ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ತಮಿಳು ಮಾತ್ರವಲ್ಲದೇ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಳ್ಳುವುದರ ಜೊತೆಗೆ ಸ್ಟಾರ್ ಡಮ್ ಸಹ ಪಡೆದುಕೊಂಡಿದ್ದಾರೆ. ಸಿನೆಮಾಗಳಲ್ಲೂ ಸಹ ಸೂರ್ಯ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅನೇಕ ಸೂಪರ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡ ಸೂರ್ಯ ರವರ ವೈಯುಕ್ತಿಕ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಕುಟುಂಬದಲ್ಲಿ ವಿಬೇದಗಳು ಸೃಷ್ಟಿಯಾಗಿ ಆತ ಕುಟುಂಬದಿಂದ ಬೇರೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಚಕ್ಕರ್ ಹೊಡೆಯುತ್ತಿದೆ.
ಸೌತ್ ಸಿನಿರಂಗದಲ್ಲಿ ಸಿನೆಮಾಗಳ ಮೂಲಕ ಮಾತ್ರವಲ್ಲದೇ ವೈಯುಕ್ತಿಕವಾಗಿಯೂ ಸಹ ಫೇಮಸ್ ಆದ ನಟರ ಸಾಲಿನಲ್ಲಿ ಸೂರ್ಯ ಮೊದಲ ಸ್ಥಾನದಲ್ಲಿರುತ್ತಾರೆ. ಅವರ ವ್ಯಕ್ತಿತ್ವದ ಕಾರಣದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ತುಂಬಾ ಸೌಮ್ಯ ಮನೋಭಾವವುಳ್ಳವರಾಗಿದ್ದಾರೆ ಸೂರ್ಯ. ಸಿನೆಮಾಗಳ ಜತೆಗೆ ಕುಟುಂಬದೊಂದಿಗೆ ಸೇರಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿದ್ದಾರೆ. ಅಗರಂ ಫೌಂಡೇಷನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಆ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸಹ ನೀಡುತ್ತಿದ್ದಾರೆ. ಇನ್ನೂ ಸೂರ್ಯರವರಿಗೆ ಅವರ ತಂದೆ ಶಿವಕುಮಾರ್, ತಮ್ಮ ಕಾರ್ತಿ ಸಹ ಸಾಥ್ ನೀಡುತ್ತಿರುತ್ತಾರೆ. ಇದೀಗ ಸೂರ್ಯ ಕುಟುಂಬಕ್ಕೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ಸೂರ್ಯ ತನ್ನ ಕುಟುಂಬದೊಂದಿಗೆ ಬೇರೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅವರು ಬೇರೆಯಾಗಲು ಕಾರಣ ಜ್ಯೋತಿಕಾ ರವರೇ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇದಕ್ಕೆ ತಮಿಳು ಸೀನಿಯರ್ ನಟ ಬೈಲ್ವಾನ್ ರಂಗನಾಥ್ ಮಾಡಿದ ಕಾಮೆಂಟ್ ಗಳ ಆಧಾರದ ಮೇಲೆ ಈ ರೀತಿಯ ರೂಮರ್ ಗಳು ಹರಿದಾಡುತ್ತಿವೆ. ಕೆಲವು ದಿನಗಳಿಂದ ಸೂರ್ಯ ಹಾಗೂ ಅವರ ತಂದೆ ಹಾಗೂ ಸಹೋದರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಸುದ್ದಿ ಕೇಳಿಬರುತ್ತಿದೆ. ಸೂರ್ಯ ಜ್ಯೋತಿಕಾ ರನ್ನು ಮದುವೆಯಾಗುವುದು ಸೂರ್ಯ ತಂದೆ ಶಿವಕುಮಾರ್ ರವರಿಗೆ ಇಷ್ಟವಿರಲಿಲ್ಲವಂತೆ. ಆದರೆ ಮದುವೆಯಾದ ಬಳಿಕ ಒಪ್ಪಿಕೊಂಡರಂತೆ. ಮದುವೆಯಾದ ಬಳಿಕ ಜ್ಯೋತಿಕಾ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ನಟಿಸಲು ಮುಂದಾಗಿರುವ ಕಾರಣ ಶಿವಕುಮಾರ್ ಅಸಮಧಾನಗೊಂಡಿದ್ದಾರಂತೆ. ಇದರಿಂದ ತಂದೆ ಹಾಗೂ ಮಗನ ನಡುವೆ ಕಲಹಗಳು ಏರ್ಪಟ್ಟಿದೆ ಎಂದು ಕಾಲಿವುಡ್ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.
ಇನ್ನೂ ಈ ವಿಬೇದಗಳು ಹೆಚ್ಚಾಗುತ್ತಿರುವ ಕಾರಣದಿಂದ ಸೂರ್ಯ ತನ್ನ ಕುಟುಂಬದಿಂದ ಬೇರೆಯಾಗಲಿದ್ದಾರೆ ಎಂಬ ನಿರ್ಣಯ ತೆಗೆದುಕೊಂಡಿದ್ದಾರಂತೆ. ಜೊತೆಗೆ ಸೂರ್ಯ ತನ್ನ ಕುಟುಂಬದೊಂದಿಗೆ ಮುಂಬೈನಲ್ಲೇ ನೆಲೆಯೂರಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಮಾತ್ರ ಹೊರಬಂದಿಲ್ಲ. ಈ ಬಗ್ಗೆ ಸೂರ್ಯ ಅಥವಾ ಅವರ ಕುಟುಂಬ ಯಾವ ರೀತಿ ರಿಯಾಕ್ಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.