತುಂಬಾನೆ ಅದ್ಬುತವಾಗಿದೆ. ಜೊತೆಗೆ ಕಡಿಮೆ ಸಮಯದಲ್ಲೆ ಆಕೆ ಉನ್ನತ ಸ್ಥಾನಕ್ಕೆ ತಲುಪಿದ್ದು ಖುಷಿಯಾಗಿದೆ. ಇದೀಗ ಫ್ಯಾಮಿಲಿ ಲೈಫ್ ನೊಳಗೆ ಕಾಲಿಡುತ್ತಿದ್ದು ಆಕೆಗೆ ಒಳ್ಳೆಯದಾಗಲಿ ಎಂದು ಶುಭಾಷಯ ಕೋರಿದ್ದಾರೆ.

Most Popular

To Top