Film News

ಸ್ಟಾರ್ ನಟ ಧನುಷ್ ರನ್ನು ಬ್ಯಾನ್ ಮಾಡಬೇಕೆಂದ ಕಾಲಿವುಡ್, ನಿರ್ಮಾಪಕರ ನಿರ್ಣಯವಂತೆ, ಕಾರಣವೇನು?

ಸಿನಿರಂಗದಲ್ಲಿ ಕೆಲವರು ಬ್ಯಾಕ್ ಸಪೋರ್ಟ್, ಸ್ಟಾರ್‍ ಕಿಡ್ ಎಂಬ ವಾರಸತ್ವ ಇದ್ದರೂ ಸಹ ಅದನ್ನು ಬಳಸಿಕೊಳ್ಳದೇ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಗಳಾಗಿದ್ದಾರೆ. ಈ ಸಾಲಿಗೆ ಕಾಲಿವುಡ್ ಸ್ಟಾರ್‍ ನಟ ಧನುಷ್ ಒಬ್ಬರಾಗಿದ್ದಾರೆ. ತಮಿಳಿನ ಜೊತೆಗೆ ತೆಲುಗಿನಲ್ಲಿ ಸಹ ಧನುಷ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.  ಇದೀಗ ಧನುಷ್ ರನ್ನು ಕಾಲಿವುಡ್ ನಲ್ಲಿ ಬ್ಯಾನ್ ಮಾಡುತ್ತಿದ್ದಾರಂತೆ. ಅವರಿಗೆ ತಮಿಳು ನಿರ್ಮಾಪಕರು ರೆಡ್ ಕಾರ್ಡ್ ನೀಡಲು ಸಿದ್ದರಾಗಿದ್ದಾರಂತೆ. ಅಷ್ಟಕ್ಕೂ ಈ ನಿರ್ಣಯದ ಹಿಂದಿರುವ ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ನಟ ಧನುಷ್ ಇತ್ತೀಚಿಗಷ್ಟೆ ಸಾರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡಿತ್ತು. ಸದ್ಯ ಆತ ಕೆಲವೊಂದು ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಕಾಲಿವುಡ್ ಬಡಾ ನಿರ್ಮಾಪಕರು ಧನುಷ್ ವಿರುದ್ದ ಸಂಚಲನಾತ್ಮಕ ನಿರ್ಣಯ ತೆಗೆದುಕೊಳ್ಳಲಿದ್ದಾರಂತೆ. ತಮಿಳು ನಿರ್ಮಾಪಕರ ಮಂಡಳಿ ವತಿಯಿಂದ ಧನುಷ್ ಗೆ ರೆಡ್ ಕಾರ್ಡ್ ನೀಡಲು ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಸಿದ್ದತೆಗಳೂ ಸಹ ನಡೆಯುತ್ತಿವೆಯಂತೆ. ಈ ನಿರ್ಣಯ ಏನಾದರೂ ನಿಜ ಆದರೇ ಧನುಷ್ ಜೊತೆಗೆ ಯಾವುದೇ ನಿದೇಶಕನಾಗಲೀ ಅಥವಾ ನಿರ್ಮಾಪಕರಾಗಲಿ ಸಿನೆಮಾ ಮಾಡಲು ಸಾಧ್ಯವಿಲ್ಲ. ಇನ್ನೂ ತಮಿಳು ನಿರ್ಮಾಪಕರ ಮಂಡಳಿ ಧನುಷ್ ವಿರುದ್ದ ಅಂತಹ ನಿರ್ಣಯ ತೆಗೆದುಕೊಳ್ಳಲು ಏನು ಕಾರಣ ಎಂಬ ಬಗ್ಗೆ ಸಹ ಚರ್ಚೆಗಳು ಶುರುವಾಗಿದೆ.

ನಟ ಧನುಷ್ ತುಂಬಾ ಸಿನ್ಸಿಯಾರಿಟಿ, ಕಮಿಟ್ ಮೆಂಟ್ ನಿಂದ ಕೆಲಸ ಮಾಡುತ್ತಾರೆ. ಅಂತಹ ಧನುಷ್ ವಿರುದ್ದ ಖ್ಯಾತ  ನಿರ್ಮಾಣ ಸಂಸ್ಥೆ ಶ್ರೀ ತೆಂಡ್ರಲ್ ಫಿಲಂಸ್ ನಿರ್ಮಾಣದಲ್ಲಿ ಸಿನೆಮಾ ಒಂದರಲ್ಲಿ ನಟಿಸುವುದಾಗಿ ಮಾತು ಕೊಟ್ಟಿದ್ದರಂತೆ. ಅದಕ್ಕಾಗಿ ಧನುಷ್ ಅಡ್ವಾನ್ಸ್ ಸಹ ತೆಗೆದುಕೊಂಡಿದ್ದಾರಂತೆ. ಅಡ್ವಾನ್ಸ್ ಪಡೆದುಕೊಂಡು ತಿಂಗಳುಗಳು ಕಳೆದರು ಸಿನೆಮಾ ಮಾತ್ರ ಮಾಡಲಿಲ್ಲವಂತೆ. ಈ ಬಗ್ಗೆ ಧನುಷ್ ರವರನ್ನು ಕೇಳುತ್ತಿದ್ದರೂ ಸಹ ಇಲ್ಲಿಯವರೆಗೂ ಸಿನೆಮಾ ಮಾಡಲಿಲ್ಲವಂತೆ. ಇದರಿಂದ ಸದರಿ ನಿರ್ಮಾಣ ಸಂಸ್ಥೆ ತಮಿಳು ನಿರ್ಮಾಪಕರ ಮಂಡಲಿಗೆ ದೂರು ನೀಡಿದೆ. ಈ ಕಾರಣದಿಂದ ಧನುಷ್ ವಿರುದ್ದ ಕ್ರಮ ತೆಗೆದುಕೊಳ್ಳಲು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಇನ್ನೂ ಧನುಷ್ ಗೆ ರೆಡ್ ಕಾರ್ಡ್ ಜಾರಿ ಮಾಡಲು ನಿರ್ಮಾಪಕರ ಯೋಚನೆ ಮಾಡಿದ್ದಾರೆ ಎಂಬ ಗುಸುಗುಸು ಸಹ ಕೇಳಿಬರುತ್ತಿದೆ. ಧನುಷ್ ಗೆ ರೆಡ್ ಕಾರ್ಡ್ ವಿತರಣೆ ಮಾಡಿದರೇ ತಮಿಳು ಸಿನಿರಂಗದಲ್ಲಿ ಇದು ಸಂಚಲನವಾಗಲಿದೆ. ಇನ್ನೂ ಈ ಸುದ್ದಿ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಧನುಷ್ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದು ಕಾದು ನೋಡಬೇಕಿದೆ.

Most Popular

To Top